ಸರಕಾರ-ಖಾಸಗಿ ಸಹಭಾಗಿತ್ವದಿಂದ ಕ್ರೀಡಾರಂಗ ಬೆಳಗಲು ಸಾಧ್ಯ


Team Udayavani, Aug 28, 2021, 6:40 AM IST

ಸರಕಾರ-ಖಾಸಗಿ ಸಹಭಾಗಿತ್ವದಿಂದ ಕ್ರೀಡಾರಂಗ ಬೆಳಗಲು ಸಾಧ್ಯ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ದೇಶದ ಕ್ರೀಡಾರಂಗದತ್ತ ಒಮ್ಮೆ ದೃಷ್ಟಿ ಹಾಯಿಸಿದಾಗ ನಮಗೆ ನಿರಾಶೆಯಾಗುವುದು ಸಹಜ. ಹಾಗೆಂದು ನಮ್ಮಲ್ಲಿ ಪ್ರತಿಭೆಗಳಿಗೇನೂ ಕೊರತೆ ಇಲ್ಲ. ಬೃಹತ್‌ ಜನಸಂಖ್ಯೆ, ಯುವಜನತೆಯನ್ನು ಒಳಗೊಂಡ ದೇಶ ಕ್ರೀಡೆಯಲ್ಲಿ ಹಿನ್ನಡೆ ಕಾಣಲು ಇಡೀ ವ್ಯವಸ್ಥೆಯಲ್ಲಿನ ಲೋಪಗಳೇ ಕಾರಣ. ಸೂಕ್ತ ಮಾರ್ಗದರ್ಶನ, ತರಬೇತಿ, ಪ್ರೋತ್ಸಾಹ, ಹಣಕಾಸು ನೆರವು ನೀಡಿದ್ದೇ ಆದಲ್ಲಿ ದೇಶ ಕ್ರೀಡಾ ಕ್ಷೇತ್ರದಲ್ಲಿ ಮಿಂಚಲು ಸಾಧ್ಯ. ಈ ನಿಟ್ಟಿನಲ್ಲಿ ಸರಕಾರ ಮತ್ತು ಖಾಸಗಿ ಸಹಭಾಗಿತ್ವ ಅತೀಮುಖ್ಯ.

ಕ್ರೀಡಾರಂಗದ ಶಕ್ತಿ ಇರುವುದೇ ಯುವ ಜನರ ಅಂತಃಶಕ್ತಿಯಲ್ಲಿ. ಇಡೀ ವಿಶ್ವದಲ್ಲಿ 30 ವರ್ಷದೊಳಗಿನ ಯುವಜನರು ಭಾರತದಲ್ಲಿ ಇರುವಷ್ಟು ಬೇರೆಲ್ಲೂ ಇಲ್ಲ. ಈ ದೃಷ್ಟಿಯಲ್ಲಿ ಕ್ರೀಡಾರಂಗದಲ್ಲಿ ನಾವು ವಿಶ್ವದಲ್ಲೇ ಮುಂಚೂಣಿ ಯಲ್ಲಿರಬೇಕಾಗಿತ್ತು. ಸ್ವಾತಂತ್ರ್ಯದ ಬಳಿಕವಾದರೂ ನಾವು ವಿಶ್ವದ ಕ್ರೀಡಾರಂಗದಲ್ಲಿ ಮಿಂಚಬೇಕಿತ್ತು. ಹಾಗಾಗಿಲ್ಲ ಎಂಬುದು ನೋವಿನ ವಿಚಾರ. ಈ ಬಗ್ಗೆ ಇನ್ನಾದರೂ ನಾವು ಗಂಭೀರವಾಗಿ ಯೋಚಿಸಿ ಹೆಜ್ಜೆ ಇರಿಸಬೇಕಾಗಿದೆ.
ಭಾರತದ ಭೌಗೋಳಿಕ ವಾತಾವರಣ ಎಲ್ಲ ಬಗೆಯ ದೈಹಿಕ ಚಟುವಟಿಕೆಗಳಿಗೆ ಹೇಳಿ ಮಾಡಿಸಿದಂತಿದೆ. ಉತ್ತಮ ತರಬೇತಿ ಕೊಡಬಲ್ಲವರೂ ನಮ್ಮಲ್ಲಿದ್ದಾರೆ. ಆದರೆ ನಮ್ಮ ಯುವಜನರು ಎಲ್ಲಿದ್ದಾರೆ, ಹೇಗಿದ್ದಾರೆ ಎಂದು ಒಂದಿಷ್ಟು ಯೋಚಿಸಬೇಕಿದೆ.
ಬಡವರೇ ಹೆಚ್ಚಿರುವ ಭಾರತದಲ್ಲಿ ಬಹುತೇಕ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಆ ಕಾರಣ ದೈಹಿಕ ದಾಡ್ಯìತೆ ವಿಚಾರವಿರಲಿ, ಸಾಮಾನ್ಯ ಆರೋಗ್ಯ ಸ್ಥಿತಿ ಕಾಪಾಡಿ ಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಅಪೌಷ್ಟಿಕತೆಯಿಂದ ಸಾಮಾನ್ಯ ಸ್ಥಿತಿಗೆ ಬಂದ ಬಳಿಕ ಕ್ರೀಡಾರಂಗದ ಚಟುವಟಿಕೆಗಳಿಗೆ ಮೈಒಡ್ಡುವ ದಾಡ್ಯìತೆ ನಾವು ರೂಢಿಸಬೇಕಾಗಿದೆ.

ಗ್ರಾಮೀಣ ಮೂಲ: ನಗರದ ವಾತಾವರಣಕ್ಕಿಂತ ಯಾವುದೇ ಕಲುಷಿತ ವಾತಾವರಣ ಇರದ ಗುಡ್ಡಗಾಡು, ಕಾಡುಮೇಡುಗಳಲ್ಲಿ ಹುಟ್ಟಿ ಬೆಳೆದವರಲ್ಲೇ ನಾವು ಸಹಜ ಕ್ರೀಡಾಳುಗಳನ್ನು ಕಾಣಬಲ್ಲೆವು. ಹಳ್ಳಿಗರ ದೈಹಿಕ ಕ್ಷಮತೆ ಹೆಚ್ಚು ಸಬಲ. ಈ ದಿಸೆಯಲ್ಲಿ ಹಳ್ಳಿಗಾಡಿನ ಕ್ರೀಡಾಳುಗಳನ್ನು ಆಧುನಿಕ ಕ್ರೀಡೆಗಳಿಗೆ ಒಗ್ಗುವಂತೆ ಬೆಳೆಸಬೇಕಾಗಿದೆ. ಈಗಲೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಇಂತಹ ಕ್ರೀಡಾ ಪ್ರತಿಭೆಗಳೇ ಮಿಂಚುತ್ತಿರುವುದನ್ನು ನಾವು ಕಾಣಬಹುದಾಗಿದೆ.

ಗೆದ್ದಾಗ ಸಂಭ್ರಮ, ಹಣದ ಹೊನಲು: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗಳಿಸಿದವರಿಗೆ ಕೋಟಿಗಟ್ಟಲೆ ಮೊತ್ತದ ಬಹುಮಾನಗಳ ರೂಪದಲ್ಲಿ ಹಣದ ಹೊಳೆಯೇ ಅವರತ್ತ ಹರಿದುಬಂದಿತು. ಇದು ಸ್ವಾಗತಾರ್ಹವೇ. ಆದರೆ ನಮ್ಮಲ್ಲಿರುವ ಇಂಥ ಕ್ರೀಡಾಳುಗಳನ್ನು ಚಿಕ್ಕಂದಿನಲ್ಲೇ ಹುಡುಕಿ, ಸಾಧ್ಯವಿರುವ ಎಲ್ಲ ಬೆಂಬಲ, ತರಬೇತಿ ನೀಡುವ ವ್ಯವಸ್ಥೆ ನಮ್ಮಲ್ಲಿದೆಯೇ? ಈಗಿನ ದಿನಮಾನದಲ್ಲಿ ಇಂಥ ಪ್ರತಿಭಾವಂತ ಕ್ರೀಡಾಳುಗಳಿಗೆ ಮಾಸಿಕ ಕನಿಷ್ಠ 25,000 ರೂ. ಗಳಷ್ಟನ್ನಾದರೂ ಸರಕಾರ ಒದಗಿಸಬೇಡವೇ?

ಬಜೆಟ್‌: 2021-22 ರಲ್ಲಿ ಕ್ರೀಡೆಗಾಗಿ ಕೇಂದ್ರ ಸರಕಾರ ಇಟ್ಟ ಬಜೆಟ್‌ 2,596 ಕೋ. ರೂ.. ಇದು ಹಿಂದಿನ ಸಾಲಿಗಿಂತ 230 ಕೋ. ರೂ. ಕಡಿಮೆ! ಇದಕ್ಕೆ ಕಾರಣ ಕೊರೊನಾ ಆಗಿರಬಹುದು. ಆದರೆ ಅಷ್ಟಾದರೂ ಕೂಡ ಈ ದೇಶಕ್ಕೆ ಏನೇನೂ ಸಾಲದು. ರಾಜ್ಯ ಸರಕಾರ ಕ್ರೀಡೆಗೆ ಮೀಸಲಿರಿಸಿದ ರೂ. 250 ಕೋ. ರೂ. ಕೂಡ ಅಷ್ಟೇ ನಿರಾಶಾದಾಯಕ.

ನಿರ್ದಿಷ್ಟ ಕ್ರೀಡೆಯತ್ತ ಗಮನ ಅಗತ್ಯ: ಭಾರತೀ ಯರು ಬಹುವಿಧ ಕುಶಲಿಗರು. ಕ್ರೀಡೆಯೂ ಇದಕ್ಕೆ ಹೊರತಲ್ಲ. ಓರ್ವ ಕ್ರೀಡಾಳು ಓಟ, ಗುಂಡು ಎಸೆತ, ಈಟಿ ಎಸೆತ, ಉದ್ದ ಜಿಗಿತ, ಎತ್ತರ ಜಿಗಿತ, ಕುಸ್ತಿ ಹೀಗೆ ಭಾರತೀಯರು ಎಲ್ಲ ಕ್ರೀಡೆಗಳಿಗೆ ಸಿದ್ಧ. ಇದೇ ದೊಡ್ಡ ದೋಷ. ಒಬ್ಬ ವ್ಯಕ್ತಿಯ ನಿಜವಾದ ಕ್ಷೇತ್ರ ಯಾವುದು ಎಂಬುದನ್ನು ಗುರುತಿಸದೆ ಎಲ್ಲದರಲ್ಲೂ ಭಾಗವಹಿಸುವ ಹುಮ್ಮಸ್ಸು. ಇದರಿಂದಾಗಿ ಕ್ರೀಡಾಳು ವಿನ ದೈಹಿಕ ಸಾಮರ್ಥ್ಯ ಹತ್ತಾರು ಕ್ರೀಡೆಗಳಲ್ಲಿ ಹಂಚಿ ಹೋಗಿ ಯಾವುದರಲ್ಲೂ ಪರಿಪೂರ್ಣತೆಯತ್ತ ಸಾಗಲು ಸಾಧ್ಯವಾಗುತ್ತಿಲ್ಲ.

ಭಾರತದ ಒಟ್ಟಾರೆ ಕ್ರೀಡಾರಂಗದ ಸ್ಥಿತಿಗತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ನಾವು ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿಸಲು ಸಿದ್ಧ. ಆದರೆ ನಮ್ಮಿಂದ ಎಷ್ಟು ಸಾಧನೆಯಾದೀತು ಎಂಬ ಹಿಡಿತವಿಲ್ಲ. ಹಾಗಾಗಿ ನಿರ್ದಿಷ್ಟ ಆಟ, ಕ್ರೀಡೆಗಳನ್ನೇ ಆರಿಸಿ ಪದಕ ಗಳಿಕೆಗೆ ಪ್ರಯತ್ನಿಸಬೇಕಾಗಿದೆ. ಮುಂದಿನ 25 ವರ್ಷಗಳಲ್ಲಿ ನಮಗೆ ಆರು ಒಲಿಂಪಿಕ್ಸ್‌ ಕೂಟಗಳಲ್ಲಿ ಭಾಗವಹಿಸಲು ಅವಕಾಶಗಳಿವೆ. ನಾವು ನಿರ್ದಿಷ್ಟವಾಗಿ ಕೆಲವೇ ಕೆಲವು ಕ್ರೀಡೆಗಳನ್ನು, ಗುಂಪು ಆಟಗಳನ್ನು ಆಯ್ಕೆ ಮಾಡಿಕೊಂಡು ಅದರಲ್ಲೇ ಪಾರಮ್ಯ ಸಾಧಿಸಲು ಪ್ರಯತ್ನಿಸಬೇಕಾಗಿದೆ.

ಕ್ರೀಡೆ ಮತ್ತು ರಾಜಕೀಯ: ಕ್ರೀಡೆಗಳಿಗೆ ಸಂಬಂಧಿಸಿದ ಅದೆಷ್ಟೋ ಸಂಘಟನೆಗಳಿವೆ. ಒಂದೇ ಕ್ರೀಡೆಯೊಳಗಡೆಯೇ ಹಲವು ಸಂಘಟನೆಗಳಿವೆ. ಈ ಅಸೋಸಿಯೇಶನ್‌ಗಳ ಅಧ್ಯಕ್ಷಗಿರಿಗೆ ಒಂದಷ್ಟು ಲಾಬಿ, ರಾಜಕೀಯ, ಒತ್ತಡ, ಕೋರ್ಟ್‌ ಕಟ್ಟೆ ಏರಿದ ಸಂಘಟನೆಗಳ ಭಿನ್ನಾಭಿಪ್ರಾಯಗಳು ಒಂದೆಡೆಯಾದರೆ ಇನ್ನೊಂದೆಡೆ ಆಯ್ಕೆಯಾದ ಅಧ್ಯಕ್ಷರ ಭರ್ಜರಿ ಪದಗ್ರಹಣ ಸಮಾರಂಭ ನಡೆಯುತ್ತದೆ. ಅಂದು ಹೇಳಿಕೆ ಕೊಟ್ಟು ಹೋದ ಮಹನೀಯರು ಮತ್ತೆ ಯಾವುದೇ ಕೂಟದಲ್ಲಿ ಕಾಣಸಿಗುವುದಿಲ್ಲ. ಸಿಕ್ಕಿದರೂ ಅಪರೂಪ. ಇಂತಹ ಶೋಕಿ, ಅಧಿಕಾರ ಲಾಲಸೆ ನಮ್ಮ ದೇಶದಲ್ಲಿ ಇರುವವರೆಗೆ ಅಸೋಸಿಯೇಶನ್‌ಗಳ ಮೂಲಕ ಕ್ರೀಡೋದ್ಧಾರ ಸಾಧ್ಯವಿಲ್ಲ. ಅರ್ಹರನ್ನು ಆರಿಸುವ ಮೂಲಕ ಮುಂದಿನ ವರ್ಷಗಳಲ್ಲಿ ಆದರೂ ಕ್ರೀಡಾ ಚಟುವಟಿಕೆಗಳು ಫಲಿತಾಂಶಪೂರಿತವಾಗಿ ನಡೆದಾವು. ಹೀಗೆಲ್ಲ ಅಧ್ಯಕ್ಷರಾಗುವ ಬದಲು ಯಾವುದಾದರೂ ರಾಜಕೀಯ ಪಕ್ಷದ ನಾಯಕರಾಗಿಯೋ, ಒಳ ಬಾಗಿಲಿನಿಂದ ಸದನ ಪ್ರವೇಶಿಸಿಸುವ ರಾಜಕಾರಣಿಗಳಾಗುವುದೋ ಲೇಸು. ಇನ್ನು ಕ್ರೀಡಾರಂಗದಲ್ಲಿರುವ ಶೋಷಣೆಯ ಹಲವು ಮುಖಗಳನ್ನು ನಿವಾರಿಸುವುದೂ ಅಗತ್ಯವಾಗಿದೆ.

ಸರಕಾರಕ್ಕೆ ಕ್ರೀಡಾ ಯೋಜನೆಗಳನ್ನು ರೂಪಿಸಿ ಸಲ್ಲಿಸುವ ತಜ್ಞರು ನಮ್ಮಲ್ಲಿದ್ದಾರೆ. ನಿಜಕ್ಕೂ ಅನುಸರಣ ಯೋಗ್ಯ ಸಲಹೆ, ಮಾರ್ಗದರ್ಶನ ನೀಡುತ್ತಾರೆ. ಆದರೆ ಈ ಯೋಜನೆ, ಯೋಚನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ನಮ್ಮ ಆಡಳಿತ ವ್ಯವಸ್ಥೆಗೆ ಸಾಧ್ಯವಾಗುತ್ತಿಲ್ಲ. ಇದನ್ನು ನಿವಾರಿಸುವ ಪ್ರಯತ್ನವನ್ನು ಮುಂದಿನ ವರ್ಷಗಳಲ್ಲಾದರೂ ಮಾಡಬೇಕಾಗಿದೆ.

ಖಾಸಗಿ ಪ್ರಯತ್ನಕ್ಕೆ ಬೆಂಬಲವಿಲ್ಲ: ಸರಕಾರ, ಇಲಾಖೆ, ಅಸೋಸಿಯೇಶನ್‌ಗಳು, ವಿಶ್ವವಿದ್ಯಾನಿಲ ಯಗಳು ಮಾಡದ, ಮಾಡಿ ತೋರಿಸದ ಕ್ರೀಡಾ ಸಾಧನೆ ಇವತ್ತು ಖಾಸಗಿ ವಲಯಗಳಿಂದ ಸಾಧ್ಯವಾಗುತ್ತಿದೆ. ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳು ಕ್ರೀಡಾಳುಗಳಿಗೆ ಉಚಿತ ಶಿಕ್ಷಣ, ಆಹಾರ ಸಹಿತ ಕ್ರೀಡಾ ತರಬೇತಿ ನೀಡಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆ ಕ್ರೀಡಾಳುಗಳು ಪದಕಗಳನ್ನು ಗಳಿಸಿದರೂ ಯಾವುದೇ ಸರಕಾರ, ಸಂಘಟನೆ, ವಿವಿ ಮೂಲಕ ಆರ್ಥಿಕ ಬೆಂಬಲವೂ ಇಲ್ಲ, ದಾಖಲೆಯ ಪ್ರಕಟನೆಯೂ ಇಲ್ಲ, ಕನಿಷ್ಠ ಶ್ಲಾಘನೆಯ ಒಂದು ಮಾತೂ ಇಲ್ಲ. ಅದಕ್ಕೂ ಮಿಗಿಲಾಗಿ ಖಾಸಗಿ ವಲಯದವರನ್ನು “ವೈರಿ’ಗಳಂತೆ ನೋಡುವ ನಮ್ಮ ವ್ಯವಸ್ಥೆ ಜುಗುಪ್ಸೆ ಹುಟ್ಟಿಸುವಂತಿದೆ. ಹಾಗಾಗಿಯೇ ಖಾಸಗಿ ವಲಯದ ಹಲವು ಶಿಕ್ಷಣ ಸಂಸ್ಥೆಗಳು ಮತ್ತದರ ಪ್ರವರ್ತಕರು ಕ್ರೀಡಾ ಕ್ಷೇತ್ರದ ಬಗೆಗಿನ ತಮ್ಮ ಆಸಕ್ತಿಯನ್ನು ಕಳೆದುಕೊಂಡ ಹಲವು ಉದಾಹರಣೆಗಳು ದೇಶದಲ್ಲಿವೆ.
ಆರೋಗ್ಯ, ಶಿಕ್ಷಣ ಇವತ್ತು ಖಾಸಗಿಯವರಿಂದಾಗಿ ಮುನ್ನಡೆಗೆ ಬಂದಿವೆ. ಕ್ರೀಡೆ ಎಂಬುದು ಲಾಭ ನಷ್ಟದ ವಿಷಯ ಆಲ್ಲ. ಆಸಕ್ತಿ ಇರುವ ಖಾಸಗಿಯವರನ್ನು ಪ್ರೋತ್ಸಾಹಿಸಿದಲ್ಲಿ ಮಾತ್ರ ಭಾರತ ಕ್ರೀಡಾರಂಗದಲ್ಲಿ ಬೆಳಗೀತು.

-   ಡಾ| ಎಂ. ಮೋಹನ ಆಳ್ವ
ಅಧ್ಯಕ್ಷರು, ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ ರಿ., ಮೂಡುಬಿದಿರೆ

ಟಾಪ್ ನ್ಯೂಸ್

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.