“ರಸಗೊಬ್ಬರ ಕೊರತೆ ಇಲ್ಲ’
Team Udayavani, Apr 11, 2020, 6:17 AM IST
ಬೆಂಗಳೂರು: ರಾಜ್ಯದಲ್ಲಿ 7.3 ಲಕ್ಷ ಟನ್ ರಸಗೊಬ್ಬರ ದಾಸ್ತಾನು ಇದ್ದು, ಎಪ್ರಿಲ್ಗೆ ರಾಜ್ಯದ ರಸಗೊಬ್ಬರ ಬೇಡಿಕೆ 2.73 ಲಕ್ಷ ಟನ್ಗಳಷ್ಟಿದೆ. ರೈತರು ಮುಂಗಾರು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಬಹುದು ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸದಾನಂದ ಗೌಡ, ಲಾಕ್ಡೌನ್ನಿಂದ ಒಂದೆರಡು ದಿನ ಸರಕು ಸಾಗಣೆಗೆ ತೊಂದರೆ ಯಾಗಿತ್ತು. ಆದರೆ ರಸಗೊಬ್ಬರ, ಕೀಟನಾಶಕ ಸಹಿತ ಕೃಷಿ ಸಂಬಂ ಧಿತ ಎಲ್ಲ ಪರಿಕರಗಳನ್ನು ಅತ್ಯವಶ್ಯಕ ವಸ್ತುಗಳ ಪಟ್ಟಿಗೆ ಸೇರ್ಪಡೆ ಮಾಡಿ ಉತ್ಪಾದನೆ, ಸಾಗಣೆ ಮೇಲಿನ ನಿರ್ಬಂಧವನ್ನು ಕೇಂದ್ರ ಸರಕಾರ ಸಂಪೂರ್ಣ ತೆಗೆದು ಹಾಕಿದೆ. ರಸಗೊಬ್ಬರ ಕಾರ್ಖಾನೆ, ಗೋದಾಮು, ಬಂದರು, ವಿತರಣ ಕೇಂದ್ರಗಳ ನಡುವೆ ರಸಗೊಬ್ಬರ ಸಾಗಣೆಗೆ ಅನುಕೂಲವಾಗುವಂತೆ ಬೇಡಿಕೆಗೆ ಅನು ಗುಣವಾಗಿ ಗೂಡ್ಸ್ ರೈಲು ಒದಗಿಸುವಂತೆಯೂ ಕೇಂದ್ರ ಸರಕಾರ ರೈಲ್ವೇ ಇಲಾಖೆಗೆ ಆದೇಶಿಸಿದೆ. ಜತೆಗೆ ಜಲ ಮತ್ತು ಭೂ ಸಾರಿಗೆಗೆ ರಸಗೊಬ್ಬರ, ಕೀಟನಾಶಕ ಇತರ ಕೃಷಿ ಸಂಬಂಧಿತ ಸರಕುಗಳ ಮುಕ್ತ ಸಾಗಣೆಗೆ ಅನುಮತಿ ನೀಡಲಾಗಿದೆ ಎಂದು ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.