ಇಂದಿನ ಎರಡು ಪಂದ್ಯಗಳಲ್ಲಿ ಮೂರು ತಂಡಗಳ ಪ್ಲೇ ಆಫ್ ಭವಿಷ್ಯ ನಿರ್ಧಾರ
Team Udayavani, Nov 1, 2020, 7:00 AM IST
ಅಬುಧಾಬಿ: ರವಿವಾರದ ಎರಡು ಐಪಿಎಲ್ ಪಂದ್ಯಗಳಲ್ಲಿ ಮೂರು ತಂಡಗಳ ಪ್ಲೇ ಆಫ್ ಭವಿಷ್ಯ ನಿರ್ಧಾರವಾಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಮತ್ತು ಪಂಜಾಬ್ ಮುಖಾಮುಖೀಯಾಗಲಿವೆ. ರಾತ್ರಿ ಕೋಲ್ಕತಾ-ರಾಜಸ್ಥಾನ್ ಸೆಣಸಲಿವೆ. ಈ ನಾಲ್ಕೂ ತಂಡಗಳಿಗೆ ಇದು ಕೊನೆಯ ಲೀಗ್ ಪಂದ್ಯವಾಗಿರುವುದರಿಂದ ಸ್ಪರ್ಧೆ ತೀವ್ರ ಕುತೂಹಲ ಮೂಡಿಸಿದೆ.
ಕೆಕೆಆರ್, ಪಂಜಾಬ್, ರಾಜಸ್ಥಾನ್ ತಲಾ 12 ಅಂಕ ಹೊಂದಿವೆ. ಆದರೆ ಈ ಪಂದ್ಯದಲ್ಲಿ ಕೇವಲ ಗೆದ್ದರಷ್ಟೇ ಸಾಲದು, ಜತೆಗೆ ರನ್ರೇಟ್ ಕೂಟ ಉತ್ತಮವಾಗಿರಬೇಕು. ಒಂದು ವೇಳೆ ಮೊದಲ ಪಂದ್ಯದಲ್ಲಿ ಪಂಜಾಬ್ ಜಯಿಸಿದರೆ ಇನ್ನೊಂದರಲ್ಲಿ ರಾಜಸ್ಥಾನ್ ಅಥವಾ ಕೆಕೆಆರ್ ಗೆದ್ದರೆ ಆಗ ಎರಡು ತಂಡಗಳ ಅಂಕ 14ಕ್ಕೆ ಏರುತ್ತದೆ. ಆಗ ಉತ್ತಮ ರನ್ರೇಟ್ ಹೊಂದಿರುವವರಿಗೆ ಲಾಭವಾಗಲಿದೆ.
ರವಿವಾರದ ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ ಪಂಜಾಬ್ ಎಡವಿದರೆ ಕೂಟದಿಂದ ನಿರ್ಗಮಿಸಲಿದೆ. ಆದರೆ ಇದರಿಂದ ಧೋನಿ ಪಡೆಗೆ ಯಾವುದೇ ಲಾಭವಾಗದು. ಅದು ಈಗಾಗಲೇ ನಿರ್ಗಮಿಸಿದೆ. ಆದರೆ ಗೆದ್ದು ಪಂಜಾಬನ್ನು ಹೊರದಬ್ಬಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಬ್ಯಾಟ್ ಎಸೆದ ಗೇಲ್ಗೆ ದಂಡ
ಅಬುಧಾಬಿ: ಶುಕ್ರವಾರದ ರಾಜಸ್ಥಾನ್ ಎದುರಿನ ಪಂದ್ಯದಲ್ಲಿ 99 ರನ್ನಿಗೆ ಔಟಾದ ಸಿಟ್ಟಿನಲ್ಲಿ ಬ್ಯಾಟ್ ಎಸೆದ ಕ್ರಿಸ್ ಗೇಲ್ ವರ್ತನೆ ಎಲ್ಲ ದಿಕ್ಕುಗಳಿಂದಲೂ ಟೀಕೆಗೊಳಗಾಗಿತ್ತು. ಐಪಿಎಲ್ ನೀತಿಸಂಹಿತೆ ಉಲ್ಲಂ ಸಿದ ಕಾರಣಕ್ಕಾಗಿ ಅವರಿಗೀಗ ಪಂದ್ಯದ ಸಂಭಾವನೆಯ ಶೇ. 10ರಷ್ಟು ದಂಡ ವಿಧಿಸಲಾಗಿದೆ.
ಶತಕದ ಹಾದಿಯಲ್ಲಿದ್ದ ಗೇಲ್, ಅಂತಿಮ ಓವರಿನಲ್ಲಿ ಆರ್ಚರ್ ಎಸೆತಕ್ಕೆ ಬೌಲ್ಡ್ ಆಗಿದ್ದರು. ಬ್ಯಾಟ್ ಎಸೆದು ವಾಪಸಾಗುವಾಗ ಆರ್ಚರ್ಗೆ ಹಸ್ತಲಾಘವ ಮಾಡುವುದನ್ನು ಗೇಲ್ ಮರೆಯಲಿಲ್ಲ. ಕೊನೆಗೆ ಮ್ಯಾಕ್ಸ್ವೆಲ್ ಈ ಬ್ಯಾಟನ್ನು ತಂದು ಗೇಲ್ಗೆ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ