ಅಂಚೆ-ಕುಂಚ ಸ್ಪರ್ಧೆ ವಿಜೇತರಿಗೆ ಪುರಸ್ಕಾರ
Team Udayavani, May 6, 2019, 3:02 AM IST
ಬೆಳ್ತಂಗಡಿ: ಮೌಲ್ಯಾಧಾರಿತ ಗ್ರಂಥಗಳ ಪ್ರಕಟನೆ ಮತ್ತು ಓದುವ ಹವ್ಯಾಸ ಕಡಿಮೆಯಾಗುತ್ತಿರುವುದರಿಂದ ನಮ್ಮ ಸಂಸ್ಕೃತಿಯೆಡೆಗಿನ ಒಲವು ಮರೆಯಾಗುತ್ತಿದೆ. ಮೂಲ ಭಾಷೆ ಶ್ರೀಮಂತಗೊಂಡಲ್ಲಿ ನಮ್ಮ ಸಂಸ್ಕೃತಿ ಅಜರಾಮರವಾಗಿರಲು ಸಾಧ್ಯ ಎಂದು ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಹೇಳಿದರು.
ಧರ್ಮಸ್ಥಳದಲ್ಲಿ ಭಾನುವಾರ ಶಾಂತಿವನ ಟ್ರಸ್ಟ್ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ಆಯೋಜಿಸಲಾದ 17ನೇ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆಯ ವಿಜೇತರಿಗೆ ಪುರಸ್ಕಾರ ವಿತರಿಸಿ ಮಾತನಾಡಿದರು.
ದೇಶದಲ್ಲಿರುವ ಭಾಷೆಯ ವಿಶೇಷತೆ, ಅವುಗಳಲ್ಲಿ ಅಡಕವಾಗಿರುವ ಸಂಪ್ರದಾಯಗಳು ಜೀವನ ಪದ್ಧತಿಯಲ್ಲಿ ಏಕತೆಯನ್ನು ಕಂಡುಕೊಂಡಿವೆ. ಪ್ರಪಂಚದಲ್ಲಿರುವ 6 ಸಾವಿರ ಭಾಷೆಯಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಭಾರತದಲ್ಲಿವೆ. ಗ್ರಾಮೀಣ ಪ್ರದೇಶದ ಜನರು ಶುದ್ಧಕನ್ನಡ ಮಾತನಾಡುತ್ತಾರೆ. ಯಕ್ಷಗಾನ ಮತ್ತು ಜನಪದ ಸಾಹಿತ್ಯದಲ್ಲಿ ಭಾಷೆಯ ಸೊಗಡು ಜತೆಗೆ ಭಾಷಾ ಪ್ರೌಢಿಮೆ ಇದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗೆ ಜೈನರ ಕೊಡುಗೆಯನ್ನು ಶ್ಲಾಘಿಸಿದ ಅವರು, ಹೃದಯ ಶ್ರೀಮಂತಿಕೆ, ಭಾಷಾ ಶ್ರೀಮಂತಿಕೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಭಾಷೆ ನಾಶವಾದರೆ, ಸಂಸ್ಕೃತಿಯೂ ನಾಶವಾದಂತೆೆ. ಅದನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಸೃಜನಾತ್ಮಕ ಮತ್ತು ವಾಸ್ತವಿಕ ಕಲೆ ಎಲ್ಲರಲ್ಲೂ ಇರುವಂತಹದು. ಅದನ್ನು ಕಲ್ಪನೆಯಿಂದ ವಿಸ್ತರಿಸುವುದರಿಂದ ಸಾಧಕರಾಗಿ ಗುರುತಿಸಿಕೊಳ್ಳುತ್ತಾರೆ. ಕಲೆಗೆ ಪ್ರಚಂಡ ಶಕ್ತಿಯಿದೆ. ಮಾರಾಟಕ್ಕಾಗಿ ಕಲೆಯನ್ನು ಪ್ರೀತಿಸದೆ ಭಾವನೆ ವ್ಯಕ್ತಪಡಿಸಲು, ಆನಂದ ಪ್ರಕಟಗೊಳಿಸಲು ಪ್ರೀತಿಸಿ ಎಂದು ಸಲಹೆ ನೀಡಿದರು.
ಅಂಚೆ-ಕುಂಚ ಸ್ಪರ್ಧೆ ವಿಜೇತರು
* ಪ್ರಾಥಮಿಕ ಶಾಲಾ ವಿಭಾಗ: ಪ್ರಥಮ: ಶಶಾಂಕ ಕೋಲ್ಕಾರ್, ರಾಯಚೂರು ಜಾಲಹಳ್ಳಿಯ ಡಾರ್ವಿನ್ ಹಿ.ಪ್ರಾ.ಶಾಲೆ. ದ್ವಿತೀಯ: ಗಗನ್ ಎ.ವಿ., ಪಾಣೆಮಂಗಳೂರು ಎಸ್.ಎಲ್.ಎನ್.ಪಿ. ವಿದ್ಯಾಲಯ. ತೃತೀಯ: ಅನ್ವಿತ್ ಎಚ್., ಮಂಗಳೂರು ಉರ್ವ ಕೆನರಾ ಹಿ.ಪ್ರಾ. ಶಾಲೆ.
* ಪ್ರೌಢ ಶಾಲೆ ವಿಭಾಗ: ಪ್ರಥಮ: ಅಖೀಲೇಶ ನಾಗೇಶ ನಾಯ್ಕ, ಕಾರವಾರ ಸೈಂಟ್ ಜೋಸೆಫ್ ಪ್ರೌಢ ಶಾಲೆ. ದ್ವಿತೀಯ: ಆದರ್ಶ್ ನಾರಾಯಣನ್, ಬ್ರಹ್ಮಾವರ ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್. ತೃತೀಯ: ಪ್ರತೀಕ್ಷಾ ಮರಕಿಣಿ, ಬೆಂಗಳೂರು ಸದಾಶಿವನಗರ ಪೂರ್ಣಪ್ರಜ್ಞ ಪ್ರೌಢ ಶಾಲೆ.
* ಕಾಲೇಜು ವಿಭಾಗ: ಪ್ರಥಮ: ಅನನ್ಯಾ ದೀಪಕ್ ನಾಯ್ಕ, ಕಾರವಾರ ಸ.ಪ.ಪೂ. ಕಾಲೇಜು, ದ್ವಿತೀಯ: ಅವಿನಾಶ್ ಜಿ. ಪೈ., ಬೆಂಗಳೂರು ಸೌತ್ ಕ್ಯಾಂಪಸ್ ಕಾಲೇಜು. ತೃತೀಯ: ರತನ್, ಬೈಂದೂರು ಸ.ಪ.ಪೂ. ಕಾಲೇಜು ಉಪ್ಪುಂದ.
* ಸಾರ್ವಜನಿಕ ವಿಭಾಗ: ಪ್ರಥಮ: ದಿನೇಶ ದೇವರಾಯ ಮೇತ್ರಿ, ಅಂಕೋಲಾದ ಆವರ್ಸೆ, ದ್ವಿತೀಯ: ವಿಶ್ವೇಶ್ವರ ಎಂ. ಪಟಗಾರ, ತಲಗೋಡ್-ಊರಕೇರಿ, ಕುಮಟಾ, ತೃತೀಯ: ಬಿ.ಕೆ. ಮಾಧವ ರಾವ್, ಮಂಗಳೂರು ಕೊಂಚಾಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್