Rakshabandhan: ಇಂದು ರಕ್ಷಾಬಂಧನ: ಪರಸ್ಪರ ಆಶ್ವಾಸನೆಯ ಸಂಕೇತ


Team Udayavani, Aug 30, 2023, 1:04 AM IST

rakshabandhan

ರಕ್ಷಾಬಂಧನವನ್ನು ಶ್ರಾವಣ ಮಾಸದ ಹುಣ್ಣಿಮೆಯಂದು ಆಚ­ರಿಸ­ಲಾಗುತ್ತದೆ. ಇದು ಪರಸ್ಪರ ಪ್ರೇಮ, ಸೌಹಾ ರ್ದತೆಯಿಂದ ಕೂಡಿ ನಿಮ್ಮನ್ನು ರಕ್ಷಿಸುವ ಒಂದು ಪವಿತ್ರ  ಬಂಧನವಾಗಿದೆ. ಈ ಹಬ್ಬದಲ್ಲಿ, ಜಾತಿ, ವರ್ಗ, ಧರ್ಮ ಮತ್ತು ಲಿಂಗಭೇದವಿಲ್ಲದೆ ಎಲ್ಲರೂ  ಭಾಗವಹಿಸುತ್ತಾರೆ. ಸಹೋ ದರಿಯ ಪ್ರೇಮ ಮತ್ತು ಸೂಕ್ಷ್ಮ ಭಾವನೆಗಳ ಸಂಕೇತದಂತೆ ಕೈಗೆ ಕಟ್ಟಲಾಗುವ ಈ ದಾರವನ್ನು “ರಾಖೀ” ಎಂದು ಕರೆಯುತ್ತಾರೆ. ರಕ್ಷಾಬಂಧನವು ಕೇವಲ ಸಾಮಾಜಿಕ ಸಂಕೇತವಾಗಿಲ್ಲ; ಬದಲಾಗಿ ಪ್ರತಿಯೊಬ್ಬರ ಚೈತನ್ಯವನ್ನು ಬೆಸೆಯುವ ಕೊಂಡಿಯಾಗಿದೆ. ಭಾರತದ ಇತರ ಭಾಗಗಳಲ್ಲಿಇದನ್ನು ರಾಖೀ, ಬಲೇವ, ಸಲೂನೊ ಎಂಬ ವಿವಿಧ ಹೆಸರುಗಳಿಂದ  ಕರೆಯಲಾಗುತ್ತದೆ.

ಗುಣಗಳಿಗೆ ಅನುಸಾರವಾಗಿ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಎಂಬ ಮೂರು ರೀತಿಯ ಬಂಧನಗಳಿವೆ. ಸಾತ್ವಿಕ ಬಂಧನವು ಜ್ಞಾನ, ಸಂತೋಷ, ಆನಂದಕ್ಕೆ ಸಂಬಂಧಪಟ್ಟದ್ದಾಗಿದೆ. ರಾಜಸಿಕ ಬಂಧನವು ಎಲ್ಲ ರೀತಿಯ ಆಸೆಗಳು ಮತ್ತು ಬಯಕೆಗಳಿಗೆ ಸಂಬಂಧಿಸಿದುದಾಗಿದೆ. ಪೂರ್ಣತೆಯ ಕೊರತೆಯಿಂದ ಮತ್ತು ಅತೃಪ್ತಿಯಿಂದ ಕೂಡಿರುವ ಬಂಧನವು ತಾಮಸಿಕವಾದದ್ದು. ಉದಾಹರಣೆಗೆ, ಧೂಮಪಾನದ ಚಟವಿದ್ದವರು, ಯಾವುದೇ ರೀತಿಯ ಆನಂದವು ದೊರಕದಿದ್ದರೂ ಅದರಿಂದ ಹೊರಬರಲು ಕಷ್ಟಪಡುತ್ತಾರೆ. ರಕ್ಷಾಬಂಧನವು ಜ್ಞಾನ ಮತ್ತು ಪ್ರೇಮದಿಂದ ಕೂಡಿ ಎಲ್ಲರನ್ನು ಒಗ್ಗೂಡಿಸುವ ಒಂದು ಸಾತ್ವಿಕ ಬಂಧನವಾಗಿದೆ.

ಇಂದಿನ ದಿನಗಳಲ್ಲಿ ಇದನ್ನು ಸಹೋದರ- ಸಹೋದರಿಯರ ನಡುವಿನ ಹಬ್ಬವಾಗಿ ಪರಿಗಣಿಸಲಾದರೂ, ಹಿಂದಿನ ದಿನಗಳಲ್ಲಿ ಅದು ಅಷ್ಟಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಐತಿಹಾಸಿಕವಾಗಿ, ಅನೇಕ ಸಂದರ್ಭಗಳಲ್ಲಿ ರಾಖೀಯು ರಕ್ಷಣೆಯನ್ನು ನೀಡುವ ಸಂಕೇತವಾಗಿತ್ತು. ತಾಯಿ, ಪತ್ನಿ ಅಥವಾ ಮಗಳು ರಾಖೀಯನ್ನು ಕಟ್ಟಬಹುದಿತ್ತು. ತಮ್ಮ ಆಶೀರ್ವಾದವನ್ನು ಕೋರಿ ಬರುವವರಿಗೆ ಋಷಿಗಳು ರಾಖೀಯನ್ನು ಕಟ್ಟುತ್ತಿದ್ದರು. ಹಲವು ಋಷಿಮುನಿಗಳು ದುಷ್ಟಾಚಾರ ಮತ್ತು ಅನಾಚಾರಗಳಿಂದ  ರಕ್ಷಿಸಿಕೊಳ್ಳುವ ಕವಚದಂತೆ ಇದನ್ನು ಬಳಸುತ್ತಿದ್ದರು. ಕೆಲವು ಸಂಪ್ರದಾಯಗಳಲ್ಲಿ ಇದನ್ನು “ಪಾಪ ತೋಡಕ, ಪುಣ್ಯ ಪ್ರದಾಯಕ ಪರ್ವ” – ಪುಣ್ಯವನ್ನು ಅನುಗ್ರಹಿಸಿ , ಪಾಪದಿಂದ ಮುಕ್ತರನ್ನಾಗಿಸುವ ದಿನವಾಗಿ  ಆಚರಿಸಲಾಗುತ್ತದೆ.  ಶ್ರಾವಣ ಮಾಸದ ಹುಣ್ಣಿಮೆಯನ್ನು ಋಷಿಮುನಿಗಳಿಗಾಗಿ ಮೀಸಲಿಡಲಾಗಿದೆ.

ನಾವು ವೈವಿಧ್ಯಮಯ ಸಮಾಜದಲ್ಲಿ ಜೀವಿಸುತ್ತಿರುವಾಗ   ವಾದಗಳು, ವ್ಯತ್ಯಾಸಗಳು ಮತ್ತು ಅಪಾರ್ಥಗಳು ಉಂಟಾಗುವುದು ಸಹಜವೇ ಆಗಿದೆ. ಇದರಿಂದ ಒತ್ತಡ, ಭಯ ಮುಂತಾದ ಅಸುರಕ್ಷ ಭಾವನೆಗಳು ಉಂಟಾಗುತ್ತವೆ. ಭಯ ಮತ್ತು ಅಪನಂಬಿಕೆಯಲ್ಲಿ ಜೀವಿಸುವ ಸಮಾಜವು ಖಂಡಿತವಾಗಿಯೂ ಅಳಿವಿನ ಅಂಚಿಗೆ ತೆರಳುತ್ತದೆ. ರಕ್ಷಾಬಂಧನದ ಹಬ್ಬದ ದಿನದಂದು ನಾವೆಲ್ಲರೂ, “ನೋಡು, ನಾನು ನಿನ್ನೊಂದಿಗೆ ಇದ್ದೇನೆ” ಎಂಬ ಆಶ್ವಾಸನೆಯನ್ನು ಪರಸ್ಪರ ನೀಡುತ್ತೇವೆ.

ಸಾಮಾನ್ಯವಾಗಿ ನಾವು  ಬಂಧನವೆಂದರೆ ದುಃಖದಾಯಕ ಎಂದು ಆಲೋಚಿಸುತ್ತೇವೆ. ಆದರೆ ವಾಸ್ತವವಾಗಿ   ಆಧ್ಯಾತ್ಮಿಕ ಜ್ಞಾನ, ಗುರುಗಳು , ಸತ್ಯ ಮತ್ತು ಆತ್ಮ ಇವುಗಳೊಂದಿಗೆ ಏರ್ಪಡಿಸಿಕೊಳ್ಳುವ ಬಂಧನವು ನಿಮ್ಮನ್ನು ರಕ್ಷಿಸುತ್ತದೆ. ಒಂದು ಹಗ್ಗದಿಂದ ನಿಮ್ಮನ್ನು ರಕ್ಷಿಸಬಹುದು ಅಥವಾ ನೇಣಿಗೇರಿಸಬಹುದು. ಪ್ರಾಪಂಚಿಕ ಆಸೆಗಳಿಂದ ಕೂಡಿರುವ ಸಣ್ಣ ಮನಸ್ಸು ನಿಮ್ಮನ್ನು ವಿನಾಶದೆಡೆಗೆ ಕೊಂಡೊಯ್ಯಬಹುದು. ಆದರೆ ಜ್ಞಾನ ಅಥವಾ ಬೃಹತ್‌ ಪ್ರಜ್ಞೆಯೊಂದಿಗೆ ಗುರುತಿಸಿಕೊಂಡಾಗ ನೀವು ಮುಕ್ತರಾಗುತ್ತೀರಿ.

 ಶ್ರೀ ರವಿಶಂಕರ್‌ ಗುರೂಜಿ

ಟಾಪ್ ನ್ಯೂಸ್

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.