ದ್ರೋಣಾಚಾರ್ಯಕ್ಕೆ ಅರ್ಜಿ ಸಲ್ಲಿಸಿದ ಮಾಜಿ ಹಾಕಿ ಕೋಚ್ ಆರ್. ಪರಮೇಶ್ವರನ್
Team Udayavani, Jun 18, 2020, 5:45 AM IST
ಬೆಂಗಳೂರು: ಭಾರತೀಯ ಹಾಕಿ ತಂಡದ ಮಾಜಿ ಸಹಾಯಕ ಕೋಚ್, ಬೆಂಗಳೂರಿನ ರಮೇಶ್ ಪರಮೇಶ್ವರನ್ “ಹಾಕಿ ಕರ್ನಾಟಕ’ ಮೂಲಕ ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿಗೆ ತಮ್ಮ ಹೆಸರನ್ನು ಸೂಚಿಸಿದ್ದಾರೆ. ಆದರೆ ಹಾಕಿ ಇಂಡಿಯಾ ಈಗಾಗಲೇ ಬಿ.ಜೆ. ಕಾರ್ಯಪ್ಪ ಮತ್ತು ರೊಮೇಶ್ ಪಠಾಣಿಯ ಹೆಸರನ್ನು ಈ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ.
“ಜೂನಿಯರ್ ಆಟಗಾರನಿಂದ ಮೊದಲ್ಗೊಂಡು ರಾಷ್ಟ್ರೀಯ ತಂಡದ ಕೋಚ್ ಆಗುವ ಹಂತದ ವರೆಗಿನ ನನ್ನ ಪಯಣ ಅತ್ಯಂತ ರೋಮಾಂಚಕಾರಿಯಾಗಿತ್ತು. ಈ ಹಂತದಲ್ಲಿ ಸಾಕಷ್ಟು ಏರಿಳಿತ, ಸೋಲು-ಗೆಲುವುಗಳನ್ನು ಕಾಣಬೇಕಾಯಿತು. ಒಟ್ಟಾರೆಯಾಗಿ ಇದೊಂದು ತೃಪ್ತಿಕರ ಅನುಭವ’ ಎಂಬುದಾಗಿ 70 ವರ್ಷದ ರಮೇಶ್ ಪರಮೇಶ್ವರನ್ ಹೇಳಿದ್ದಾರೆ.
1969ರಲ್ಲಿ ಪಯಣ ಆರಂಭ
1969ರ ಜೂನಿಯರ್ ನ್ಯಾಶನಲ್ ಚಾಂಪಿಯನ್ಶಿಪ್ನಲ್ಲಿ ಮೈಸೂರು ತಂಡವನ್ನು ಪ್ರತಿನಿಧಿಸುವ ಮೂಲಕ ರಮೇಶ್ ಪರಮೇಶ್ವರನ್ ತಮ್ಮ ಹಾಕಿ ಪಯಣವನ್ನು ಆರಂಭಿಸಿದ್ದರು. 1978ರಲ್ಲಿ ಮೊದಲ ಸಲ ಭಾರತ ತಂಡಕ್ಕೆ ಆಯ್ಕೆಯಾದರು. ಅದೇ ವರ್ಷ ಬ್ಯಾಂಕಾಕ್ ಏಶ್ಯಾಡ್ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತ ತಂಡದ ಸದಸ್ಯರಲ್ಲಿ ಆರ್. ಪರಮೇಶ್ವರನ್ ಕೂಡ ಒಬ್ಬರಾಗಿದ್ದರು.
ಬೆಂಗಳೂರಿನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಿಯಾಗಿದ್ದ ಪರಮೇಶ್ವರನ್, 1985ರಿಂದ ಕರ್ನಾಟಕ ಹಾಕಿ ತಂಡದ ತರಬೇತುದಾರನಾಗಿ ಕರ್ತವ್ಯ ನಿಭಾಯಿಸತೊಡಗಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ