ಸುಪ್ರೀಂ ನೀಡಿರುವ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು: ಡಾ.ವೀರೇಂದ್ರ ಹೆಗ್ಗಡೆ
Team Udayavani, Nov 9, 2019, 3:24 PM IST
ಶಿವಮೊಗ್ಗ: ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಎಲ್ಲರೂ ತಲೆಬಾಗಲೇ ಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿಕೆ ನೀಡಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ರಾಮ ಅಯೋಧ್ಯಯಲ್ಲಿ ಹುಟ್ಟಿದ್ದನೋ ಇಲ್ಲವೋ ಗೊತ್ತಿಲ್ಲ. ಅಲ್ಲಿ ಆರಾಧ್ಯ ಮಂದಿರ ಇತ್ತು ಎಂದು ಹೇಳಿದೆ ಇದು ಸ್ವಾಗತಾರ್ಹ. ಇಸ್ಲಾಂ ಧರ್ಮಕ್ಕೂ ಮಾನ್ಯತೆ ನೀಡಿ ಅವರು ಪ್ರತ್ಯೇಕವಾಗಿ ಮಸೀದಿ ಕಟ್ಟಿಕೊಳ್ಳಲು ಬೇಕಾದ ಸ್ಥಳ ನೀಡಬೇಕು ಎಂದು ಆಜ್ಞೆ ಮಾಡಿದೆ. ಇದು ನ್ಯಾಯಸಮ್ಮತವಾಗಿ ನೀಡಿದ ತೀರ್ಪು ಎಂದರು.
ಈ ದೇಶದಲ್ಲಿ ಹಿಂದು ಮುಸ್ಲಿಮರು ಒಟ್ಟಿಗೆ ಬದುಕುತ್ತೇವೆ. ನಾವು ತಿನ್ನುವ ಅನ್ನ ಯಾರು ಬೆಳೆಸಿದ್ದಾನೆ ಎಂಬುದು ಗೊತ್ತಿಲ್ಲ. ಹಾಗಾಗಿ ಹಾಲು ನೀರಿನಂತೆ ಬೆರೆತು, ಸಾಮರಸ್ಯದಿಂದ ಎಲ್ಲರೂ ಬದುಕಬೇಕು. ಎಲ್ಲರೂ ತೀರ್ಪನ್ನು ಒಪ್ಪಿಕೊಳ್ಳೋಣ ಎಂದು ಅಭಿಪ್ರಾಯಪಟ್ಟರು.