ಹಟ್ಟಿಯಂಗಡಿ-ಜಾಡಿ: ಸುಗಮ ವಾಹನ ಸಂಚಾರಕ್ಕೆ ಅಡ್ಡಿ
ದುರಸ್ತಿ ಕಾಣದ ಕಿರುಸೇತುವೆ ಮಾರ್ಗ
Team Udayavani, Nov 28, 2021, 5:44 AM IST
ವಂಡ್ಸೆ: ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅವರ ಶಿಫಾರಸಿನಂತೆ ಹಟ್ಟಿಯಂಗಡಿ-ಜಾಡಿ ರಸ್ತೆ 4 ಕೋ.ರೂ. ವೆಚ್ಚದಲ್ಲಿ ಸಂಪೂರ್ಣ ವಿಸ್ತರಣೆಗೊಂಡು ಡಾಮರು ಕಾಮಗಾರಿ ಆಗಿದ್ದರೂ ನಡುವಿನ ಅಂತರದ ಒಂದಿಷ್ಟು ರಸ್ತೆ ವ್ಯಾಪ್ತಿ ಪೂರ್ಣಗೊಳ್ಳದಿರುವುದು ವಾಹನ ಚಾಲಕರಿಗೆ ಕಿರಿ-ಕಿರಿ ಉಂಟುಮಾಡಿದೆ.
ಕೊಲ್ಲೂರು ಕ್ಷೇತ್ರಕ್ಕೆ ಸನಿಹದ ಮಾರ್ಗ
ರಾ. ಹೆದ್ದಾರಿ ತಲ್ಲೂರಿನಿಂದ ಸುಮಾರು 2 ಕಿ.ಮೀ. ದೂರ ವ್ಯಾಪ್ತಿ ಸಾಗಿದರೆ ಹಟ್ಟಿಯಂಗಡಿ ಕ್ರಾಸ್ನಿಂದ ಜಾಡಿ ಮಾರ್ಗವಾಗಿ ಕೊಲ್ಲೂರಿಗೆ ಸಾಗಲು ಸುಮಾರು 4 ಕಿ.ಮೀ. ಸನಿಹದ ಮಾರ್ಗ ವಾಗಿದೆ. ಶಾಸಕರ ಶಿಫಾರಸಿನ ಮೇರೆಗೆ ಇದು ಸಂಪೂರ್ಣ ಡಾಮರುಗೊಂಡಿದೆ.
ಅವೈಜ್ಞಾನಿಕವಾಗಿ ನಿರ್ಮಾಣ
ಅವೈಜ್ಞಾನಿಕ ಮಾದರಿಯಲ್ಲಿ ನಿರ್ಮಿ ಸಲಾದ ಅಪಘಾತ ಆಹ್ವಾನಿಸುವ ಕಿರುಸೇತುವೆ ಸಹಿತ ಅದರ ಸನಿಹದ 500 ಮೀ. ಉದ್ದದ ರಸ್ತೆ ದುರಸ್ತಿಯಾಗದೆ ಹೊಂಡದಿಂದ ಕೂಡಿದ್ದು, ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಮಾರ್ಗವಾಗಿ ಸಾಗುವ ಘನ , ಲಘು ವಾಹನವಲ್ಲದೇ ದ್ವಿಚಕ್ರ ವಾಹನದವರು, ಸ್ಥಳೀಯರು ರಸ್ತೆ ದುಸ್ಥಿತಿಯ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ ಮತ್ತೆ ಬಿಜೆಪಿ-ಶಿವಸೇನೆ ಸರಕಾರ: ಭವಿಷ್ಯ ನುಡಿದ ಅಠಾವಳೆ
ಟೆಂಡರ್ ವಿಳಂಬ
ಕಿರುಸೇತುವೆ ತೆರವುಗೊಳಿಸಿ ನೂತನ ಸೇತುವೆಯೊಡನೆ ಮಿಕ್ಕುಳಿದ ರಸ್ತೆ ಮಾರ್ಗ ಪೂರ್ಣಗೊಳಿಸಲು ಶಾಸಕರ ಶಿಫಾರಸಿ ನಂತೆ ಇಲಾಖೆ ಮೂಲಕ ಸರಕಾರಕ್ಕೆ ಮಾಹಿತಿ ನೀಡಲಾಗಿದ್ದರೂ ಈವರೆಗೆ ಟೆಂಡರ್ ಕರೆಯದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ಕೊಲ್ಲೂರು, ಹಟ್ಟಿಯಂಗಡಿ ದೇಗುಲಕ್ಕೆ ಈ ಮಾರ್ಗವಾಗಿ ಯಾತ್ರಾರ್ಥಿಗಳು ಹರಸಾಹಸಪಟ್ಟು ಸಾಗಬೇಕಾದ ಪರಿಸ್ಥಿತಿ ಇದೆ. ರಾತ್ರಿ ಸಂಚಾರವಂತೂ ಹೇಳತೀರದು.
ಶೀಘ್ರ ಕಾಮಗಾರಿ ಪೂರ್ಣ
ಹಟ್ಟಿಯಂಗಡಿ ಕ್ರಾಸ್ನಿಂದ ಸಾಗುವ ಜಾಡಿ ಮಾರ್ಗದ ಮಧ್ಯದಲ್ಲಿರುವ ಸೇತುವೆ ನಿರ್ಮಾಣ ಹಾಗೂ ಮಿಕ್ಕುRಳಿದ ರಸ್ತೆಯ ಡಾಮರಿಗೆ ಇಲಾಖೆಗೆ ಸೂಚಿಸಲಾಗಿದೆ. ಅತಿ ಶೀಘ್ರದಲ್ಲೇ ಕಾಮಗಾರಿ ಪೂರ್ಣ ಗೊಳಿಸಲಾಗುವುದು.
-ಬಿ.ಎಂ. ಸುಕುಮಾರ್ ಶೆಟ್ಟಿ,
ಶಾಸಕರು, ಬೈಂದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ