ಪಂಡಿತರೆಂದರೆ ವಿದ್ವಾಂಸರು ಹೇಳಿಕೆಗೆ ಆರ್ಎಸ್ಎಸ್ ಸ್ಪಷ್ಟನೆ
Team Udayavani, Feb 8, 2023, 6:15 AM IST
ಮುಂಬಯಿ: ಪಂಡಿತರ ಕುರಿತಾಗಿ ಆರ್ಎಸ್ಎಸ್ ಮುಖ್ಯ ಸ್ಥರಾದ ಮೋಹನ್ ಭಾಗವತ್ ಅವರ ಹೇಳಿಕೆ ಬಗ್ಗೆ ಆರ್ಎಸ್ಎಸ್ ನಾಯಕರಾದ ಸುನಿಲ್ ಅಂಬೇಕರ್ ಸ್ಪಷ್ಟನೆ ನೀಡಿದ್ದು, ಪಂಡಿತರು ಎಂದರೆ ವಿದ್ವಾಂಸರು ಎಂದರ್ಥ ಎಂದಿದ್ದಾರೆ.
ಮುಂಬಯಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಭಾಗವತ್, ಪರಮಾತ್ಮನೆಂಬುವವನು ಸರ್ವವ್ಯಾಪಿ. ಹೆಸರು, ಸಾಮರ್ಥ್ಯ, ಗೌರವ ಬೇರೆ-ಬೇರೆಯಾಗಿದ್ದರೂ, ಮನು ಜರೆಲ್ಲರೂ ಸಮಾನರು. ಶಾಸ್ತ್ರಗಳ ಹೆಸರಿನಲ್ಲಿ ಕೆಲವು ಪಂಡಿತರು ಏನು ಬೋಧಿಸಿದ್ದರೋ ಅದು ಸುಳ್ಳು. ಜಾತಿ ಹಿರಿಮೆಯ ಭ್ರಮೆಯಿಂದ ನಮ್ಮನ್ನು ಹಾದಿತಪ್ಪಿಸಲಾಗಿದೆ. ಅಂಥ ಭ್ರಮೆಯನ್ನು ಬದಿಗೊತ್ತಬೇಕಿದೆ ಎಂದಿದ್ದರು.
ಭಾಗವತ್ ಅವರು ಬ್ರಾಹ್ಮಣ ವರ್ಗವನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದರು ಎನ್ನುವ ಮಾತು ಕೇಳಿಬಂದಿತ್ತು.ಈ ಹಿನ್ನೆಲೆಯಲ್ಲಿ ಸುನಿಲ್ ಅಂಬೇಕರ್ ಸ್ಪಷ್ಟನೆ ನೀಡಿದ್ದಾರೆ.
ಬಿಹಾರ ಕೋರ್ಟ್ನಲ್ಲಿ ಅರ್ಜಿ: ಪಂಡಿತರನ್ನು ಉಲ್ಲೇಖೀಸಿ ಭಾಗವತ್ ಅವರು ನೀಡಿರುವ ಹೇಳಿಕೆಯು
ಬ್ರಾಹ್ಮಣ ಅರ್ಚಕ ಸಮುದಾಯವನ್ನು ಗುರಿ ಯಾ ಗಿಸಿದ್ದಾಗಿದೆ. ಈ ಮೂಲಕ ಬ್ರಾಹ್ಮಣರ ಧಾರ್ಮಿಕ ಭಾವ ನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಬಿಹಾರ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಸುಧೀರ್ ಕುಮಾರ್ ಓಜಾ ಎನ್ನುವ ವಕೀಲರು ಅರ್ಜಿ ಸಲ್ಲಿಸಿದ್ದು, ಪ್ರಕರಣ ಸಂಬಂಧಿಸಿದ ವಿಚಾರಣೆಯನ್ನು ನ್ಯಾಯಾಲಯ ಜ.20ಕ್ಕೆ ಪಟ್ಟಿ ಮಾಡಿದೆ.