ಧೈರ್ಯ, ಸಾಹಸಕ್ಕೆ ಗ್ರೆನೇಡಿಯರ್‌ ರೆಜಿಮೆಂಟ್‌


Team Udayavani, Jul 18, 2021, 1:12 PM IST

ಧೈರ್ಯ, ಸಾಹಸಕ್ಕೆ ಗ್ರೆನೇಡಿಯರ್‌ ರೆಜಿಮೆಂಟ್‌

ಭಾರತೀಯ ಸೈನ್ಯದಲ್ಲಿ ವೀರಮರಣವನ್ನು ಹೊಂದಿದ ಸೈನಿಕರ ಹೆಸರುಗಳನ್ನು, ಅವರುಗಳ ವೀರಗಾಥೆಗಳನ್ನು ಆಲಿಸಿದಾಗ ಒಮ್ಮೆಯಾದರೂ ಮೈ ರೋಮಾಂಚನಗೊಂಡು ಕಣ್ಣುಗಳಲ್ಲಿ ಅಶ್ರು ಸುರಿಯದೇ ಇರದು. ಅಂತಹ ಪರಣತಿ ಸಿಂಹಪುರುಷರನ್ನು ರಾಷ್ಟ್ರ ಸೇವೆಗಾಗಿ ಗಟ್ಟಿಗುಂಡಿಗೆಯ ವೀರರನ್ನಾಗಿ ಶಕ್ತಿಸುವಲ್ಲಿ ದಿ ಗ್ರೆನೇಡಿಯರ್‌ ರೆಜಿಮೆಂಟ್‌ನ ಕಾರ್ಯ ಶ್ಲಾಘನೀಯ.

ದಿ ಗ್ರೆನೇಡಿಯರ್‌ ರೆಜಿಮೆಂಟ್‌ ಇತಿಹಾಸವನ್ನು ನೋಡ ಹೋದರೆ ಕಾಮನ್‌ವೆಲ್ತ್‌ನಲ್ಲಿನ ಸೈನ್ಯದ ಅತ್ಯಂತ ಹಳೆಯ ಗ್ರೆನೇಡಿಯರ್‌ ರೆಜಿಮೆಂಟ್‌ ಭಾರತೀಯ ಸೈನ್ಯಕ್ಕೆ ಸೇರಿದೆ. ನಮ್ಮ ಭಾರತೀಯ ಸೈನ್ಯದಲ್ಲಿ ಅತ್ಯಂತ ಹಳೆಯ, ನುರಿತ ಹಾಗೂ ತನ್ನ ಅಸ್ತಿತ್ವವನ್ನು ನಶಿಸಿಹೋಗದಂತೆ ಕಾರ್ಯ ನಿರ್ವಹಿಸಿಕೊಂಡು ಇಂದಿಗೂ ಇತಿಹಾಸದ ಪುಟಗಳಲ್ಲಿ ತನ್ನ ಇರುವಿಕೆಯನ್ನು ದಿ ಗ್ರೆನೇಡಿಯರ್‌ ರೆಜಿಮೆಂಟ್‌ ದೇಶ ಸೇವೆಗೆ ಆಧಾರವಾಗಿ ಉನ್ನತ ಮಟ್ಟದಲ್ಲಿ ನಿಂತಿದೆ.

ಈ ರೆಜಿಮೆಂಟ್‌ನ ಲಾಂಛನ  “ಜ್ವಾಲೆಯನ್ನು ಹೊರಹಾಕುವ ಗ್ರನೇಡ್‌’ ಆಗಿದೆ. ಬ್ರಿಟಿಷ್‌ ಹೆರಾಲ್ಡಿ†ಯ ಸಂಕೇತವಾದ ಹ್ಯಾನೋವರ್‌ನ ವೈಟ್‌ ಹಾರ್ಷ್‌ ಗ್ರನೇಡ್‌ ನ ಮಧ್ಯಭಾಗದಲ್ಲಿದೆ. “ಸರ್ವದಾ ಶಕ್ತಿಶಾಲಿ’ ಇದು ದಿ ಗ್ರೆನೇಡಿಯರ್‌ ರೆಜಿಮೆಂಟ್‌ನ ಧ್ಯೇಯವಾಕ್ಯ. ಭಾರತೀಯ ಗ್ರೆನೇಡಿಯರ್ಸ್‌ ಇತಿಹಾಸವು ಬಾಂಬೆ ಪ್ರಸಿಡೆನ್ಸಿಯ ಸೈನ್ಯಕ್ಕೆ ನೇಮಕಗೊಂಡ ಸೈನಿಕರೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಗ್ರೆನೇಡಿಯರ್ಸ್‌ ಕಂಪೆನಿಯೊಂದರ ಮೊದಲ ಉಲ್ಲೇಖವು 1684ರಲ್ಲಿ ಕಾಣಸಿಗುತ್ತದೆ. ಬಾಂಬೆ ದ್ವೀಪವನ್ನು ಸ್ವಾಧೀನಪಡಿಸಿಕೊಂಡ ಮತ್ತು ಯುರೋಪಿಯನ್ನರನ್ನು ಹಾಗೂ ಸ್ಥಳೀಯ ಕ್ರಿಶ್ಚಿಯನ್ನರ ಮೂರು ಕಂಪೆನಿಗಳನ್ನು ಒಳಗೊಂಡ ಇಂಗ್ಲಿಷ್‌ ಸೈನ್ಯದ ಸ್ವಲ್ಪ ಭಾಗವು ಗ್ರೆನೇಡಿಯರ್‌ ಕಂಪೆನಿಯನ್ನು ಹೊಂದಿತ್ತು. ತರುವಾಯ ಈ ಘಟಕದ ಅಸ್ತಿತ್ವ ಪ್ರಚಲಿತದಲ್ಲಿ ಇರದೇ ಹೋಯಿತು. ಆದರೆ 1710ರಲ್ಲಿ ಬಾಂಬೆ ಸೈನ್ಯವು “ಯುರೋಪಿಯನ್ನರು ಟೋಪಾಸಗಳು( ಭಾರತೀಯ ಕ್ರಿಶ್ಚಿಯನ್ನರು ), ಮತ್ತು ಕಾಫಿರರು ಅಥವಾ ಆಫ್ರಿಕನ್‌ ಗುಲಾಮರು’ ಸಹಿತ ಐದು ಕಂಪೆನಿಗಳನ್ನು ಒಳಗೊಂಡಿತ್ತು. ಅದರಲ್ಲಿ ಮೊಟ್ಟಮೊದಲ ಕಂಪೆನಿ ಯುರೋಪಿಯನ್‌ ಗ್ರೆನೇಡಿಯರ್‌ ಆಗಿತ್ತು.

ಭಾರತದಲ್ಲಿ 1757 ರಲ್ಲಿ, ರಾಬರ್ಟ್‌ ಕ್ಲೈವ್‌ ಬಂಗಾಲ ಸ್ಥಳೀಯ ಕಾಲಾಳುಪಡೆ ಒಂದನೇ ರೆಜಿಮೆಂಟ್‌ನ್ನು ಬೆಳೆಸಿದರು. ಅದರಲ್ಲಿ ಎರಡು ಕಂಪೆನಿಗಳು ಗ್ರೆನೇಡಿಯರ್‌ ಕಂಪೆನಿಗಳಾಗಿವೆ. ಇದಾಗಿ 1779ರಲ್ಲಿ ಪುನಃ ರಚನೆಯಾಗುವ ವರೆಗೂ ಬಂಗಾಳ ಸೇನೆಯಿಂದ ಯಾವುದೇ ಗ್ರೆನೇಡಿಯರ್‌ ರೆಜಿಮೆಂಟ್‌ಗಳನ್ನು ರಚಿಸಲಾಗಿಲಿಲ್ಲ.

ಅನಂತರದ ದಿನಗಳಲ್ಲಿ ಬಾಂಬೆ ಸೈನ್ಯವು ಹಲವಾರು ಸಿಪಾಯಿ ಬೆಟಾಲಿಯನ್‌ಗಳನ್ನು ಒಳಗೊಂಡು, ಪ್ರತಿಯೊಂದು ಒಂದು ಅಥವಾ ಎರಡು ಗ್ರೆನೇಡಿಯರ್‌ ಕಂಪೆನಿಗಳಾಗಿ ರಚನೆಯಾಯಿತು. ಇವುಗಳನ್ನು ಬಾಂಬೆ ಸಿಪಾಯಿಯ ಬೆಟಾಲಿಯನ್‌ಗಳ ಗ್ರೆನೇಡಿಯರ್‌ ಕಂಪೆನಿಗಳನ್ನು ಒಳಗೊಂಡ ಸಂಯೋಜಿತ ಬೆಟಾಲಿಯನ್‌ನ ಆಗಿ ಕೊಡಿಸಲಾಯಿತು. 1778ರಲ್ಲಿ ಪ್ರಸಿದ್ಧ ಐತಿಹಾಸಿಕ ಯುದ್ಧಗಳ ಸಾಲಿನಲ್ಲಿ ನಿಲ್ಲುವ ತಲೇಗಾಂವ್‌ ಯುದ್ಧದಲ್ಲಿ ವಿಜಯ ಪತಾಕೆಯನ್ನು ಹಾರಿಸಿತ್ತು. ಈ ಸಂಯೋಜಿತ ಬೆಟಾಲಿಯನ್ನ ಕಾರ್ಯಕ್ಷಮತೆ ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ ಬಾಂಬೆ ಪ್ರಸಿಡೆನ್ಸಿ ಗ್ರೆನೇಡಿಯರ್‌ ಬೆಟಾಲಿಯನ್‌ ಅನ್ನು ಶಾಶ್ವತವಾಗಿ ವರ್ಧಿಸಲು ಆದೇಶಿಸಿತು. ಮಾರ್ಚ್‌ 12, 1779 ರಂದು ಮೊದಲ ಬಾರಿಗೆ ಮೂವತ್ತಾರು ವರ್ಷಗಳ ಹಿಂದಿನ ಬ್ರಿಟಿಷ್‌ ಬೆಟಾಲಿಯನ್‌ ಗೆ “ಗ್ರೆನೇಡಿಯರ್‌” ಎಂದು ಕರೆಯುವ ಗೌರವವನ್ನು ನೀಡಲಾಯಿತು.

ಬಾಂಬೆಯ ಗವರ್ನರ್‌ಜನರಲ್‌ ನವೆಂಬರ್‌ 12, 1779ರಲ್ಲಿ ಈ ಆದೇಶವನ್ನು ಹೊರಡಿಸಿದರು. ಅದರ ಪ್ರಕಾರ ಐದು ರೆಜಿಮೆಂಟ್‌ಗಳ ಗ್ರೆನೇಡಿಯರ್‌ ಕಂಪೆನಿಗಳು ಸೇರಿ ವಿಶ್ವದ ಮೊಟ್ಟ ಮೊದಲ ಗ್ರೆನೇಡಿಯರ್‌ ರೆಜಿಮೆಂಟ್‌ ಅನ್ನು ರೂಪಿಸಿದವು. ಭಾರತದ ಅತ್ಯುನ್ನತ ಪದಕವಾದ ಪರಮವೀರ ಚಕ್ರಗಳನ್ನು ಪಡೆದಿರುವ ಗ್ರೆನೇಡಿಯರ್‌ರೆಜಿಮೆಂಟ್‌ಗೆ ವಿಶೇಷ ಗೌರವವಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಗ್ರೆನೇಡಿಯರ್ಸ್‌ನೊಂದಿಗೆ ಸೇವೆಸಲ್ಲಿಸಿದ ಬ್ರಿಟಿಷ್‌ ಅಧಿಕಾರಿಗಳು ನಾಲ್ಕು ವಿಕ್ಟೋರಿಯಾ ಕ್ರಾಸ್‌ಗಳನ್ನು ಗೆದ್ದು ಸಾಧನೆ ಮಾಡಿದ್ದು ವಿಶೇಷ. ಪ್ರತೀ ಗಾರ್ಡ್‌ ನ ರೆಜಿಮೆಂಟ್‌ನ ಸಾರ್ವಭೌಮ ಕಂಪೆನಿಯಲ್ಲಿ ಮೊದಲ ಬಾರಿಗೆ ಮಹಿಳೆಯರಿಗೂ ಸೇವೆ ಸಲ್ಲಿಸಲು ಅವಕಾಶವಿರುತ್ತದೆ. ಉನ್ನತ ಘಟಕವು ಸಾಮಾನ್ಯವಾಗಿ ಬೆಟಾಲಿಯನ್‌ನ ಬಲಿಷ್ಠ ಹಾಗೂ ಎತ್ತರದ ಯೋಧರನ್ನು ಒಳಗೊಂಡಿರುತ್ತದೆ. ಅಂತಹ ಯೋಧರು ಸರಾಸರಿ 6 ಫೀಟ್‌, 2 ಇಂಚ್‌ ಇರುತ್ತಾರೆ.

ದಿ ಗ್ರೆನೇಡಿಯರ್‌ ರೆಜಿಮೆಂಟ್‌ ಮೊದಲನೆಯ ಮಹಾಯುದ್ಧದ ಮುನ್ನವೇ 17 ಪ್ರಮುಖ ಯುದ್ಧ ಗೌರವಗಳನ್ನು ಗಳಿಸಿತ್ತು. ಮೊದಲ ಮತ್ತು 2ನೇ  ಮಹಾಯುದ್ಧದಲ್ಲಿ ರೆಜಿಮೆಂಟ್‌ ಸುಮಾರು 22 ಗೌರವಗಳನ್ನು ಜಯಸಿತು. 2015ರಲ್ಲಿ 2ನೇ ಮಹಾಯುದ್ಧವನ್ನು ಕೊನೆಗೊಳಿಸಿದ ಯುರೋಪಿನಲ್ಲಿ ವಿಜಯದ 20ನೇ ವರ್ಷಾಚರಣೆಯ ನೆನಪಿಗೆ ನಡೆದ ಮಾಸ್ಕೋ ವಿಜಯ ದಿನದಂದು ದಿ ಗ್ರೆನೇಡಿಯರ್‌ ರೆಜಿಮೆಂಟ್‌ನ ಗ್ರೇನೆಡಿಯರ್ಸ್‌ಗಳು ನಮ್ಮ ಭಾರತವನ್ನು ಪ್ರತಿನಿಧಿಸಿದ್ದರು.

ಸಹನಾ

ತುಮಕೂರು ವಿಶ್ವವಿದ್ಯಾನಿಲಯ

ಟಾಪ್ ನ್ಯೂಸ್

13

Poonam Pandey: ನನ್ನ ಬೆತ್ತಲೆ ವಿಡಿಯೋ ಲೀಕ್‌ ಮಾಡಿದ್ದೇ ನನ್ನ ಮಾಜಿ ಗೆಳೆಯ – ಪೂನಂ ಪಾಂಡೆ

12-hondisi-bareyiri

YouTube ನಲ್ಲಿ ಹೊಂದಿಸಿ ಬರೆಯಿರಿ; ಉಚಿತವಾಗಿ ನೋಡಿ, ಇಷ್ಟವಾದರೆ ಕಾಸು ಹಾಕಿ…

Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ

Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ

11

ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಸರ್ಕಾರದ ಪರ ಮೃದು ಧೋರಣೆ ಇಲ್ಲ: ಮೃತ್ಯುಂಜಯ ಸ್ವಾಮೀಜಿ

Hasan: ಲೈಂಗಿಕ ದೌರ್ಜನ್ಯ ಪ್ರಕರಣ; 20 ದಿನಗಳ ನಂತರ ತವರಿಗೆ ಆಗಮಿಸಿದ ಎಚ್.ಡಿ.ರೇವಣ್ಣ

Hasan: ಲೈಂಗಿಕ ದೌರ್ಜನ್ಯ ಪ್ರಕರಣ; 20 ದಿನಗಳ ನಂತರ ತವರಿಗೆ ಆಗಮಿಸಿದ ಎಚ್.ಡಿ.ರೇವಣ್ಣ

9

ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿದ್ದ ಪತ್ನಿ ಮೇಲೆ ಬ್ಲೇಡ್‌ನಿಂದ ಹಲ್ಲೆ ಮಾಡಿ ಪರಾರಿಯಾದ ಪತಿ

8

ಪತಿಯಿಂದಲೇ ಭೀಕರವಾಗಿ ಹತ್ಯೆಗೀಡಾದ ಸ್ಯಾಂಡಲ್‌ ವುಡ್‌ ನಟಿ, ಕಾಂಗ್ರೆಸ್‌ ಮುಖಂಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Kind: ಕರುಣೆ ಎಂಬ ಒಡವೆ ತೆಗೆಯದಿರು 

8-uv-fusion

Smile: ನಗುವೇ  ನೆಮ್ಮದಿಗೆ ಸ್ಫೂರ್ತಿ, ಗೆಲುವಿನ ಶಕ್ತಿ

7-uv-fusion

Cleanliness: ಪ್ರವಾಸಿ ತಾಣ ನಮ್ಮ ಆಸ್ತಿ: ಸ್ವಚ್ಛವಾಗಿರಿಸೋಣ

6-uv-fusion

Uv Fusion: ಮೈಮನ ಪುಳಕಿತಗೊಳಿಸುವ ಅಯ್ಯನಕೆರೆ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

14-thirthahalli

Thirthahalli: ಸಾಲ ಬಾಧೆಯಿಂದ ರೈತ ಆತ್ಮಹತ್ಯೆ

13

Poonam Pandey: ನನ್ನ ಬೆತ್ತಲೆ ವಿಡಿಯೋ ಲೀಕ್‌ ಮಾಡಿದ್ದೇ ನನ್ನ ಮಾಜಿ ಗೆಳೆಯ – ಪೂನಂ ಪಾಂಡೆ

13-ragini-dance

Ragini Dwivedi; ಸಂಜು ಜೊತೆ ರಾಗಿಣಿ ಡ್ಯಾನ್ಸ್‌ ; ಮಂಗ್ಲಿ ಹಾಡಿಗೆ ಭರ್ಜರಿ ಸ್ಟೆಪ್

12-hondisi-bareyiri

YouTube ನಲ್ಲಿ ಹೊಂದಿಸಿ ಬರೆಯಿರಿ; ಉಚಿತವಾಗಿ ನೋಡಿ, ಇಷ್ಟವಾದರೆ ಕಾಸು ಹಾಕಿ…

11-gadaga

ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಹಾಳು ಮಾಡುತ್ತಿದೆ:ವಿ.ಪ. ಸದಸ್ಯ ಎಸ್.ವಿ. ಸಂಕನೂರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.