ನೇಮಕವಾಗದ ನಿರ್ದೇಶಕರ ಹುದ್ದೆ, ಸಾಂಸ್ಕೃತಿಕ ಚಟುವಟಿಕೆ ಸ್ತಬ್ಧ- ರಂಗಾಯಣಗಳ ಅಂಗಳ ಭಣಭಣ


Team Udayavani, Dec 29, 2023, 11:21 PM IST

drama

ಕಾರ್ಕಳ: ನಾಡಿನ ರಂಗ ಸಂಸ್ಕೃತಿಯನ್ನು ಶ್ರೀಮಂತಗೊಳಿಸಲು ರಾಜ್ಯದ 6 ಕಡೆ ಸರಕಾರ ಆರಂಭಿಸಿದ್ದ ರಂಗಾಯಣಗಳಿಗೆ ಇನ್ನೂ ನಿರ್ದೇಶಕರ ನೇಮಕವಾಗಿಲ್ಲ. ಜತೆಗೆ ನಿರೀಕ್ಷಿತ ಅನುದಾನವೂ ಬಿಡುಗಡೆಯಾಗದ ಕಾರಣ ರಂಗಾಯಣಗಳೆಲ್ಲಾ ಭಣಗುಡುತ್ತಿವೆ.

ಮೈಸೂರು, ಧಾರವಾಡ, ಶಿವಮೊಗ್ಗ, ಕಲಬುರ್ಗಿ, ದಾವಣೆಗೆರೆ, ಉಡುಪಿ (ಕಾರ್ಕಳ) ಯಕ್ಷರಂಗಾಯಣ ಸೇರಿ ಆರು ಕಡೆ ರಂಗಾಯಣಗಳು ಕಾರ್ಯ ನಿರತವಾಗಿವೆ. ಹೊಸ ಸರಕಾರ ಬಂದು ಆರು ತಿಂಗಳಾಗುತ್ತಿದ್ದರೂ ಈವರೆಗೂ ನೂತನ ನಿರ್ದೇಶಕರ ನೇಮಕವಾಗಿಲ್ಲ. ಇದರ ಆಡಳಿತ ಮಂಡಳಿಯಂತಿರುವ ರಂಗಸಮಾಜಕ್ಕೂ ಸದಸ್ಯರ ನೇಮಕವಾಗಿಲ್ಲ. ಹಾಗಾಗಿ ಬಹುತೇಕ ರಂಗಾಯಣಗಳು ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.

ಬಿಜೆಪಿ ಸರಕಾರವಿದ್ದಾಗ ಐದು ಕಡೆ ನಿರ್ದೇಶಕರು ತಮ್ಮ ಅಧಿಕಾರವಧಿ ಮೂರು ವರ್ಷ ಮುಗಿದು ಹೆಚ್ಚುವರಿಯಾಗಿ 5 ತಿಂಗಳು ಕಾರ್ಯ ನಿರ್ವಹಿಸಿದ್ದರು. ಬಳಿಕ ಬಂದ ಹೊಸ ನಿಗಮ ಮಂಡಳಿಗಳ ಅಧ್ಯಕ್ಷರು, ಅಕಾಡೆಮಿ, ರಂಗಾಯಣ ಅಧ್ಯಕ್ಷರು-ನಿರ್ದೇಶಕರ ನೇಮಕಾತಿ ರದ್ದುಗೊಳಿಸಿ ನಿರ್ದೇಶಕರ ನೇಮಕ ರದ್ದುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಉಡುಪಿ (ಕಾರ್ಕಳ) ಯಕ್ಷರಂಗಾಯಣದ ನಿರ್ದೇಶಕರ ಅವಧಿ ಒಂದೇ ವರ್ಷದಲ್ಲಿ ಕೊನೆಗೊಂಡಿತ್ತು.

ಸದ್ಯಕ್ಕೆ ರಂಗಾಯಣದಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿಲ್ಲವಾದ್ದರಿಂದ ರಂಗಶಾಲೆಯ ಕಲಾವಿದರು, ಸಿಬಂದಿಗೆ ಕೆಲಸವಿಲ್ಲದಂತಾಗಿದೆ. ಕೆಲವೆಡೆ ರಂಗಶಾಲೆಯ ಕಲಾವಿದರು ರಂಗಾಯಣದಿಂದ ಹೊರಬರುತ್ತಿದ್ದಾರೆ. ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳ ರಂಗಾಯಣ ದಲ್ಲಿ ಆಡಳಿತಾಧಿಕಾರಿಗಳಿದ್ದು, ತಿಂಗಳಿಗೆ ಒಂದು ಕಾರ್ಯಕ್ರಮವನ್ನು ಸಂಘಟಿಸಲಾಗುತ್ತಿದೆ.

ಅನುದಾನವೂ ಇಳಿಮುಖ
ಆರಂಭದಲ್ಲಿ ಪ್ರತೀ ವರ್ಷ 1 ಕೋ.ರೂ ಅನುದಾನ ರಂಗಾಯಣಕ್ಕೆ ಸಿಗುತ್ತಿತ್ತು. ಬಳಿಕ ರೂ. 75 ಲಕ್ಷ, ರೂ. 50 ಲಕ್ಷ, ರೂ. 40 ಲಕ್ಷ ರೂ. ಗೆ ಇಳಿಯಿತು. ಪ್ರಸಕ್ತ ಸಾಲಿನಲ್ಲಿ ಅದು 20 ಲಕ್ಷ ರೂ. ಗಳಿಗೆ ಮಿತಿಗೊಂಡಿದೆ. ಈ ಹಣ ಸಿಬಂದಿ ವೇತನ, ಕಲಾವಿದರ ವೇತನ, ತರಬೇತಿ ಇತ್ಯಾದಿಗೇ ಸಾಲುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಧೂಳು ತಿನ್ನುತ್ತಿವೆ ಪರಿಕರ
ಕೇಂದ್ರಗಳು ಚಟುವಟಿಕೆ ನಿಲ್ಲಿಸಿದ್ದರಿಂದ ಲಕ್ಷಾಂತರ ರೂ. ಮೌಲ್ಯದ ರಂಗ ಪರಿಕರಗಳು ಧೂಳು ಹಿಡಿದಿವೆ. ರಂಗಕಲೆಗೆ ಶಕ್ತಿ ತುಂಬಲು ಆರಂಭವಾದ ರಂಗಾಯಣಗಳ ಬಗ್ಗೆ ಸರಕಾರ ಕೂಡಲೇ ಗಮನಹರಿಸಬೇಕು ಎಂಬುದು ರಂಗಾಸಕ್ತರ ಆಗ್ರಹ.

ಅಕಾಡೆಮಿಗಳಿಗೆ ನೇಮಕ
‌ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯ ಕರ್ನಾಟಕ ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ, ಸಂಗೀತ ನೃತ್ಯ ಅಕಾಡೆಮಿ, ಜಾನಪದ ಅಕಾಡೆಮಿ, ಶಿಲ್ಪಕಲಾ ಅಕಾಡೆಮಿ, ತುಳು ಅಕಾಡೆಮಿ, ಲಲಿತಾಕಲಾ ಅಕಾಡೆಮಿ, ಯಕ್ಷಗಾನ ಅಕಾಡೆಮಿ, ಅರೆಭಾಷೆ ಅಕಾಡೆಮಿ, ಕೊಂಕಣಿ ಸಾಹಿತ್ಯ ಅಕಾಡೆಮಿ, ಕೊಡವ ಅಕಾಡೆಮಿ, ಬ್ಯಾರಿ ಅಕಾಡೆಮಿ, ಬಯಲಾಟ ಅಕಾಡೆಮಿ, ಲಂಬಾಣಿ ಭಾಷಾ ಅಕಾಡೆಮಿಗಳಿಗೆ ನಿರ್ದೇಶಕರ ನೇಮಕವಾಗಬೇಕಿದೆ.

ಈ ಕುರಿತು ಸರಕಾರದ ಮಟ್ಟದಲ್ಲಿ ತೀರ್ಮಾನವಾಗಿದ್ದು, ಒಂದು ತಿಂಗಳೊಳಗೆ ನಿರ್ದೇಶಕರ ಹೆಸರನ್ನು ಪ್ರಕಟಿಸಲಾಗುವುದು. ರಂಗಭೂಮಿ, ಸಾಂಸ್ಕೃತಿಕ ಚಟುವಟಿಕೆ ಕುಂಠಿತವಾಗದಂತೆ ಗಮನ ಹರಿಸಲಾಗುವುದು.
– ಡಾ| ಎಸ್‌. ಮಂಜುಳಾ, ಮುಖ್ಯ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು

ಟಾಪ್ ನ್ಯೂಸ್

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

5-belagavi

Belagavi: ಗಡಿ ಹೋರಾಟದಲ್ಲಿ‌ ಯಶಸ್ವಿಯಾಗಲು ಒಂದಾಗಿ: ಮನೋಜ್‌ ಜರಾಂಗೆ ಪಾಟೀಲ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.