ನದಿಯು ಭೂಪಟವನ್ನು ಅನುಸರಿಸುವುದಿಲ್ಲ!


Team Udayavani, Feb 22, 2021, 6:00 AM IST

ನದಿಯು ಭೂಪಟವನ್ನು ಅನುಸರಿಸುವುದಿಲ್ಲ!

ನಾಳೆ ಏನಾಗುತ್ತದೆ ಎಂಬುದನ್ನು ಯಾರೂ ಖಚಿತವಾಗಿ ಹೇಳಲಾರರು. ಕೆಲವನ್ನು ಊಹಿಸಬಹುದು – ಹೀಗಾಗ ಬಹುದು, ಹಾಗಾಗಬಹುದು. ಆದರೆ ನಿಜವಾಗಿಯೂ ಏನು ನಡೆಯುತ್ತದೆ ಎಂಬುದು ಆ ಕ್ಷಣದ ಸತ್ಯ. ನಾಳೆ ಬಿಡಿ, ಇವತ್ತು ಮಧ್ಯಾಹ್ನ, ಇವತ್ತು ಸಂಜೆ, ಮುಂದಿನ ಒಂದು ತಾಸಿನಲ್ಲಿ ನಾವು ಅಂದುಕೊಂಡದ್ದು ನಡೆಯದೇ ಇರ ಬಹುದು. ಅನಿರೀಕ್ಷಿತವಾದದ್ದು ಘಟಿಸ ಬಹುದು. ಬದುಕು ಅಷ್ಟು ಅನೂಹ್ಯ. ಹಾಗಾಗಿ ಆಶಾವಾದದ ಜತೆಗೆ ಬದುಕಿನ ಹರಿವಿನಲ್ಲಿ ತೇಲಿ ಹೋಗುವುದು ಮಾತ್ರ ನಮ್ಮ ಮುಂದಿನ ಆಯ್ಕೆ. ಬದುಕು ನಾವು ಕಟ್ಟಿ ಕೊಳ್ಳುವ ಯಾವುದೇ ತರ್ಕ, ಯೋಜನೆಗಳನ್ನು ಲೆಕ್ಕಿಸುವುದಿಲ್ಲ. ಹಾಗಾಗಿ ನಿರೀಕ್ಷೆಗಳನ್ನು ಇರಿಸಿ ಕೊಂಡರೆ ನಿರಾಶೆ ತಪ್ಪಿದ್ದಲ್ಲ.

ಇಲ್ಲೊಂದು ಕಥೆ.
ಒಂದೂರಿನಲ್ಲಿ ಒಬ್ಬ ಪಂಡಿತರಿದ್ದರು. ಅವರ ಊರಿನ ಬದಿಯಲ್ಲಿ ಒಂದು ನದಿ ಹರಿಯುತ್ತಿತ್ತು. ಒಂದು ದಿನ ನದಿಯಲ್ಲಿ ಸ್ನಾನ ಮುಗಿಸಿ ಏಳುವಾಗ ಈ ನದಿಯ ಗುಂಟ ಸಮುದ್ರದ ವರೆಗೆ ಒಮ್ಮೆ ಹೋಗಿ ಬಂದರೆ ಹೇಗೆ ಎಂಬ ಆಲೋಚನೆ ಅವರ ತಲೆಯಲ್ಲಿ ಮೊಳೆಯಿತು. ನದಿ ಯುದ್ದಕ್ಕೂ ಸಮುದ್ರ ಸೇರುವಲ್ಲಿಯ ವರೆಗೆ ಸಾಗುವುದು ಹೊಸ ಸಾಹಸ ವಾದೀತಲ್ಲ ಎಂಬುದು ಅವರ ಚಿಂತನೆ.

ಸರಿ, ಈ ಹಿಂದೆ ಇಂಥ ಸಾಹಸವನ್ನು ಯಾರಾದರೂ ಮಾಡಿದ್ದಾರೆಯೇ ಎಂದು ಅವರು ಸಂಶೋಧನೆ ಆರಂಭಿಸಿದರು. ಕೆಲವು ಶತಮಾನಗಳ ಅಂತರದಲ್ಲಿ ನಾಲ್ಕೈದು ಮಂದಿ ನದಿ ಪಾತ್ರದುದ್ದಕ್ಕೆ ಪ್ರಯಾಣಿಸಿದ್ದ ಮಾಹಿತಿ ಸಿಕ್ಕಿತು. ಇನ್ನಷ್ಟು ವಿವರಗಳಿಗಾಗಿ ಗ್ರಂಥಾ ಲಯಗಳಲ್ಲಿ ತಡಕಾಡಿದರೆ ಕೆಲವು ಗ್ರಂಥ ಗಳು, ನಕಾಶೆಗಳು ಕೂಡ ಲಭಿಸಿದವು.

ಗ್ರಂಥಗಳನ್ನು ಅಧ್ಯಯನ ಮಾಡಿ ದಾಗ ಪಂಡಿತರಿಗೆ ವಿವರಗಳಲ್ಲಿ ವ್ಯತ್ಯಾಸಗಳು ಇರುವುದು ಅರಿವಿಗೆ ಬಂತು. ನದಿಯಲ್ಲಿ ಹತ್ತು ಮೈಲು ಸಾಗಿದ ಮೇಲೆ ಒಂದು ಹಳ್ಳಿ ಸಿಗುತ್ತದೆ ಎಂದು ಒಂದು ಗ್ರಂಥದಲ್ಲಿ ಬರೆದಿದ್ದರೆ ಇನ್ನೊಂದು ಗ್ರಂಥದಲ್ಲಿ ಇಪ್ಪತ್ತು ಮೈಲು ಕಳೆದ ಬಳಿಕ ಒಂದು ನಗರ ಸಿಗುತ್ತದೆ ಎಂದಿತ್ತು. ಭೂಪಟಗಳು ಕೂಡ ಹೀಗೆಯೇ ಇದ್ದವು. ಒಂದರಲ್ಲಿ ನದಿ ಎಡಕ್ಕೆ ತಿರುಗುತ್ತದೆ ಎಂದಿದ್ದರೆ ಇನ್ನೊಂದ ರಲ್ಲಿ ಬಲಕ್ಕೆ ಹೊರಳುತ್ತದೆ ಎಂದಿತ್ತು.

ಗೊಂದಲಕ್ಕೀಡಾದ ಪಂಡಿತರು ನದಿ ಯಲ್ಲಿ ಪ್ರವಾಸ ಹೋದವರನ್ನು ಸಂದರ್ಶಿಸಲು ಆರಂಭಿಸಿದರು. ಜನರು ಕೊಟ್ಟ ಉತ್ತರಗಳು ಕೂಡ ಹಾಗೆಯೇ ಇದ್ದವು. ಕೆಲವರು ಸುಳ್ಳು ಸುಳ್ಳೇ ತಾವು ಕೂಡ ನದಿಯಲ್ಲಿ ಪ್ರವಾಸ ಹೋಗಿದ್ದೇವೆ ಎಂದು ಹೇಳಿ ಉಚಿತ ಸಲಹೆಗಳನ್ನು ಕೊಟ್ಟರು. ಒಟ್ಟಾರೆ ಗೊಂದಲವೋ ಗೊಂದಲ.

ಕೊನೆಗೆ ಲಭ್ಯವಿದ್ದ ಎಲ್ಲ ಮಾಹಿತಿ ಒಟ್ಟು ಗೂಡಿಸಿ ಪಂಡಿತರು ತಮ್ಮದೇ ಆದ ಒಂದು ಭೂಪಟ ತಯಾರಿಸಿದರು. ಅದನ್ನು ಹಿಡಿದು ಕೊಂಡು ಒಂದು ದೋಣಿಯೇರಿ ಯಾನ ಆರಂಭಿಸಿದರು.

ಯಾನದಲ್ಲಿ ಮತ್ತೆ ತೊಂದರೆಗಳು! ಐದು ಮೈಲು ದೂರ ಹೋಗಬೇಕಾದರೆ ನದಿ ಎಡಕ್ಕೆ ತಿರುಗಿತು. ಆದರೆ ಭೂಪಟದ ಪ್ರಕಾರ ಅದು ಬಲಕ್ಕೆ ತಿರುಗಬೇಕಿತ್ತು. ಇಪ್ಪತ್ತು ಮೈಲು ದೂರದಲ್ಲಿ ಒಂದು ಜಲಪಾತ ಸಿಕ್ಕಿತು. ಭೂಪಟದಲ್ಲಿ ಅದರ ಉಲ್ಲೇಖವೇ ಇರಲಿಲ್ಲ. ಐವತ್ತು ಮೈಲು ಕಳೆಯುವಷ್ಟರಲ್ಲಿ ಒಂದು ಹಳ್ಳಿ ಸಿಗುತ್ತದೆ, ಅಲ್ಲಿ ಊಟ ಪೂರೈಸಬಹುದು ಎಂದು ಲೆಕ್ಕಾಚಾರ ಹಾಕಿದ್ದರು. ಹಳ್ಳಿ ಸಿಗಲೇ ಇಲ್ಲ. ಭೂಪಟದಲ್ಲಿ ಹೇಳಿದ್ದನ್ನು ನದಿ ಅನುಸರಿಸುತ್ತಲೇ ಇರಲಿಲ್ಲ.

ಕೊನೆಗೆ ಅವರು ಸ್ವಲ್ಪ ಹೊತ್ತು ದೋಣಿ ಯನ್ನು ಅದರ ಪಾಡಿಗೆ ತೇಲಲು ಬಿಟ್ಟು ಮೌನವಾಗಿ ಕುಳಿತರು. ಆ ಮೌನದಲ್ಲಿ ಅವರ ತಲೆಯೊಳಗೆ ಒಂದು ಬೆಳಕು ಹುಟ್ಟಿತು- “ತೊಂದರೆ ಹುಟ್ಟಿಕೊಳ್ಳುತ್ತಿರು ವುದು ನನ್ನ ಭೂಪಟದಿಂದ; ನದಿಯಿಂದ ಅಲ್ಲ. ನದಿ ನನಗಿಂತ ಮೊದಲೇ ಇಲ್ಲಿತ್ತು. ಈಗ ನಾನು ಇಲ್ಲಿ ತೇಲುತ್ತಿದ್ದೇನೆ ಎಂಬುದು ಅದಕ್ಕೆ ಗೊತ್ತಿರಲಾರದು. ಹೀಗಾಗಿ ನಾನು ನದಿಯನ್ನು ಅನುಸರಿಸ ಬೇಕು, ನದಿ ನನ್ನನ್ನು ಅನುಸರಿಸುವುದು ಸಾಧ್ಯವೇ ಇಲ್ಲ’.

ಇಷ್ಟು ಹೊಳೆದದ್ದೇ ತಡ, ಪಂಡಿತರು ಭೂಪಟವನ್ನು ನದಿಗೆಸೆದರು, ನಿರುಮ್ಮಳ ವಾಗಿ ಹುಟ್ಟುಹಾಕಲು ತೊಡಗಿದರು.

( ಸಾರ ಸಂಗ್ರಹ)

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.