“ಮೂರನೇ ಅಂಪಾಯರ್‌ ಮಧ್ಯ ಪ್ರವೇಶಿಸಬೇಕಿತ್ತು’


Team Udayavani, Apr 24, 2022, 8:30 AM IST

“ಮೂರನೇ ಅಂಪಾಯರ್‌ ಮಧ್ಯ ಪ್ರವೇಶಿಸಬೇಕಿತ್ತು’

ಮುಂಬಯಿ: ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಶುಕ್ರವಾರದ ಐಪಿಎಲ್‌ ಪಂದ್ಯದ ನಾಟಕೀಯ ಅಂತಿಮ ಓವರ್‌ ವೇಳೆ ಮೂರನೇ ಅಂಪಾಯರ್‌ ಮಧ್ಯ ಪ್ರವೇಶಿಸಬೇಕಿತ್ತು ಎಂದು ನಿರಾಶೆಗೊಳಗಾದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ರಿಷಬ್‌ ಪಂತ್‌ ಹೇಳಿದ್ದಾರಲ್ಲದೇ ಈ ಸನ್ನಿವೇಶವು ತಂಡಕ್ಕೆ ಅತ್ಯಮೂಲ್ಯವಾಗಿತ್ತು ಎಂದರು.

ಸಂಭಾವ್ಯ ನೋ ಬಾಲ್‌ಗಾಗಿ ಅಂಪಾಯರ್‌ ಅಂತಿಮ ಓವರಿನ ಮೂರನೇ ಎಸೆತವನ್ನು ಪರಿಶೀಲಿಸಲು ನಿರಾಕರಿಸಿದ ವೆಳೆ ಪಂತ್‌ ಅವರು ತನ್ನ ಆಟಗಾರರಾದ ಪೊವೆಲ್‌ ಮತ್ತು ಕುಲದೀಪ್‌ ಅವರನ್ನು ಮೈದಾನ ತೊರೆಯುವಂತೆ ಸೂಚಿಸಿದ ಘಟನೆ ಸಂಭವಿಸಿತ್ತು. ಅಂತಿಮವಾಗಿ ಈ ಪಂದ್ಯವನ್ನು ಡೆಲ್ಲಿ 15 ರನ್ನುಗಳಿಂದ ಕಳೆದುಕೊಂಡಿತ್ತು.

ಈ ಘಟನೆಯ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಪಂತ್‌ ಅವರು ಆ ನೋ ಬಾಲ್‌ ನಮ್ಮ ಪಾಲಿಗೆ ಅತ್ಯಮೂಲ್ಯವಾಗಿತ್ತು ಎಂಬುದು ನನ್ನ ಅಲೋಚನೆ. ನಾವು ಆ ನೋ ಬಾಲ್‌ ಎಸೆತವನ್ನು ಪರಿಶೀಲಿಸಬೇಕಿತ್ತು. ಆದರೆ ಅದು ನನ್ನ ನಿಯಂತ್ರಣದಲ್ಲಿರಲಿಲ್ಲ ಎಂದರು.

ಹೌದು, ನಿರಾಶೆಯಾಗಿದೆ. ಆದರೆ ಹೆಚ್ಚಿನದೇನೂ ಮಾಡುವ ಹಾಗಿಲ್ಲ. ಪ್ರತಿಯೊಬ್ಬರಿಗೂ ಬೇಸರವಾಗಿದೆ. ಮೂರನೇ ಎಸೆತವು ಪುಲ್‌ಟಾಸ್‌ ಆಗಿತ್ತು. ಹಾಗಾಗಿ ಇದು ನೋ ಬಾಲ್‌ ಎಂದು ಭಾವಿಸಿದೆ. ಮೈದಾನದಲ್ಲಿದ್ದ ಪ್ರತಿಯೊಬ್ಬರು ಇದನ್ನು ಗಮನಿಸಿದ್ದಾರೆ ಎಂದು ಪಂತ್‌ ತಿಳಿಸಿದರು.

ಇಂತಹ ಸಂದರ್ಭದಲ್ಲಿ ಮೂರನೇ ಅಂಪಾಯರ್‌ ಮಧ್ಯ ಪ್ರವೇಶಿಸಬೇಕಿತ್ತು ಮತ್ತು ಇದನ್ನು ನೋ ಬಾಲ್‌ ಎಂದು ಹೇಳಬೇಕಿತ್ತು. ಆದರೆ ನಿಯಮವನ್ನು ನಾನು ಊಹಿಸಿದಂತೆ ಬದಲಿಸುವ ಹಾಗಿಲ್ಲ ಎಂದು ಪಂತ್‌ ತಿಳಿಸಿದರು.

ಘಟನೆಯನ್ನು ನೋಡಿದ ಸಹಾಯಕ ಕೋಚ್‌ ಪ್ರವೀಣ್‌ ಆಮ್ರೆ ಅಂಪಾಯರ್‌ ಜತೆ ಮಾಡಲು ಮೈದಾನಕ್ಕೆ ಆಗಮಿಸಿದರು. ಆದರೆ ಅಂಪಾಯರ್‌ ಅವರನ್ನು ಮರಳುವಂತೆ ಸೂಚಿಸಿದರು.

ಸ್ವಲ್ಪ ಹೊತ್ತಿನ ನಾಟಕೀಯ ಬೆಳವಣಿಗೆಯ ಬಳಿಕ ಪಂದ್ಯ ಪುನರಾರಂಭಗೊಡಿತು. ಆದರೆ ಪೊವೆಲ್‌ ಇನ್ನುಳಿದ ಮೂರು ಎಸೆತಗಳಲ್ಲಿ ಸಿಕ್ಸರ್‌ ಬಾರಿಸಲು ವಿಫ‌ಲರಾದರು. ಅಂತಿಮವಾಗಿ ಡೆಲ್ಲಿ 15 ರನ್ನುಗಳಿಂದ ಶರಣಾಯಿತು.

ನೋ ಬಾಲ್‌ ಪ್ರಶ್ನಿಸಲು ಮೈದಾನಕ್ಕೆ ತಂಡದ ಸದಸ್ಯರೊಬ್ಬರನ್ನು ಕಳುಹಿಸಿರುವುದು ಸರಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪಂತ್‌ “ನಿಸ್ಸಂಶಯವಾಗಿ ಇದು ಸರಿಯಲ್ಲ. ಆದರೆ ನಮ್ಮ ಪಾಲಿಗೆ ಆಗಿರುವುದು ಕೂಡ ಸರಿಯಲ್ಲ. ಇದು ಪಂದ್ಯದ ಆ ಕ್ಷಣದಲ್ಲಿ ನಡೆದ ಘಟನೆಯಷ್ಟೇ ಅದಕ್ಕಿಂತ ಹೆಚ್ಚಿನದೇನೂ ಇಲ್ಲ ಎಂದರು.

ಈ ಘಟನೆಯಲ್ಲಿ ಎರಡೂ ಕಡೆಯವರಿಂದ ತಪ್ಪು ಆಗಿದೆ ಎಂದು ಭಾವಿಸಿದ್ದೇನೆ. ನಮ್ಮಿಂದ ಮಾತ್ರ ತಪ್ಪಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಪಂದ್ಯದುದ್ದಕ್ಕೂ ನಾವು ಅಂಪಾಯರ್‌ ಅವರಿಂದ ಒಳ್ಳೆಯ ಕಾರ್ಯವನ್ನು ಕಂಡಿದ್ದೇವೆ ಎಂದವರು ಹೇಳಿದರು.

ಮೂರನೇ ಎಸೆತವು ಸಿಕ್ಸರ್‌ಗೆ ಹೋಗಿತ್ತು. ಇದೊಂದು ಪುಲ್‌ಟಾಸ್‌ ಆಗಿತ್ತು ಮತ್ತು ಅಂಪಾಯರ್‌ ಇದನ್ನು ಸರಿಯಾದ ಎಸೆತ ಎಂದು ಭಾವಿಸಿದ್ದರು. ಆದರೆ ಬ್ಯಾಟ್ಸ್‌ಮನ್‌ ಇದನ್ನು ನೋ ಬಾಲ್‌ ಎನ್ನಬೇಕು ಎಂದು ಬಯಸಿದ್ದರು. ಅಂಪಾಯರ್‌ ಅವರ ತೀರ್ಮಾನ ಸರಿಯಾಗಿತ್ತು ಮತ್ತು ಆ ನಿರ್ಧಾರಕ್ಕೆ ಅಂಟಿಕೊಂಡಿದ್ದರು ಎಂದು ರಾಜಸ್ಥಾನ್‌ ರಾಯಲ್ಸ್‌ ನಾಯಕ ಸಂಜು ಸ್ಯಾಮ್ಸನ್‌ ಹೇಳಿದ್ದಾರೆ.

ಅಂಪಾಯರ್‌ ನಿರ್ಧಾರವೇ ಅಂತಿಮ
ಮುಂಬಯಿ: ರಾಜಸ್ಥಾನ್‌ ವಿರುದ್ಧ ಶುಕ್ರವಾರ ನಡೆದ ಐಪಿಎಲ್‌ ಪಂದ್ಯದ ಅಂತಿಮ ಓವರಿನಲ್ಲಿ ನಡೆದ ಘಟನೆಗೆ ಡೆಲ್ಲಿ ಕ್ಯಾಪಿಟಲ್ಸ್‌ ವಿರೋಧ ವ್ಯಕ್ತಪಡಿಸಿದೆ. ಇದು ತಪ್ಪು. ಆಟಗಾರರು ಅಂಪಾಯರ್‌ ಅವರ ನಿರ್ಧಾರವನ್ನು ಒಪ್ಪಿಕೊಳ್ಳಬೇಕು ಮತ್ತು ಪಂದ್ಯ ನಡೆಯುತ್ತಿರುವ ವೇಳೆ ಯಾರಾದರೂ ಮೈದಾನ ಪ್ರವೇಶಿಸುವುದು ಪೂರ್ಣವಾಗಿ ಒಪ್ಪಿಕೊಳ್ಳುವಂತಹ ವಿಷಯವಲ್ಲ ಎಂದು ಡೆಲ್ಲಿಯ ಸಹಾಯಕ ಕೋಚ್‌ ಶೇನ್‌ ವಾಟ್ಸನ್‌ ಹೇಳಿದ್ದಾರೆ.

ನೋಡಿ, ಅಂತಿಮ ಓವರಿನಲ್ಲಿ ನಡೆದ ಘಟನೆಯು ನಿರಾಶೆಯನ್ನುಂಟುಮಾಡಿದೆ. ಅಂಪಾಯರ್‌ ನಿರ್ಧಾರವನ್ನು ನಾವು ಒಪ್ಪಿಕೊಳ್ಳಲೇಬೇಕು. ಅದು ತಪ್ಪು ಅಥವಾ ಸರಿ ಇರಬಹುದು. ನಾವು ಒಪ್ಪಬೇಕಾಗುತ್ತದೆ. ಇದೇ ವೇಳೆ ಮೈದಾನಕ್ಕೆ ತೆರಳುವುದು ಕೂಡ ಸರಿಯಲ್ಲ. ನಾವು ನಿಜವಾಗಿಯೂ ಉತ್ತಮ ಸ್ಥಿತಿಯಲ್ಲಿ ಇರಲಿಲ್ಲ ಎಂದು ವಾಟ್ಸನ್‌ ಹೇಳಿದ್ದಾರೆ.

ಟಾಪ್ ನ್ಯೂಸ್

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.