L-1 ಪಾಯಿಂಟ್ನಲ್ಲಿ ಆದಿತ್ಯ ಸ್ಥಾಪನೆಗೆ ಇಂದು ಇಸ್ರೋ ಕಸರತ್ತು
ಸೂರ್ಯನನ್ನು ತಡೆಗಳಿಲ್ಲದೆ ಅಧ್ಯಯನ ಮಾಡಲು "ಎಲ್-1' ಸಹಕಾರಿ
Team Udayavani, Jan 6, 2024, 6:00 AM IST
ಹೊಸದಿಲ್ಲಿ: ಶನಿವಾರ ಇಸ್ರೋ ಮಹತ್ವದ ಸಾಹಸ ಕೈಗೆತ್ತಿಕೊಳ್ಳಲಿದೆ. ಸಂಜೆ 4ರ ವೇಳೆಗೆ ಆದಿತ್ಯ ಉಪಗ್ರಹವನ್ನು ಲಾಗ್ರೇಂಜ್-1 ಪಾಯಿಂಟ್ಗೆ ತಲುಪಿಸಲು ಕಸರತ್ತು ನಡೆಸಲಿದೆ. ಇದು ಭೂಮಿಯಿಂದ 15 ಲಕ್ಷ ಕಿ.ಮೀ. ದೂರದಲ್ಲಿರುವ ಒಂದು ಕೇಂದ್ರ. ಇಲ್ಲಿಂದ ಗ್ರಹಣ ಮತ್ತಿತರ ಯಾವುದೇ ಅಡೆತಡೆಗಳಿಲ್ಲದೆ ಸೌರಚಟುವಟಿಕೆಗಳನ್ನು ವೀಕ್ಷಿಸಬಹುದು. ಸೂರ್ಯನು ಅಂತರಿಕ್ಷದಲ್ಲಿ ಉಂಟುಮಾಡುವ ಪರಿಣಾಮಗಳನ್ನೂ ಇಲ್ಲಿಂದ ಅಧ್ಯಯನ ಮಾಡಬಹುದು.
ಸೂರ್ಯನ ಅಧ್ಯಯನಕ್ಕಾಗಿ 2023ರ ಸೆ. 2ರಂದು ಇಸ್ರೋ ಆದಿತ್ಯ ಎಲ್-1 ಉಡಾವಣೆ ಮಾಡಿತ್ತು. ಅದನ್ನೀಗ ನಿಗದಿತ ಕಕ್ಷೆಗೆ ತಲುಪಿಸಬೇಕಾಗಿದೆ. ಅದನ್ನು ಹ್ಯಾಲೊ ಆರ್ಬಿಟ್ ಎಂದು ಕರೆಯುವ ಎಲ್-1 ಪಾಯಿಂಟ್ಗೆ ಆದಿತ್ಯನನ್ನು ತಲುಪಿಸಿ, ಅಲ್ಲಿ ಸುತ್ತುವಂತೆ ಮಾಡಬೇಕಿದೆ.
ತಲುಪಿಸದಿದ್ದರೆ ಏನಾಗುತ್ತದೆ?
ಒಂದು ವೇಳೆ ಆದಿತ್ಯನನ್ನು ಎಲ್-1ನಲ್ಲಿ ನಿಲ್ಲಿಸುವ ಕೆಲಸ ಸಾಧ್ಯವಾಗದಿದ್ದರೆ ಅದರ ಚಲನೆ ನಿರಂತರವಾಗಿ ಮುಂದುವರಿಯುವ ಸಾಧ್ಯತೆಯಿದೆ. ಸೂರ್ಯನ ಕಡೆಗೂ ಅದು ಸಾಗಬಹುದು ಎಂದು ಇಸ್ರೋ ಹೇಳಿದೆ. ಆ ಹಂತದಲ್ಲಿ ಆದಿತ್ಯ ಉಪಗ್ರಹ ಸ್ಫೋಟಗೊಂಡು ಉದ್ದೇಶವೇ ವಿಫಲವಾಗುವ ಸಾಧ್ಯತೆಯೂ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
MUST WATCH
ಹೊಸ ಸೇರ್ಪಡೆ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
Desi Swara: ದುಬೈ ವರ್ಲ್ಡ್ ಕಪ್ 2024- ಗೆಲ್ಲುವ ಅರಬ್ ಕುದುರೆಗಳ ನಾಗಾಲೋಟ!
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ