ನಿರುಪಯುಕ್ತ ಟ್ರಾಫಿಕ್ ಸಿಗ್ನಲ್ ಕಂಬ ತೆರವು ಕಾರ್ಯಕ್ಕೆ ಮುಂದಾದ ಬಿಆರ್ಟಿಎಸ್
Team Udayavani, Nov 10, 2020, 10:35 AM IST
ಹುಬ್ಬಳ್ಳಿ: ನಗರದ ವಿವಿಧ ವೃತ್ತಗಳಲ್ಲಿ ಹಾಗೇ ಉಳಿದಿದ್ದ ನಿರುಯುಕ್ತ ಟ್ರಾಫಿಕ್ ಸಿಗ್ನಲ್ ಕಂಬಗಳ ತೆರವು ಕಾರ್ಯಕ್ಕೆ ಬಿಆರ್ಟಿಎಸ್ ಮುಂದಾಗಿದೆ. ಬಳಕೆಯಲ್ಲಿಲ್ಲದ ಕಂಬಗಳನ್ನು ತೆಗೆಯುವ ಕಾರ್ಯಾಚರಣೆ ಸೋಮವಾರದಿಂದ ಆರಂಭವಾಗಿದೆ.
ನಗರದ ಬಹುತೇಕ ವೃತ್ತಗಳಲ್ಲಿ ಬಳಕೆಯಿಲ್ಲದ ಟ್ರಾಫಿಕ್ ಸಿಗ್ನಲ್ ಕಂಬಗಳಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ನ. 7ರಂದು ಉದಯವಾಣಿ ಪತ್ರಿಕೆ “ಸಿಗ್ನಲ್ಗಾಗಿ ಸವಾರರ ಸರ್ಕಸ್’ ಎನ್ನುವ ಶೀರ್ಷಿಕೆಯಡಿ ವಿಸ್ತೃತವಾದ ವರದಿ ಪ್ರಕಟಿಸಿತ್ತು.
ಈ ಕುರಿತು ಎಚ್ಚೆತ್ತುಕೊಂಡಿರುವ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಬಿಆರ್ಟಿಎಸ್ ಕಂಪನಿ ಮೂಲಕ ನಿರುಪಯುಕ್ತ ಕಂಬಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಂಡಿದ್ದಾರೆ.
ಗಣೇಶ ಪೇಟೆ ವೃತ್ತ, ಅಂಬೇಡ್ಕರ್ ವೃತ್ತ, ಚಿಟಗುಪ್ಪಿ ಆಸ್ಪತ್ರೆ ಮುಂಭಾಗದ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಬಸವ ವನ, ಇಂದಿರಾ ಗಾಜಿನಮನೆ ವೃತ್ತ, ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ಉಳಿದಿರುವ ಹಳೇ ಕಂಬ ಹಾಗೂ ಸಿಗ್ನಲ್ ದೀಪಗಳನ್ನು
ತೆರವುಗೊಳಿಸಲಾಗುತ್ತಿದೆ. ಹಿರಿಯ ಅಧಿಕಾರಿಗಳ ಆದೇಶ ಮೇರೆಗೆ ಬಿಆರ್ಟಿಎಸ್ ಕಾರಿಡಾರ್ ಉದ್ದಕ್ಕೂ ಇರುವ ಹಳೆಯ ಕಂಬಗಳನ್ನು ತೆಗೆಯಲು ಆರಂಭಿಸಿದ್ದೇವೆ. ಮೊದಲ ಹಂತದಲ್ಲಿ ಕಂಬಗಳಲ್ಲಿ ಉಳಿದಿರುವ ಸಿಗ್ನಲ್ ದೀಪಗಳನ್ನು ತೆರವುಗೊಳಿಸಲಾಗುತ್ತಿದೆ.
ಇದನ್ನೂ ಓದಿ:ಬಿಹಾರ ಫಲಿತಾಂಶ2020: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯುಗಿಂತ ಬಿಜೆಪಿ ಮೇಲುಗೈ
ನಂತರದಲ್ಲಿ ಕ್ರೇನ್ ಬಳಸಿಕೊಂಡು ಕಂಬಗಳನ್ನು ಕೀಳುವ ಕೆಲಸ ನಡೆಯಲಿದೆ ಎಂದು ಬಿಆರ್ಟಿಎಸ್ ಸಿಬ್ಬಂದಿಯೊಬ್ಬರು ತಿಳಿಸಿದರು.
ಬಿಆರ್ಟಿಎಸ್ ಯೋಜನೆ ಪ್ರಕಾರ ಕಾರಿಡಾರ್ ಉದ್ದಕ್ಕೂ ಟ್ರಾಫಿಕ್ ಸಿಗ್ನಲ್ ಅಳವಡಿಸುವುದು ಮಾತ್ರವಾಗಿತ್ತು. ಆದರೆ ಇದೀಗ ಹಳೆಯ ಕಂಬಗಳಿಂದ ಆಗುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ತೆರವುಗೊಳಿಸುವ ಅನಿವಾರ್ಯತೆ ಸೃಷ್ಟಿಯಾಗಿರುವುದರಿಂದ
ಬಿಆರ್ಟಿಎಸ್ ಕಂಪನಿ ಮೂಲಕ ಈ ಕಾರ್ಯ ಮಾಡಿಸಲಾಗುತ್ತಿದೆ. ಬಿಆರ್ಟಿಎಸ್ ಕಂಪನಿ ಹೊಸದಾಗಿ ಯಾವ ವೃತ್ತದಲ್ಲಿ ಹೊಸ ಸಿಗ್ನಲ್ ಕಂಬಗಳನ್ನು ಅಳವಡಿಸಿದೆಯೋ ಅಂತಹ ವೃತ್ತಗಳಲ್ಲಿ ಮಾತ್ರ ಹಳೆಯ ಕಂಬಗಳ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಆದರೆ ಇನ್ನುಳಿದ ಬಹುತೇಕ ವೃತ್ತಗಳಲ್ಲಿ ಹಳೇ ಟ್ರಾಫಿಕ್ ಸಿಗ್ನಲ್ ಕಂಬಗಳಿದ್ದು, ಅವುಗಳನ್ನು ಯಾವ
ಇಲಾಖೆಯಿಂದ ತೆರವುಗೊಳಿಸಬೇಕು ಎಂಬ ಪ್ರಶ್ನೆ ಎದುರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ