ಹೆಚ್ಚು ಹಾಲು ಪಡೆಯಲು ವಿ.ಆರ್.ಹೆಡ್ಸೆಟ್! ಟರ್ಕಿಯ ರೈತರೊಬ್ಬರ ಹೊಸ ಪ್ರಯೋಗ
ಗೋವುಗಳ ಖುಷಿಗಾಗಿ ಸಂಗೀತವೂ ಬಳಕೆ
Team Udayavani, Jan 10, 2022, 7:20 AM IST
ಅಂಕಾರಾ:“ಅಯ್ಯೋ ನಮ್ಮನೆ ದನ ಹಾಲೇ ಕೊಡಲ್ಲ ಅಂತಿದೆ. ಎಷ್ಟು ಒಳ್ಳೇ ಪಶು ಆಹಾರ ಕೊಟ್ರೂ ಕಾಣೆ..’
ಇದು ಗ್ರಾಮೀಣ ಪ್ರದೇಶದಲ್ಲಿನ ಹೈನು ವ್ಯವಸಾಯಗಾರರ ಎಂದಿನ ಅಳಲು. ಆದರೆ, ಟರ್ಕಿಯ ಹೈನು ವ್ಯವಸಾಯಗಾರ ಇಜೆಟ್ ಕಾಕ್ ಎಂಬವರು ಗೋವುಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಹಾಲು ಪಡೆಯಲು ವರ್ಚುವಲ್ ರಿಯಾಲಿಟಿ (ವಿ.ಆರ್) ಹೆಡ್ಸೆಟ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದರ ಮೂಲಕ ಹೆಚ್ಚು ಹಾಲು ಪಡೆಯಲು ಹೊಸ ಉಪಾಯ ಕಂಡುಕೊಂಡಿದ್ದಾರೆ.
ಏನದು ಉಪಾಯ?
ವಿ.ಆರ್. ಹೆಡ್ಸೆಟ್ಗಳನ್ನು ಗೋವುಗಳ ಕಿವಿಗಳಿಗೆ ಹಾಕುವುದರಿಂದ ಅದರ ಮೂಲಕ ಕೇಳುವ ಮಧುರವಾಗಿರುವ ಸಂಗೀತದಿಂದ ಅವುಗಳಿಗೆ ಹೆಚ್ಚು ಖುಷಿಯಾಗುತ್ತದೆ. ಹೀಗಾಗಿ, ಅವುಗಳು ಹೆಚ್ಚಿನ ಪ್ರಮಾಣದಲ್ಲಿ ಹಾಲು ಕೊಡುವುದಕ್ಕೆ ಅನುಕೂಲ ಎಂದು ಒಂದು ಅಧ್ಯಯನದಿಂದ ದೃಢಪಟ್ಟಿದೆ. ಅಲ್ಲದೇ, ಗೋವುಗಳು ಹೆಚ್ಚು ಹೆಚ್ಚು ಹಸಿರು ಹುಲ್ಲುಗಾವಲನ್ನು ನೋಡುವುದರಿಂದ ಹೆಚ್ಚಿನ ಹಾಲು ಕೊಡುವುದಕ್ಕೆ ಅವುಗಳಿಗೆ ಸ್ಫೂರ್ತಿಯೂ ಸಿಗುತ್ತದೆ ಎಂದೂ ವರದಿ ಹೇಳಿದೆ ಎಂದು ರೈತ ಇಜೆಟ್ ಕಾಕ್ “ದ ಸನ್’ ಪತ್ರಿಕೆಗೆ ಹೇಳಿದ್ದಾರೆ.
ಇದನ್ನೂ ಓದಿ:ನಿಗದಿತ ದರದಲ್ಲೇ ಚಿಕಿತ್ಸೆ ನೀಡಿ : ಖಾಸಗಿ ಆಸ್ಪತ್ರೆಗಳಿಗೆ ಬೆಳಗಾವಿ ಜಿಲ್ಲಾಧಿಕಾರಿ ಸೂಚನೆ
22ರಿಂದ 27 ಲೀಟರ್:
ಈ ಅಧ್ಯಯನ ವರದಿಯಿಂದ ಸ್ಫೂರ್ತಿಗೊಂಡ ರೈತ ಇಜೆಟ್ ಕಾಕ್ ತಮ್ಮ ಮನೆಯ ಹಟ್ಟಿಯಲ್ಲಿ ಕೂಡ ಅದನ್ನು ಪ್ರಯೋಗ ಮಾಡಿ ನೋಡಿದ್ದಾರೆ. ಅವರಿಗೆ 22 ರಿಂದ 27 ಲೀಟರ್ ಹಾಲು ಒಂದು ಬಾರಿಗೆ ಸಿಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಆ ಐಡಿಯಾ ಹೊಳೆಯುವುದಕ್ಕೆ ಮೊದಲು ಗೋವುಗಳನ್ನು ಸಂತೋಷದಿಂದ ಇರಿಸುವ ನಿಟ್ಟಿನಲ್ಲಿ ಮಧುರವಾದ ಸಂಗೀತವನ್ನು ಹಾಕುತ್ತಿದ್ದರಂತೆ. ಅಂದ ಹಾಗೆ ಮೊದಲ ಬಾರಿಗೆ ಇಂಥ ಹೆಡ್ಸೆಟ್ಗಳನ್ನು ಗೋವುಗಳಿಗೆ ಬಳಕೆ ಮಾಡಲು ಸಾಧ್ಯ ಎಂಬ ಬಗ್ಗೆ ಮೊದಲು ಅಧ್ಯಯನ ನಡೆದದ್ದು ರಷ್ಯಾ ರಾಜಧಾನಿ ಮಾಸ್ಕೋದಲ್ಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ