ಕಟ್ಟೆರೋಗ ಹತೋಟಿಗೆ ರೈತರಿಗೆ ಮಾಹಿತಿ ನೀಡಿ :ಅಧಿಕಾರಿಗಳಿಗೆ ಕಾಗೇರಿ ಸೂಚನೆ
Team Udayavani, Oct 20, 2020, 9:31 AM IST
ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಿಮೆಣಸು, ಬಾಳೆ, ಯಾಲಕ್ಕಿ, ವೆನಿಲ್ಲಾ ಬೆಳೆಗಳಿಗೆ ಕಟ್ಟೆ ರೋಗ ಹೆಚ್ಚಾಗಿ ಕಾಣಿಸುತ್ತಿದ್ದು, ಇದರ ಹತೋಟಿಗೆ ಸೂಕ್ತ ಕ್ರಮ ವಹಿಸುವಂತಾಗಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು.
ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ, ಉತ್ತರ ಕನ್ನಡ ಜಿಲ್ಲೆ ಮಲೆನಾಡು ಪ್ರದೇಶವಾಗಿದ್ದು, ಹೆಚ್ಚಾಗಿ ಮಳೆ ಬೀಳುತ್ತಿರುವುದರಿಂದ ರೈತರ ಬೆಳೆಗಳು ರೋಗ ಹಾಗೂ ಕೀಟಗಳಿಂದ ಬಾಧಿತವಾಗುತ್ತಿದೆ. ಇದರ
ಜೊತೆಯಾಗಿ ಪಾರಂಪರಿಕವಾಗಿ ತೋಟಗಾರಿಕಾ ಬೆಳೆಗಳೂ ಸಹ ನಶಿಸುತ್ತಿರುವುದರಿಂದ ಅವುಗಳ ಸಂರಕ್ಷಣೆ ಮತ್ತು ಹೊಸ ತೋಟಗಾರಿಕೆ ಬೆಳೆಗಳನ್ನು ನಮ್ಮ ರೈತ ಬಾಂಧವರಿಗೆ ಬೆಳೆಸಲು ಪ್ರೋತ್ಸಾಹಿಸುವುದು ಅಗತ್ಯವಿರುವುದರಿಂದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹಾಗೂ ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಜೊತೆಗೂಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಸೂಚಿಸಿದರು.
ಇದನ್ನೂ ಓದಿ:ಪೊಲೀಸ್ ಅಧಿಕಾರಿಯನ್ನು ಕೊಂದ ಉಗ್ರರ ಸದೆಬಡಿದ ಭದ್ರತಾ ಪಡೆ: ಓರ್ವ ಉಗ್ರನ ಹತ್ಯೆ, ಓರ್ವನ ಬಂಧನ
ಸಂಶೋಧನೆಗೆ ಒತ್ತುಕೊಟ್ಟು ರೈತರ ಬಾಳಿನಲ್ಲಿ ಹೊಸ ಹುರುಪು ನೀಡಿದಲ್ಲಿ ನಮ್ಮ ರಾಷ್ಟ್ರದ ಜಿಡಿಪಿ ಬೆಳವಣಿಗೆಗೆ ಉತ್ತರ ಕನ್ನಡ ಜಿಲ್ಲೆಯ ತೋಟಗಾರಿಕಾ ಕ್ಷೇತ್ರದಿಂದ ಹೆಚ್ಚಿನ ಕೊಡುಗೆ ನೀಡುವುದರಲ್ಲಿ ಸಂಶಯವಿಲ್ಲ ಎಂದ ಕಾಗೇರಿ, ಕುಮಟಾ ಈರುಳ್ಳಿಯು ಒಂದು ಪ್ರಮುಖ ತರಕಾರಿ ಬೆಳೆಯಾಗಿದ್ದು, ಇದರ ವಿಶಿಷ್ಟತೆಯನ್ನು ನಮ್ಮ ರಾಜ್ಯ, ದೇಶ ಹಾಗೂ ವಿದೇಶಗಳಿಗೆ ತಿಳಿಸಲು ಅದರ
ವೈಜ್ಞಾನಿಕ ಗುಣಗಳ ಬಗ್ಗೆ ಅಧ್ಯಯನ ಮಾಡಬೇಕು. ಅದರಿಂದ ಈ ಭಾಗದ ರೈತರಿಗೆ ಹಿಚ್ಚಿನ ಪ್ರೋತ್ಸಾಹ
ನೀಡಿದಂತಾಗುತ್ತದೆ.
ಜೀರಿಗೆ ಮೆಣಸಿನಕಾಯಿ, ಮುಗಲ ಮೆಣಸಿನಕಾಯಿಗಳನ್ನು ರೈತರ ಆದಾಯ ಹೆಚ್ಚಿಸುವಲ್ಲಿ ಉಪ ಬೆಳೆಯಾಗಿ ಅನುಕೂಲವಾಗಿದೆ
ಮತ್ತು ಇದರ ವೈಜ್ಞಾನಿಕ ಗುಣಗಳಿಂದ ಸಾಕಷ್ಟು ರೋಗಗಳನ್ನು ತಡೆಯುತ್ತದೆ ಎಂದು ಹೇಳುತ್ತಿರುವುದರಿಂದ ಈ ಬಗ್ಗೂ ಮಾಹಿತಿ ನೀಡಬೇಕು. ನಸಗುನಿ ಕಾಯಿ ಔಷಧ ಬಳ್ಳಿಯನ್ನು ಅಡಕೆ ಮರಗಳ ಮಧ್ಯೆ ಹೆಚ್ಚಾಗಿ ಬೆಳೆದು, ಈ ಬಳ್ಳಿಯ ಔಷ ಧ ಗುಣಗಳನ್ನು ಉಪಯೋಗ ಮಾಡುವ ಖಾಸಗಿ, ಸರ್ಕಾರಿ ಕಂಪನಿಗಳ ಜೊತೆ ಒಪ್ಪಂದದ ಬಗ್ಗೆ ಸೂಕ್ತ ಕ್ರಮ ವಹಿಸುವಂತಾಗಬೇಕು.
ಇದನ್ನೂ ಓದಿ:ಪಾಕ್ನ ಮೊಬೈಲ್ ಟವರ್ ಕುತಂತ್ರ: ಜಮ್ಮು ಕಾಶ್ಮೀರಕ್ಕೂ ಸಿಗ್ನಲ್ ಕಳುಹಿಸಲು ಯೋಜನೆ!
ಹಲಸು, ಬಾಳೆ ಬೆಳೆಯನ್ನು ನಮ್ಮ ಭಾಗದ ರೈತರು ಹೆಚ್ಚಾಗಿ ಬೆಳೆಯುತ್ತಾರೆ. ಆದ್ದರಿಂದ ಇವುಗಳಿಂದ ಹಪ್ಪಳ ತಯಾರಿಸುವ ಯಂತ್ರವನ್ನು ಕಂಡು ಹಿಡಿಯುವುದು ಸೂಕ್ತ ಎಂದೂ ಸಲಹೆ ನೀಡಿದ್ದಾರೆ. ಹಲಸು, ಅನಾನಸ್, ಬಾಳೆ ಹಣ್ಣುಗಳ
ಕೊಯ್ಲೋತ್ತರ ನಿರ್ವಹಣೆ ತಾಂತ್ರಿಕತೆಗಳ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡುವುದು ಅಗತ್ಯವಾಗಿದೆ. ನರ್ಸರಿಗಳನ್ನು ಮಾಡಲು ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕು ಎಂದು ಕಾಗೇರಿ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ