ಡಿಕೆಶಿ ನಿವಾಸಕ್ಕೆ ಮುಂದುವರಿದ ಮುಖಂಡರ ಭೇಟಿ
Team Udayavani, Oct 30, 2019, 4:34 PM IST
ಬೆಂಗಳೂರು: ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಕಾಂಗ್ರೆಸ್ ನಾಯಕರ ಭೇಟಿ ಬುಧವಾರವೂ ಮುಂದುವರಿದಿತ್ತು.
ತೆಲಂಗಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಉತ್ತಮ್ಕುಮಾರ್ ರೆಡ್ಡಿ ಅವರು ಸದಾಶಿವನಗರ ನಿವಾಸಕ್ಕೆ ಭೇಟಿ ನೀಡಿ ಕೆಲಕಾಲ ಮಾತನಾಡಿ ಧೈರ್ಯ ತುಂಬಿದರು. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ತೆಲಂಗಾಣ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಮಾಜಿ ಸಂಸದ ಬಿ.ವಿ.ನಾಯ್ಕ, ಮಾಜಿ ಸಚಿವೆ ಸುಮಾ ವಸಂತ್, ಮಾಜಿ ಸಚಿವ ಪರಮೇಶ್ವರ ನಾಯ್ಕ, ವಿಧಾನಪರಿಷತ್ ಸದಸ್ಯ ಬೋಸರಾಜ್, ಶಾಸಕರಾದ ದುರ್ಗಪ್ಪ ಹೊಲಗೇರಿ, ಬಸನಗೌಡರ್, ಎನ್.ಎ.ಹ್ಯಾರೀಸ್, ಬಸರಾ ಹಿಟ್ನಾಳ್ ಮುಖಂಡರಾದ ವಾಸಂತಿ ಶಿವಣ್ಣ ಸೇರಿ ಹಲವು ಮುಖಂಡರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿದರು.