World Cup: ಇಂದು ಲೆಕ್ಕಾಚಾರದ ಪಂದ್ಯ- ಪಾಕಿಸ್ಥಾನಕ್ಕೆ ಬೇಕಿದೆ 287 ರನ್‌ ಗೆಲುವು!

 ಚೇಸಿಂಗ್‌ ಸವಾಲು ಎದುರಾದರೆ ಕೇವಲ 16 ಎಸೆತಗಳಲ್ಲೇ ಗೆಲ್ಲಬೇಕು!

Team Udayavani, Nov 10, 2023, 11:29 PM IST

pak cric

ಕೋಲ್ಕತಾ: ಪವಾಡದ ಹೊರತಾಗಿ ಬೇರೇನೇ ಸಂಭವಿಸಿದರೂ ಪಾಕಿಸ್ಥಾನಕ್ಕೆ ವಿಶ್ವಕಪ್‌ ಸೆಮಿ ಫೈನಲ್‌ ಪ್ರವೇಶ ಅಸಾಧ್ಯ ಎಂಬ ಸನ್ನಿವೇಶವೊಂದು ನಿರ್ಮಾ ಣವಾಗಿರುವುದು ಈ ವಿಶ್ವಕಪ್‌ ಪಂದ್ಯಾವಳಿಯ ಕೊನೆಯ ಹಂತದ ಕುತೂಹಲ. ಶನಿವಾರ “ಈಡನ್‌ ಗಾರ್ಡನ್ಸ್‌”ನಲ್ಲಿ ಬಾಬರ್‌ ಆಜಂ ಪಡೆ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ತಂಡವನ್ನು ಎದುರಿಸಲಿದ್ದು, ಇಲ್ಲಿ ಗೆಲುವಿನ ಜತೆಗೆ ನ್ಯೂಜಿ ಲ್ಯಾಂಡ್‌ನ‌ ರನ್‌ರೇಟ್‌ ಮೀರಿಸುವ ಬಹು ದೊಡ್ಡ ಸವಾಲನ್ನು ಅದು ಎದುರಿಸಬೇಕಿದೆ.

ಸದ್ಯ ನ್ಯೂಜಿಲ್ಯಾಂಡ್‌ 0.743 ಹಾಗೂ ಪಾಕಿಸ್ಥಾನ 0.036 ರನ್‌ರೇಟ್‌ ಹೊಂದಿವೆ. 4ನೇ ಹಾಗೂ ಕೊನೆಯ ಸ್ಥಾನವನ್ನು ಈಗಾಗಲೇ ಕಳೆದೆರಡು ಬಾರಿಯ ರನ್ನರ್ ಅಪ್‌ ನ್ಯೂಜಿಲ್ಯಾಂಡ್‌ ಗಟ್ಟಿಗೊಳಿಸಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಪಾಕಿಸ್ಥಾನಕ್ಕೂ ಇಂಥದೊಂದು ಅವಕಾಶ ಒದಗಿ ಬರಬೇಕಾದರೆ ಎರಡು ಅಸಾಧ್ಯ ಹಾಗೂ ಕಠಿನ ಲೆಕ್ಕಾಚಾರಗಳಿವೆ. ರನ್‌ರೇಟ್‌ನಲ್ಲಿ ನ್ಯೂಜಿಲ್ಯಾಂಡನ್ನು ಮೀರಬೇಕಾದರೆ ಇಂಗ್ಲೆಂಡ್‌ ವಿರುದ್ಧ ಪಾಕಿಸ್ಥಾನ 287 ರನ್‌ ಅಂತರದ ಜಯಭೇರಿ ಮೊಳಗಿ ಸಬೇಕು. ಅಂದರೆ ಪಾಕ್‌ 300 ರನ್‌ ಗಳಿಸಿದರೆ ಇಂಗ್ಲೆಂಡನ್ನು 13 ರನ್ನಿಗೆ ನಿರ್ಬಂಧಿಸಬೇಕು! ಅಥವಾ ಇಂಗ್ಲೆಂಡ್‌ ನೀಡಿದ ಗುರಿಯನ್ನು 284 ಎಸೆತ ಬಾಕಿ ಇರುವಾಗಲೇ, ಅಂದರೆ ಕೇವಲ 16 ಎಸೆತಗಳಲ್ಲಿ (2.4 ಓವರ್‌) ಮುಟ್ಟಬೇಕು! ಇವೆಲ್ಲವನ್ನೂ ಅಸಾಧ್ಯ ಎಂದೇ ಭಾವಿಸಬೇಕಾಗುತ್ತದೆ.

ಇನ್ನೊಂದೆಡೆ ಇಂಗ್ಲೆಂಡ್‌ಗೂ ಇದು ನಿರ್ಣಾಯಕ ಪಂದ್ಯ. ಅದು ಈಗಾಗಲೇ ಕೂಟದಿಂದ ನಿರ್ಗಮಿ ಸಿರಬಹುದು, ಆದರೆ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾ ವಳಿಯಲ್ಲಿ ಆಡುವ ಅವಕಾಶ ಗಳಿಸಬೇಕಾದರೆ ವಿಶ್ವಕಪ್‌ನಲ್ಲಿ ಅಗ್ರ ಏಳರಲ್ಲಿ ಕಾಣಿಸಿಕೊಳ್ಳಬೇಕಾದುದು ಅನಿವಾರ್ಯ. ಸದ್ಯ ಅದು 7ನೇ ಸ್ಥಾನದಲ್ಲಿದ್ದರೂ ಈ ಸ್ಥಾನಕ್ಕೆ ಸಿಮೆಂಟ್‌ ಹಾಕುವ ಅಗತ್ಯವಿದೆ. ಹೀಗಾಗಿ ಇಂಗ್ಲೆಂಡ್‌ಗೂ ಇಲ್ಲಿ ಗೆಲುವಿನ ಅಗತ್ಯವಿದೆ.

ವೀರೋಚಿತ ಗೆಲುವು…
ಪಾಕಿಸ್ಥಾನ ಈ ವಿಶ್ವಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಸಂಪೂರ್ಣ ವಿಫ‌ಲವಾಗಿದೆ. ಕಳೆದೆ ರಡು ಪಂದ್ಯಗಳಲ್ಲಿ ಒಂದಿಷ್ಟು ಚೇತೋ ಹಾರಿ ಪ್ರದರ್ಶನ ನೀಡಿದ ಕಾರಣ ಕಿಂಚಿತ್‌ ಭರವಸೆ ಉಳಿಸಿಕೊಂಡಿದೆ, ಅಷ್ಟೇ.

ಬಾಂಗ್ಲಾದೇಶ ವಿರುದ್ಧ ಕೋಲ್ಕ ತಾದಲ್ಲೇ ಆಡಿದ ಪಂದ್ಯವನ್ನು ಪಾಕ್‌ 7 ವಿಕೆಟ್‌ಗಳಿಂದ ಗೆದ್ದರೆ, ಬೆಂಗಳೂ ರಿನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಡಿ-ಎಲ್‌ ನಿಯದಂತೆ ಗೆದ್ದು ಬಂದಿತು. ಆದರೆ ಉಳಿದ ತಂಡಗಳ ಯಶಸ್ಸು ಬಾಬರ್‌ ಪಡೆಯನ್ನು ನಿರ್ಗಮನದ ಬಾಗಿಲಿಗೆ ತಂದು ನಿಲ್ಲಿಸಿತು.

ಇಂಗ್ಲೆಂಡ್‌ಗೆ ಹೋಲಿಸಿದರೆ ಕೋಲ್ಕ ತಾದ ಸ್ಲೋ ಆ್ಯಂಡ್‌ ಸ್ಪಿನ್‌ ಫ್ರೆಂಡ್ಲಿ ಟ್ರ್ಯಾಕ್‌ನಲ್ಲಿ ಪಾಕಿಸ್ಥಾನ ಹೆಚ್ಚಿನ ಅನು ಭವ ಹೊಂದಿದೆ. ಆದರೆ ಇಂಗ್ಲೆಂಡ್‌ ವಿರುದ್ಧ ಪವಾಡಸದೃಶ ಪ್ರದರ್ಶನ ಸಾಧ್ಯವಿಲ್ಲ. ಒಂದು ವೀರೋ ಚಿತ ಗೆಲುವು ಪಾಕಿಸ್ಥಾನದ ನಿರ್ಗಮನ ವನ್ನು ಸಂತೃಪ್ತಗೊಳಿಸೀತು, ಅಷ್ಟೇ.

ಇಂಗ್ಲೆಂಡ್‌ಗೆ ಎರಡೇ ಜಯ
ಇಂಗ್ಲೆಂಡ್‌ ಈ ಕೂಟದಲ್ಲಿ ಸಾಧಿ ಸಿದ್ದು ಎರಡೇ ಗೆಲುವು. ಎರಡೂ ಸಾಮಾನ್ಯ ತಂಡಗಳ ವಿರುದ್ಧ ದಾಖಲಾದದ್ದು. ಮೊದಲ ಜಯ ಸಾಧಿಸಿದ್ದು ಬಾಂಗ್ಲಾದೇಶದ ವಿರುದ್ಧ. ಅನಂತರ ಸರಿಸುಮಾರು ಒಂದು ತಿಂಗಳ ಅವಧಿಯಲ್ಲಿ ನೆದರ್ಲೆಂಡ್ಸ್‌ ವಿರುದ್ಧ ಗೆದ್ದು ಬಂದಿತು. ಪಾಕಿ ಸ್ಥಾನವನ್ನು ಮಣಿಸಿದರೆ ಗೆಲುವಿನ ಸಂಖ್ಯೆ ಮೂರಕ್ಕೇರಲಿದೆ, ಅಷ್ಟೇ. ಆಗ ಒಂದು “ದೊಡ್ಡ ತಂಡ’ವನ್ನಾದರೂ ಮಣಿಸಿದ ಹೆಗ್ಗಳಿಕೆ ಜಾಸ್‌ ಬಟ್ಲರ್‌ ಪಡೆಯದ್ದಾಗಲಿದೆ.

 

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.