ಐಪಿಎಲ್ :ಇದುವರೆಗೆ ತಲಾ ನಾಲ್ಕು ಭಾರತೀಯರಿಗಷ್ಟೇ ಸೇರಿದೆ ಪರ್ಪಲ್ ಕ್ಯಾಪ್, ಆರೆಂಜ್ ಕ್ಯಾಪ್!
Team Udayavani, Apr 9, 2021, 9:33 AM IST
ಚೆನ್ನೈ: 14ನೇ ಆವೃತ್ತಿಯ ಐಪಿಎಲ್ ಕೂಟ ಇಂದಿನಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಆರ್ ಸಿಬಿ ಮತ್ತು ಮುಂಬೈ ತಂಡಗಳು ಸೆಣಸಾಡಲಿದೆ. ಇಂದಿನಿಂದ ಎರಡು ತಿಂಗಳ ಕಾಲ ಭಾರತದಲ್ಲಿ ಐಪಿಎಲ್ ಕಾವು ಏರಲಿದೆ.
ಪ್ರತಿ ವರ್ಷ ಅತೀ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ಆರೆಂಜ್ ಕ್ಯಾಪ್ ಮತ್ತು ಹೆಚ್ಚು ವಿಕೆಟ್ ಪಡೆದ ಬೌಲರ್ ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಇದಕ್ಕಾಗಿ ಪ್ರತೀ ಆಟಗಾರರು ಭಾರಿ ಸ್ಪರ್ಧೆ ನಡೆಸುತ್ತಾರೆ. ಈ ಬಾರಿ ಯಾರು ಈ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಒಡೆಯರಾಗುತ್ತಾರೆ ಎನ್ನುವ ಬಗ್ಗೆ ಅಭಿಮಾನಿಗಳು ಈಗಾಗಲೇ ಕಾತರರಾಗಿದ್ದಾರೆ.
ಇದನ್ನೂ ಓದಿ: ಸವಾಲುಗಳ ನಡುವೆ ಇಂದಿನಿಂದ ಐಪಿಎಲ್ ಸಂಭ್ರಮ
ಇದುವರೆಗೆ ನಾಲ್ಕು ಭಾರತೀಯರು ಮಾತ್ರ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಸಚಿನ್, ಉತ್ತಪ್ಪ, ವಿರಾಟ್ ಮತ್ತು ರಾಹುಲ್ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಪರ್ಪಲ್ ಕ್ಯಾಪ್ ಕೂಡಾ ನಾಲ್ಕು ಬಾರಿಯಷ್ಟೇ ಭಾರತೀಯರ ಕೈಸೇರಿದೆ. ಆದರೆ ಭುವನೇಶ್ವರ್ ಕುಮಾರ್ ಎರಡು ಬಾರಿ ಪರ್ಪಲ್ ಕ್ಯಾಪ್ ಪಡೆದಿದ್ದಾರೆ
ಆರೇಂಜ್ ಕ್ಯಾಪ್ ವಿನ್ನರ್ :
ವರ್ಷ ಬ್ಯಾಟ್ಸ್ಮನ್ ರನ್
2008 ಶಾನ್ ಮಾರ್ಷ್ 616
2009 ಮ್ಯಾಥ್ಯೂ ಹೇಡನ್ 572
2010 ಸಚಿನ್ ತೆಂಡುಲ್ಕರ್ 618
2011 ಕ್ರಿಸ್ ಗೇಲ್ 608
2012 ಕ್ರಿಸ್ ಗೇಲ್ 733
2013 ಮೈಕಲ್ ಹಸ್ಸಿ 733
2014 ರಾಬಿನ್ ಉತ್ತಪ್ಪ 660
2015 ಡೇವಿಡ್ ವಾರ್ನರ್ 562
2016 ವಿರಾಟ್ ಕೊಹ್ಲಿ 973
2017 ಡೇವಿಡ್ ವಾರ್ನರ್ 641
2018 ಕೇನ್ ವಿಲಿಯಮ್ಸನ್ 735
2019 ಡೇವಿಡ್ ವಾರ್ನರ್ 692
2020 ಕೆ.ಎಲ್. ರಾಹುಲ್ 670
ಇದನ್ನೂ ಓದಿ:ಆರ್ಸಿಬಿ-ಮುಂಬೈ ಮೊದಲ ಜೈಕಾರಕ್ಕೆ ಕಾತರ
ಪರ್ಪಲ್ ಕ್ಯಾಪ್ ವಿನ್ನರ್ :
ವರ್ಷ ಬೌಲರ್ ವಿಕೆಟ್
2008 ಸೊಹೈಲ್ ತನ್ವೀರ್ 22
2009 ಆರ್.ಪಿ. ಸಿಂಗ್ 23
2010 ಪ್ರಗ್ಯಾನ್ ಓಜಾ 21
2011 ಲಸಿತ ಮಾಲಿಂಗ 28
2012 ಮಾರ್ನೆ ಮಾರ್ಕೆಲ್ 25
2013 ಡ್ವೇನ್ ಬ್ರಾವೊ 32
2014 ಮೋಹಿತ್ ಶರ್ಮ 23
2015 ಡ್ವೇನ್ ಬ್ರಾವೊ 26
2016 ಭುವನೇಶ್ವರ್ ಕುಮಾರ್ 23
2017 ಭುವನೇಶ್ವರ್ ಕುಮಾರ್ 26
2018 ಆ್ಯಂಡ್ರೂ ಟೈ 24
2019 ಇಮ್ರಾನ್ ತಾಹಿರ್ 26
2020 ಕಾಗಿಸೊ ರಬಾಡ 30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್