ಎತ್ತರದ ಬಿದಿರು, ಎಳೆ ಬಿದಿರು ಮತ್ತು ನಿಜದ ಬದುಕು


Team Udayavani, Oct 6, 2020, 6:12 AM IST

Bamboo

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಜಗತ್ತು ನಮ್ಮ ಅನುಭವಕ್ಕೆ ಬರುವುದು ಪಂಚೇದ್ರಿಯಗಳ ಗ್ರಹಿಕೆಯ ಮೂಲಕ. ಕಣ್ಣು, ಚರ್ಮ, ನಾಲಗೆ, ಮೂಗು, ಕಿವಿಗಳು ಏನು ಚಿತ್ರಣವನ್ನು ಕಟ್ಟಿಕೊಡುತ್ತವೆಯೋ ಅದು ನಿಜ ಎಂಬುದಾಗಿ ನಾವು ಪರಿಭಾವಿಸುತ್ತೇವೆ.

ಐದು ಇಂದ್ರಿಯಗಳಿಂದ ಅನುಭವಕ್ಕೆ ಬರುವ ಜಗತ್ತಿನ ಚಿತ್ರಣದ ಗ್ರಹಿಕೆಗೆ ಆಧಾರವಾಗಿರುವುದು ಹೋಲಿಕೆ.

ನಿನ್ನೆಯ ಬೆಂಡೆ ಸಾಂಬಾರಿಗಿಂತ ಇವತ್ತಿನದ್ದು ಖಾರವಾಗಿದೆ, ಚಹಾ ಇವತ್ತು ಹೆಚ್ಚು ಬಿಸಿಯಾಗಿದೆ, ಮದ್ದಳೆಯ ನಾದ ಚೆಂಡೆಗಿಂತ ಕಡಿಮೆ… ಹೀಗೆ ಹೋಲಿಕೆ ಸಾಗುತ್ತದೆ.

ಒಂದು ಝೆನ್‌ ಕಥೆ ಹೀಗಿದೆ.
ಬುದ್ಧನ ಬಗ್ಗೆ ಕೇಳಿತಿಳಿದ ಒಬ್ಬ ಜ್ಞಾನಾಕಾಂಕ್ಷಿ ತಾನೂ ಅವನಂತಾಗಬೇಕು ಎಂದು ಬಯಸಿದ. ಅನೇಕ ಮಂದಿ ಗುರುಗಳ ಬಳಿಗೆ ಹೋಗಿ ಜ್ಞಾನಮಾರ್ಗವನ್ನು, ಬುದ್ಧನಂತಾಗುವುದನ್ನು ಹೇಳಿಕೊಡಲು ವಿನಂತಿಸಿಕೊಂಡ. ಆದರೆ ಯಾರು ಕೊಟ್ಟ ಉತ್ತರವೂ ಅವನಿಗೆ ಸಮಾಧಾನ ತರಲಿಲ್ಲ. ಬುದ್ಧನಂತಾಗುವ ಹಂಬಲವೂ ಇಂಗಲಿಲ್ಲ.

ಹೀಗೆ ಹುಡುಕಾಡುತ್ತಿರಲಾಗಿ, ಇವೊ ಪ್ರಾಂತ್ಯದ ಬೆಟ್ಟದ ಮೇಲೆ ಮಠ ಸ್ಥಾಪಿಸಿಕೊಂಡಿರುವ ಇಕು- ಚಿನ್‌ ಎಂಬೊಬ್ಬ ಗುರುಗಳು ಬುದ್ಧನಂತಾಗುವ ಉಪ ದೇಶ ನೀಡಲು ಸಮರ್ಥರು ಎಂದು ಯಾರೋ ಹೇಳಿದರು. ಜ್ಞಾನಾಕಾಂಕ್ಷಿ ತಡಮಾಡದೇ ಇಕು-ಚಿನ್‌ ಅವರನ್ನು ಹುಡುಕುತ್ತ ಹೊರಟ.

ದುರ್ಗಮ ಬೆಟ್ಟವನ್ನು ಏರಿದ ಮೇಲೆ ಗುರುಮಠ ಕಾಣಿಸಿತು. ವಿಶಾಲ ಪ್ರಾಂಗಣದಲ್ಲಿ ಇಕು-ಚಿನ್‌ ಗುರುಗಳು ಕುಳಿತಿದ್ದರು, ಸುತ್ತಲೂ ದೊಡ್ಡ ಶಿಷ್ಯ ಸಮೂಹ. ಜ್ಞಾನಾಕಾಂಕ್ಷಿ ಎಲ್ಲರಿಗಿಂತ ಹಿಂದೆ ನಿಂತುಕೊಂಡ. ಗುರುಗಳು ಅವನನ್ನು ಗಮನಿಸಿ ಹತ್ತಿರ ಕರೆದರು, ಏಕೆ ಬಂದಿದ್ದೀಯೆ ಎಂದು ವಿಚಾರಿಸಿದರು. ಜ್ಞಾನಾಕಾಂಕ್ಷಿ ತನ್ನ ಹಂಬಲವನ್ನು ಹೇಳಿಕೊಂಡಾಗ ಸುತ್ತಲೂ ಇರುವ ಶಿಷ್ಯರನ್ನು ತೋರಿಸಿ, “ಇವರನ್ನೆಲ್ಲ ಕಳುಹಿಸಿದ ಬಳಿಕ ನಿನಗೆ ಉಪದೇಶ ನೀಡುವೆ’ ಎಂದರು.

ನೆರೆದಿದ್ದ ಶಿಷ್ಯಸಮೂಹವನ್ನು ಕಂಡು ಜ್ಞಾನಾಕಾಂಕ್ಷಿಗೆ ಇವರು ತಕ್ಕ ಗುರು ಎನ್ನಿಸಿತು. ಆತ ಕಾತರದಿಂದ ಕಾದ.
ಸಾಕಷ್ಟು ಸಮಯ ಕಳೆದ ಬಳಿಕ ಎಲ್ಲರೂ ಹೋಗಿಯಾಯಿತು. ಇಕು-ಚಿನ್‌ ಜ್ಞಾನಾಕಾಂಕ್ಷಿಯನ್ನು ಕರೆದುಕೊಂಡು ಆಶ್ರಮದ ಹೊರಗಿದ್ದ ಬಿದಿರು ಮೆಳೆಯ ಹತ್ತಿರ ಹೋದರು, ಉದ್ದನೆಯ ಬಿದಿರೊಂದನ್ನು ತೋರಿಸಿ “ಅದೇನು’ ಎಂದರು. ಜ್ಞಾನಾಕಾಂಕ್ಷಿ “ಬಿದಿರು’ ಎಂದ. ಗುರುಗಳು ಅದರ ಬುಡದಲ್ಲೇ ಇದ್ದ ಇನ್ನೊಂದು ಬಿದಿರನ್ನು ತೋರಿಸಿ “ಅದೇನು’ ಎಂದು ಕೇಳಿದರು. “ಇದು ಎಳೆಯ ಬಿದಿರು, ಇನ್ನೂ ಬೆಳೆಯಬೇಕಾದ ಬಿದಿರು’ ಎಂದ ಜ್ಞಾನಾಕಾಂಕ್ಷಿ.

“ಅವೆಲ್ಲವೂ ಬಿದಿರುಗಳು’ ಎಂದು ಹೇಳಿದವರೇ ಇಕು-ಚಿನ್‌ ಮರಳಿ ಆಶ್ರಮದತ್ತ ನಡಿಗೆ ಆರಂಭಿಸಿದರು. ನಮ್ಮ ಪರಿಸ್ಥಿತಿಯೂ ಆ ಜ್ಞಾನಾಕಾಂಕ್ಷಿಯಂತೆ. ಎಲ್ಲರೊಳಗೂ ಬುದ್ಧನಿದ್ದಾನೆ. ಅವನು ಬಲಿಯುವವರೆಗೆ ನಾವು ಕಾಯಬೇಕು ಅಷ್ಟೇ. ಎಲ್ಲರೊಳಗೂ ಪರಮಾತ್ಮ ಇದ್ದಾನೆ ಎನ್ನುವ ಸತ್ಯವನ್ನು ಅರಿತುಕೊಳ್ಳಬೇಕು ಅಷ್ಟೇ. ಯಾವುದು ನಿಜವೋ ಅದನ್ನು ತಿಳಿಯಬೇಕಾದರೆ ಇಂದ್ರಿಯಗಳು ಗ್ರಹಿಸಿದ್ದನ್ನು ಸತ್ಯ ಎಂದು ನಂಬುವುದನ್ನು ಬಿಡಬೇಕು. ದೈನಿಕ ಚಟುವಟಿಕೆಗಳ ಮಟ್ಟಿಗೆ ಮಾತ್ರ ಅದರ ಅವಲಂಬನೆ ಸಾಕು. ನಾವು ಯಾರಿಗಿಂತಲೂ ಮೇಲಲ್ಲ, ಯಾರಿಗಿಂತಲೂ ಕೀಳಲ್ಲ; ನಾವು ನಾವೇ ಎಂಬ ಸತ್ಯವನ್ನು ಅರಿತುಕೊಂಡರೆ ಸದಾಚಾರಗಳ ಬೆಳಕಿನಲ್ಲಿ ಸಕ್ರಿಯವಾದ ಮತ್ತು ಸಕಾರಾತ್ಮಕವಾದ ಬದುಕನ್ನು ಬಾಳಲು ಸಾಧ್ಯವಾಗುತ್ತದೆ.

( ಸಾರ ಸಂಗ್ರಹ)

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.