ಧನಾತ್ಮಕವಾಗಿರುವುದೇ ನಮ್ಮ ಮೂಲಗುಣ, ಅದನ್ನೇ ಉಳಿಸಿಕೊಳ್ಳೋಣ


Team Udayavani, Oct 16, 2020, 6:15 AM IST

ಧನಾತ್ಮಕವಾಗಿರುವುದೇ ನಮ್ಮ ಮೂಲಗುಣ, ಅದನ್ನೇ ಉಳಿಸಿಕೊಳ್ಳೋಣ

ನಾವು ಹಲವು ಬಾರಿ ಸೋಲುವುದು ಯಾವುದಕ್ಕೆ? ಅಹಂಕಾರ, ಋಣಾತ್ಮಕ ಅಥವಾ ನೇತ್ಯಾತ್ಮಕ ಮನೋಭಾವ, ಮತ್ತು ಕೋಪಕ್ಕೆ. ಈ ಮೂರನ್ನು ಹೊರತುಪಡಿಸಿ ದರೆ ಬೇರೆ ಎಲ್ಲವನ್ನೂ ನಾವು ಗೆಲ್ಲಬಹುದು. ಈ ಮೂರನ್ನು ಗೆಲ್ಲಬೇಕೆಂದೇ ಹೊರಡು ತ್ತೇವೆ. ಆದರೆ ಯಾವುದೋ ಒಂದು ಅಂಕದಲ್ಲಿ ಸೋತು ಬಿಡುತ್ತೇವೆ. ಹಾಗಾದರೆ ಇದನ್ನು ಗೆಲ್ಲುವುದು ಹೇಗೆ? ಅಥವಾ ಸಾಧ್ಯವೇ ಇಲ್ಲವೇ?

ಇಂಥದೊಂದು ಪ್ರಶ್ನೆ ವ್ಯಕ್ತಿಯೋರ್ವನಿಗೆ ಹುಟ್ಟಿತು. ಅದರಲ್ಲೂ ಬಹಳ ಮುಖ್ಯವಾಗಿ ಕೋಪ. ಯಾವುದೇ ಕ್ಷಣದಲ್ಲಿ ಕೆಂಡದಂಥ ಕೋಪ ಬಂದುಬಿಡುತ್ತಿತ್ತು. ಅನಂತರದ ಘಟನೆಗಳನ್ನು ವಿವರಿಸಬೇಕಿಲ್ಲ. ಹಲವು ಬಾರಿ ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸಿದನಾದರೂ ಪ್ರಯೋಜನವಾಗ ಲಿಲ್ಲ. ಪ್ರತೀ ಬಾರಿಯೂ ಅದೇ ಮೆರೆಯುತ್ತಿತ್ತು.

ಇದನ್ನು ಕಂಡ ಒಬ್ಬ ಅಜ್ಜ, “ನಿನಗೆ ಕೋಪ ಎಂಬುದು ಸಿಕ್ಕಾಪಟ್ಟೆ ಇದೆ. ಯಾವಾಗ ಎಂದರೆ ಆಗ ಬರುತ್ತದೆ. ಇದರಿಂದ ನಿನಗೆ ಭವಿಷ್ಯ ದಲ್ಲಿ ಒಳ್ಳೆಯದಾಗದು. ಇಂಥ ಸಿಟ್ಟನ್ನು ಇಟ್ಟು ಕೊಂಡು ಒಳ್ಳೆಯವನಾಗುವುದಾದರೂ ಹೇಗೆ? ಸಾಧ್ಯವಿಲ್ಲ. ಈ ಊರಿನಲ್ಲಿ ಒಬ್ಬ ಗುರು ಇದ್ದಾನೆ. ಅವನನ್ನು ಕಾಣು’ ಎಂದರು.

ಆಯಿತು ಎಂದು ಅಜ್ಜನಿಗೆ ನಮಸ್ಕರಿಸಿ ಈತ ಗುರುವನ್ನು ಹುಡುಕಿಕೊಂಡು ಹೊರಟ. ಸಾಕಷ್ಟು ಸುತ್ತಿದ ಮೇಲೆ ಆ ಊರಿನ ಮತ್ತೂಂದು ಬದಿಯಲ್ಲಿದ್ದ ಗುರು ಸಿಕ್ಕರು. ಈತ ಗುರುವಿಗೆ ಎಲ್ಲವನ್ನೂ ವಿವರಿಸಿದ. ಹೇಗಾದರೂ ಮಾಡಿ ನನ್ನ ಕೋಪವನ್ನು ನಾನು ಕಡಿಮೆ ಮಾಡಿಕೊಳ್ಳು ವುದು ಹೇಗೆ ಎಂಬುದನ್ನು ಕಲಿಸಿ ಎಂದು ಮನವಿ ಮಾಡಿದ.

ಝೆನ್‌ ಗುರು ಎಲ್ಲವನ್ನೂ ಶಾಂತವಾಗಿ ಕೇಳಿಸಿಕೊಂಡರು. ಆ ಬಳಿಕ ಕುಡಿಯಲು ಚಹಾ ನೀಡಿ, ನಿನಗೆ ಸಿಟ್ಟು ಎಂದರೆ ಎಷ್ಟಿರ ಬಹುದು? ಎಂದು ಕೇಳಿದರು. ಅದಕ್ಕೆ ಆತ, ಬಹಳಷ್ಟು, ಇಷ್ಟೆಂದು ಹೇಳಲಾಗದು ಎಂದ. ಹಾಗಾದರೆ ಒಂದು ಕೆಲಸ ಮಾಡು. ನನಗೆ ತೋರಿಸು ಎಂದರು ಗುರುಗಳು.

ಆಗ ಆತ, “ಈಗ ಸಾಧ್ಯವಿಲ್ಲ. ಅದು ಹೇಳಿ ಕೇಳಿ ಬರುವುದಿಲ್ಲ. ಇದ್ದಕ್ಕಿದ್ದಂತೆ ಬರುತ್ತದೆ. ಆಗ ನಿಯಂತ್ರಣ ಮಾಡುವುದ ಕ್ಕಾಗುವುದಿಲ್ಲ’ ಎಂದು ವಿವರಿಸಿದ. ಮನಸ್ಸಿನಲ್ಲೇ ಏನೋ ಲೆಕ್ಕ ಹಾಕಿಕೊಂಡು ಗುರುಗಳು, ಹಾಗಾದರೆ ಅದು ನಿನ್ನ ಮೂಲ ಸ್ವಭಾವವಲ್ಲ ಎಂದರು. ಆಗಲೂ ಆತ, “ಅದು ನನಗೆ ಗೊತ್ತಿಲ್ಲ. ಆದರೆ ಸಿಟ್ಟು ಬಹಳ ಬರುತ್ತದೆ’ ಎಂದು ಹೇಳಿದ. ಅದರರ್ಥವೇ ಕೋಪ ನಿನ್ನ ಮೂಲ ಸ್ವಭಾವದ್ದಲ್ಲ; ಹೊರಗಿನದ್ದು ಮತ್ತು ನಿನ್ನದಲ್ಲದ್ದು. ಯಾಕೆಂದರೆ, ಯಾವುದು ನಮ್ಮದೋ ಅದು ನಾವು ಎಣಿಸಿಕೊಳ್ಳ ದಿದ್ದರೂ ಪ್ರಕಟವಾಗುವಂತಿರಬೇಕು. ಯಾವಾಗ ಬೇಕೆಂದರೆ ಆಗ ಅದನ್ನು ತೋರಿಸಬಹುದು. ಕೋಪ ನಿನ್ನದಲ್ಲ. ನಿನ್ನ ದಲ್ಲದ್ದನ್ನು ಯಾಕೆ ಅಷ್ಟೊಂದು ಯೋಚಿ ಸುತ್ತೀ? ಎಂದು ಪ್ರಶ್ನಿಸಿದರು.

ಹೌದೆನ್ನಿಸಿತು ಆತನಿಗೆ. ಅಂದಿನಿಂದ ಆತ ಕೋಪ ಬಂದಾಗಲೆಲ್ಲ ಗುರುಗಳ ಮಾತನ್ನು ನೆನಪಿಸಿಕೊಳ್ಳುತ್ತಿದ್ದ, ಶಾಂತವಾಗಿ ಬಿಡುತ್ತಿದ್ದ. ಅಹಂಕಾರ, ಋಣಾತ್ಮಕ ಮನೋಭಾವವೂ ನಮ್ಮ ಮೂಲ ಗುಣಗಳಲ್ಲ. ನಮ್ಮ ಮೂಲ ಗುಣಗಳೆಂದರೆ, ಎಲ್ಲರನ್ನೂ ಗೌರವದಿಂದ ಕಾಣುವುದು, ಎಲ್ಲವನ್ನೂ ಧನಾತ್ಮಕ ದೃಷ್ಟಿ ಯಲ್ಲಿ ನೋಡುವುದು. ಬದುಕಿನ ಸೌಂದ ರ್ಯವನ್ನು ಅನುಭವಿಸುವುದು. ನಾವು ನಮ್ಮದಲ್ಲದ್ದರ ಬಗ್ಗೆ ಏಕೆ ಯೋಚಿಸ ಬೇಕಲ್ಲವೇ?

(ಸಾರ ಸಂಗ್ರಹ)

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.