ಉಪ್ಪಿಯ ದೇಶ ಬದಲಿಸೋ ಐಡಿಯಾ; ಡಿ.2016ರ ರೂಪತಾರಾದಲ್ಲಿ ಉಪ್ಪಿ


Team Udayavani, Aug 12, 2017, 3:10 PM IST

upendra-759.jpg

ಕಳೆದೆರೆಡು ದಿನಗಳಿಂದ ಉಪೇಂದ್ರ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಇದೆ. ಹಾಗೆ ನೋಡಿದರೆ, “ಸೂಪರ್‌’ ಚಿತ್ರದ ದಿನಗಳಿಂದಲೂ ಉಪೇಂದ್ರ ಅವರು ರಾಜಕೀಯಕ್ಕೆ ಬರುತ್ತಾರೆ, ಸದ್ಯದಲ್ಲೇ ರಾಜಕೀಯ ಪಕ್ಷ ಸೇರುತ್ತಾರೆ ಎಂಬ ಸುದ್ದಿ ಇದ್ದೇ ಇದೆ. ಆದರೆ,
ಉಪೇಂದ್ರ ಇಷ್ಟು ದಿನಗಳಲ್ಲಿ ರಾಜಕೀಯ ಸೇರಿಲ್ಲ. ಬದಲಿಗೆ ಹೊರಗಿದ್ದುಕೊಂಡೇ, ಹೇಗೆ ವ್ಯವಸ್ಥೆಯನ್ನು ಬದಲಾಯಿಸಬಹುದು, ದೇಶ ಉದ್ಧಾರಕ್ಕೆ ಏನೆಲ್ಲಾ ಮಾಡಬಹುದು ಎಂಬುದನ್ನು ಆಗಾಗ ಹೇಳುತ್ತಲೇ ಬಂದಿದ್ದಾರೆ.

ಅದರ ಮುಂದುವರೆದ ಭಾಗವಾಗಿ, ಶುಕ್ರವಾರ ರಾತ್ರಿ ಉಪೇಂದ್ರ ಸುಮಾರು 15 ನಿಮಿಷಗಳ ಆಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಟ್ಟಿದ್ದಾರೆ. ವಿಶೇಷವೆಂದರೆ, ಈ ಕುರಿತು ಉಪೇಂದ್ರ ಅವರು ಕಳೆದ ವರ್ಷದ ನವೆಂಬರ್‌ನಲ್ಲೇ ಮಾತನಾಡಿದ್ದರು ಮತ್ತು ಉಪೇಂದ್ರ ಅವರ ದೇಶ ಬದಲಿಸುವ ಐಡಿಯಾಗಳಿರುವ ಲೇಖನವೊಂದು 2016ರ ಡಿಸೆಂಬರ್‌ನಲ್ಲೇ ಪ್ರಕಟವಾಗಿತ್ತು. ಈ ಸಂದರ್ಶನದಲ್ಲಿ ಉಪೇಂದ್ರ ಏನು ಹೇಳಿದ್ದಾರೆ ಗೊತ್ತಾ? ವಿವರ ಇಲ್ಲಿದೆ.

ನನ್ನ ಮನಸ್ಸಲ್ಲೊಂದು ಐಡಿಯಾ ಇದೆ. ಡೀಪಾಗ್‌ ಸ್ಕ್ರಿಪ್ಟ್ ಮಾಡಬೇಕು. ಈಗ ಇರೋದು ಒನ್‌ ಡೇ ಡೆಮಾಕ್ರಸಿ. ಅಲ್ವೇ? ಓಟ್‌ ಹಾಕೋ ದಿನ ನಾವು ರಾಜರು. ಉಳಿದ ದಿನ ಅವರೇ ರಾಜರು. ನಾವು ಸೇವಕರು. ಇದು ಮೊದ್ಲು ಚೇಂಜಾಗಬೇಕು. ಪ್ರಜಾಪ್ರಭುತ್ವ ಅಂದ್ರೆ ಪ್ರಜೆಗಳೇ ಪ್ರಭುಗಳು. ಅಲ್ವಾ? ಹಾಗಾದ್ರೆ 365 ದಿನ ಪ್ರಜೆಗಳು ಪ್ರಭುಗಳಾಗಿರೋಕೆ ಏನ್‌ ಮಾಡಬೇಕು? ಕರಪ್ಷನ್‌ ಅದೂ ಇದೂ ಏನೂ ಇರಬಾರದು?

ನಾವೊಂದು ಕೆಲ್ಸ ಮಾಡ್ತಿದೀವಿ. ಹಾಗಾಗಿ ನಮ್ಮ ಏರಿಯಾದ ಪಬ್ಲಿಕ್‌ ಕೆಲ್ಸಗಳನ್ನು ಮಾಡೋಕೆ ಟೈಮಿಲ್ಲ. ಕಸದ ಸಮಸ್ಯೆ, ನೀರಿನ ಸಮಸ್ಯೆ ಹೀಗೆ ಯಾವುದೇ ಕೆಲಸ ಮಾಡೋಕೆ ಸಮಯವಿಲ್ಲ. ಹಾಗಾಗಿ ಈ ಕೆಲ್ಸಗಳನ್ನ ಮಾಡೋಕೆ ನಾವು ಯಾರೋ ಒಬ್ಬರನ್ನು ಅಪಾಯಿಂಟ್‌ ಮಾಡ್ಕೊàತೀವಿ. ಅವರು ಎಂಎಂಲ್‌ಎ ಇರಬಹುದು. ಕಾರ್ಪೋರೇಟರ್‌ ಇರಬಹುದು.  ಅಂದ್ರೆ ನಮಗೆ ಬೇಕಿರೋದು ಕೆಲಸಗಾರರು. ಕೆಲ್ಸ
ಮಾಡು. ಸಂಬಳ ತಗೋ. ಅಂಥಾದ್ದರಲ್ಲಿ ನಾಯಕ ಹೆಂಗಾಗ್ತಿಯ ನೀ? ಮನೆಯಿಂದ ದುಡ್‌ ತಂದು ಜನರಿಗೆ ಸಹಾಯ ಮಾಡಿದ್ರೆ ಆಗ ನೀನು ನಾಯಕ. ನೀ ಹಾಗೇನೂ ಮಾಡ್ತಿಲ್ಲವಲ್ಲ. ನಮ್‌ ದುಡ್ಡಲ್ಲಿ ಕೆಲ್ಸ ಮಾಡ್ತಿದ್ದಿ. ಅಲ್ವೇ? ನೀನೊಬ್ಬ ವರ್ಕರ್‌. ಸರಿನಾ? ನಮಗೆ ಕೆಲಸಗಾರರು ಬೇಕು. ಎಂಥಾ ಕೆಲಸಗಾರರು ಬೇಕು? ಎಲಿಜಿಬಲ್‌ ಕೆಲಸಗಾರರು. ಯೋಗ್ಯ ಕೆಲಸಗಾರರು ಅಂದ್ರೆ ಯಾರು? ಅದಕ್ಕೊಂದು ಐಡಿಯಾ ಇದೆ. ಈಗ ನಾನೊಂದು ಕಂಪನಿ ಮಾಡ್ತೀನಿ.

ಪೊಲಿಟಿಕಲ್‌ ಪಾರ್ಟಿ ಥರ ಅಥವಾ ಕಾರ್ಪೋರೇಟ್‌ ಕಂಪನಿ ಥರ. ಮೊದಲು ನಾನು ಒಂದೊಂದು ಏರಿಯಾದ ಆಸಕ್ತರಿಗೆ ಒಂದು ಆಡಿಯಾ ಹೇಳ್ತೀನಿ. ಅವರು ಮಾಡಬೇಕಾದ್ದು ಇಷ್ಟೇ- ಹಾಗೆ ಬಂದವರು ಅವರವರ ಏರಿಯಾದ ಸಂಪೂರ್ಣ ಮಾಹಿತಿ ಕೊಡಬೇಕು. ಆ ಏರಿಯಾದ ಸಮಸ್ಯೆಗಳೇನು? ಉದಾಹರಣೆಗೆ ಕಸದ ಸಮಸ್ಯೆ, ನೀರಿನ ಸಮಸ್ಯೆ, ಸ್ಕೂಲಿನ ಸಮಸ್ಯೆ ಹೀಗೆ. ಈ ಸಮಸ್ಯೆಗಳನ್ನು ಹೇಗ್‌  ಪರಿಹರಿಸ್ತೀಯಾ ಅಂತ ಬರೆಯಬೇಕು. ಎಷ್ಟು ದಿನಗಳಲ್ಲಿ ಸಾಲ್ವ ಮಾಡಕಾಗತ್ತೆ? ಅದಕ್ಕಾಗಿ ಎಷ್ಟು ಬಜೆಟ್‌ ಬೇಕು ನಿಂಗೆ. ಈ ಎಲ್ಲವನ್ನೂ ವಿವರವಾಗಿ
ಬರೆದು ಕಳಿಸಬೇಕು.

ಸರಿ, ಅದನ್ನು ಮಾಡಲು ಏನೇನ್‌ ಬೇಕು. ಒಂದು ಗಾಡಿ ಬೇಕು. ಇಂತಿಷ್ಟು ಜನ ಬೇಕು. ಕಸವನ್ನು ಡಂಪ್‌ ಮಾಡ್ಬೇಕು. ರೀಸೈಕ್ಲಿಂಗ್‌ ಪ್ಲಾಂಟ್‌ ಬೇಕು. ಇಷ್ಟ್ ದುಡ್ಡು ಬೇಕು. ಹೀಗೆ ಪರಿಹಾರ ಮತ್ತು ಏನೇನ್‌ ಬೇಕು ಅನ್ನೋದನ್ನೆಲ್ಲಾ ಬರೀಬೇಕು. ಯಾರಿಗೆ ಇಂಟರೆಸ್ಟ್‌ ಇದೆಯೋ ಅವರು ಬರೆದು ಕಳಿಸ್ಬೇಕು. ಈ ಥರ ಒಂದು ಏರಿಯಾದಲ್ಲಿ ಹತ್ತತ್ತು ಜನಾನೋ ಮೂರ್‌ಮೂರು ಜನಾನೋ ಬರೆದು ಕಳಿಸ್ತಾರೆ. ಅದರಲ್ಲಿ ನಾನು ಬೆಸ್ಟ್‌ ಅಂತನ್ನಿಸಿದವರನ್ನು ಆರಿಸ್ತೀನಿ. ಕೊನೆಗೆ ಪರ್ಸನಲ್ಲಾಗಿ ಇಂಟವ್ಯೂ ಮಾಡ್ತೀನಿ. ಅದರಲ್ಲಿ ಬೆಸ್ಟ್‌ ಅನ್ನಿಸಿದವರಿಗೆ ಸೀಟ್‌ ಕೊಡ್ತೀವಿ. ಸುಮ್ನೆ ಬಾಯಿಗ್‌ ಬಂದಂತೆ ಬರೆಯೋದಲ್ಲ. ಅವನು ಅದನ್ನು ಅನಲೈಸ್‌ ಮಾಡಿರಬೇಕು. ಅವರು ಅಲ್ಲೆಲ್ಲಾ ಓಡಾಡಿ, ಜನರ ಹತ್ತಿರ ಮಾತಾಡಿ, ಅಧ್ಯಯನ ಮಾಡಿ, ಸಂಶೋಧನೆ ಮಾಡಿ, ಪರಿಣತರ ಸಲಹೆ ಪಡ್ಕೊಂಡು ಎಷ್ಟ್ ಬಜೆಟ್‌ ಬೇಕು ಅಂತ ಬರೀಬೇಕು.

ಆಮೇಲೆ ಅವನು ಹೇಗ್‌ ವರ್ಕ್‌ ಮಾಡಬೇಕು ಅನ್ನೋದು. ನಮ್ಮ ನಿಮ್ಮೆಲ್ಲರ ಥರ ಒಂಭತ್ತರಿಂದ ಐದು ಗಂಟೆವರೆಗೆ ಮಾಡಿದ್ರೆ ಸಾಕು. ಏರಿಯಾದಲ್ಲೆಲ್ಲಾ ಸುತ್ತಾಡಿ ಎಲ್ಲಾದರೂ ಕಸದ ರಾಶಿ ಇದ್ದರೆ ಫೋಟೋ ತೆಗೆದು ಅವನ ಫೇಸ್‌ಬುಕ್ಕಲ್ಲಿ, ವೆಬ್‌ಸೈಟಲ್ಲಿ ಅವನ ಟ್ವಿಟ್ಟರಲ್ಲಿ ಮತ್ತು ಟೀವಿಲಿ ಕೂತು ಮಾತಾಡಿ ಇಲ್ಲಿ ಹೀಗಿತ್ತು ಅಂತ ಹೇಳಿ ಅದನ್ನು ಹೇಗೆ ಸರಿ ಮಾಡಿದೆ ಅನ್ನೋ ವಿವರವನ್ನೂ ಕೊಡಬೇಕು.

ಜಾಸ್ತಿ ಬೇಡ. ಎರಡು ಏರಿಯಾ ಕೊಡಿ. ಮೊದಲು ನಾನದನ್ನು ಮಾಡಿ ತೋರಿಸ್ತೀನಿ. ಇದನ್ನು ಹೇಳಬೇಕು ಜನಕ್ಕೆ. ಇದು ನನ್ನ ಮೈಂಡಲ್ಲಿರೋದು. ಸ್ವಲ್ಪ ಸ್ಟಡಿ ಮಾಡ್ತಾ ಇದ್ದೀನಿ. ಡೀಟೇಲ್‌ ಒಟ್ಟು ಗೂಡಿಸ್ತಾ ಇದೀನಿ. ಆಮೇಲೆ ಜನಕ್ಕೆ ಹೇಳಬೇಕು. 

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.