ವೀಕೆಂಡ್‌ನ‌ಲ್ಲಿ ಸಿನಿಮೋತ್ಸವಕ್ಕೆ ನುಗ್ಗಿ ಬಂದ ಸಿನಿಪ್ರೇಮಿಗಳು


Team Udayavani, Feb 25, 2018, 10:41 AM IST

film-fest.jpg

ಸಾಮಾನ್ಯವಾಗಿ ಒರಾಯನ್‌ ಮಾಲ್‌ ಎಂದರೆ ಶಾಪಿಂಗ್‌ ಎಂದರ್ಥ. ಅದರಲ್ಲೂ ವೀಕೆಂಡ್‌ ಎಂದರೆ ಒರಾಯನ್‌ ಮಾಲ್‌ನಲ್ಲಿ ಶಾಪಿಂಗ್‌ ಬ್ಯಾಗ್‌ನೊಂದಿಗೆ ಓಡಾಡುವವರೇ ಕಾಣಸಿಗುತ್ತಾರೆ. ಆದರೆ, ಈ ವೀಕೆಂಡ್‌ನ‌ಲ್ಲಿ ಒರಾಯನ್‌ ಮಾಲ್‌ನ ದೃಶ್ಯ ಬದಲಾಗಿತ್ತು. ಶಾಪಿಂಗ್‌ ಬ್ಯಾಗ್‌ಗಿಂತ ಸಿನಿಮಾ ಬ್ರೌಶರ್‌ ಕೈಯಲ್ಲಿ ಹಿಡಿದು, ಕುತೂಹಲದಿಂದ ಸಿನಿಮಾ ಪಟ್ಟಿ ವೀಕ್ಷಿಸುತ್ತಾ, ಸಮಯ ನೋಡುತ್ತಾ ಒರಾಯನ್‌ ಮಾಲ್‌ನ ಟಾಪ್‌ ಫ್ಲೋರ್‌ನತ್ತ ಹೆಜ್ಜೆ ಹಾಕುತ್ತಿದ್ದವರೇ ಜಾಸ್ತಿ. ಅದಕ್ಕೆ ಕಾರಣ ಚಿತ್ರೋತ್ಸವ. 10ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ.

 ಹೌದು, ನಿಮಗೆ ಗೊತ್ತಿರುವಂತೆ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ನಗರದ ಒರಾಯನ್‌ ಮಾಲ್‌ನ 11 ಪರದೆಗಳಲ್ಲಿ ಪ್ರದರ್ಶನವಾಗುತ್ತಿದೆ. ದಿನವೊಂದಕ್ಕೆ 45ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ವಿವಿಧ ದೇಶಗಳ ಅಪರೂಪದ ಚಿತ್ರಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತಿರುವುದು ಸಿನಿಮಾಸಕ್ತರ ಖುಷಿಗೆ ಕಾರಣವಾಗಿದೆ. ಆ ಖುಷಿ ಶನಿವಾರ ಒರಾಯನ್‌ ಮಾಲ್‌ನಲ್ಲಿ ಕಾಣುತ್ತಿತ್ತು. ಚಿತ್ರೋತ್ಸವ ಆರಂಭದ ಎರಡು ದಿನಗಳಿಗೆ ಹೋಲಿಸಿದರೆ ಶನಿವಾರ ಚಿತ್ರೋತ್ಸವಕ್ಕೆ ಜನ ನುಗ್ಗಿ ಬಂದಿದ್ದರು. 

ವೀಕೆಂಡ್‌ ಅನ್ನು ಸಿನಿಮಾದಲ್ಲಿ ಕಳೆಯಲು ನಿರ್ಧರಿಸಿದ ಪರಿಣಾಮ ಬೇರೆ ಬೇರೆ ಕ್ಷೇತ್ರದ ಮಂದಿ ಸಿನಿಮೋತ್ಸಕ್ಕೆ ಬಂದಿದ್ದರು. ಹಾಗಾಗಿಯೇ ಸಿನಿಮಾ ಹಾಲ್‌ಗ‌ಳು ತುಂಬಿ ತುಳುಕುತ್ತಿದ್ದವು. ಸರತಿ ಸಾಲಿನಲ್ಲಿ ನಿಂತು ತಮ್ಮ ನೆಚ್ಚಿನ ಚಿತ್ರಗಳನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ದೃಶ್ಯ ಶನಿವಾರ ಕಂಡು ಬಂತು. ಕೆಲವರಂತೂ ಸತತವಾಗಿ ಐದು ಸಿನಿಮಾಗಳನ್ನು ನೋಡಲು ಸಿದ್ಧರಾಗಿಯೇ ಬಂದಿದ್ದರು.

ಶನಿವಾರದ ಬೆಳಗ್ಗಿನ ಪ್ರದರ್ಶಗಳಲ್ಲಿ ಮುಖ್ಯವಾಗಿ ಇರಾನಿ ಚಿತ್ರ “ಲೀಫ್ ಆಫ್ ಲೈಫ್’, ಜರ್ಮನ್‌ ಚಿತ್ರಗಳಾದ “ದಿ ಫೈನಲ್‌ ಜರ್ನಿ’, ವೆಸ್ಟರ್ನ್’, ಇಸ್ರೇಲ್‌ ಚಿತ್ರ “ದಿ ಕೇಕ್‌ ಮೇಕರ್‌’,  ಟರ್ಕಿ ಚಿತ್ರ “ಯಲ್ಲೋ ಹೀಟ್‌’ಗಳನ್ನು ಕಣ್ತುಂಬಿಕೊಳ್ಳಲು ಸಿನಿಮಾಸಕ್ತರ ಕಾತುರ ಎದ್ದು ಕಾಣುತ್ತಿತ್ತು. “ಜಗತ್ತಿನ ಎಲ್ಲಾ ಭಾಷೆಯ ಚಿತ್ರಗಳನ್ನು ಒಂದೇ ಕಡೆ ಕಣ್ತುಂಬಿಕೊಳ್ಳುವ ಅವಕಾಶ ವರ್ಷಕ್ಕೊಮ್ಮೆ ಬೆಂಗಳೂರು ಚಿತ್ರೋತ್ಸವದ ಮೂಲಕ ಸಿಗುತ್ತಿದೆ.

ಇವತ್ತು ವೀಕೆಂಡ್‌. ವಾರವಿಡೀ ದುಡಿದ ಆಯಾಸವನ್ನು ಒಂದಷ್ಟು ಸಿನಿಮಾಗಳನ್ನು ನೋಡಿ ಕಳೆಯಬೇಕೆಂಬ ಆಸೆಯಿಂದ ಬಂದಿದ್ದೇನೆ’ ಎಂಬುದು ಚಿತ್ರೋತ್ಸವಕ್ಕೆ ಬಂದ ಸಿನಿಮಾ ಪ್ರೇಮಿಯೊಬ್ಬರ ಮಾತು. ಚಿತ್ರೋತ್ಸವದ ಬಗ್ಗೆ ಮಾತನಾಡುವ ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ, “ತುಂಬಾ ವರ್ಷಗಳಿಂದ ಬೇರೆ ಬೇರೆ ಚಿತ್ರೋತ್ಸವಗಳನ್ನು ನೋಡುತ್ತಾ ಬಂದಿದ್ದೇನೆ.

ಕಳೆದ 10 ವರ್ಷಗಳಿಂದ ಬೆಂಗಳೂರು ಚಿತ್ರೋತ್ಸವವನ್ನು ನೋಡುತ್ತಿದ್ದೇನೆ. ತುಂಬಾ ಅಚ್ಚುಕಟ್ಟಾಗಿ ನಡೆಸುತ್ತಾ ಬರುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಚಿತ್ರೋತ್ಸವ ತುಂಬಾ ಚೆನ್ನಾಗಿ ನಡೆಯುತ್ತಿದೆ. ಒಳ್ಳೆಯ ಸಿನಿಮಾಗಳನ್ನು ಆಯ್ಕೆ ಮಾಡಿ ತರುತ್ತಿದ್ದಾರೆ. ನನ್ನ ನಿರ್ದೇಶನದ “ಮಾರ್ಚ್‌ 22′ ಚಿತ್ರದ ಪ್ರದರ್ಶನ ಕೂಡಾ ಚಿತ್ರೋತ್ಸವದಲ್ಲಿ ಆಗಲಿದೆ’ ಎನ್ನುತ್ತಾರೆ. ಇಂದು ಕೂಡಾ ಚಿತ್ರೋತ್ಸವ ಸಿನಿ ಪ್ರೇಮಿಗಳಿಂದ ಗಿಜಿಗುಡುವ ನಿರೀಕ್ಷೆ ಇದೆ. 

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.