ಕಿಸ್ಮತ್ಗೆ ದರ್ಶನ್, ಶ್ರೀಮುರಳಿ ಸಾಥ್
Team Udayavani, Nov 28, 2018, 11:24 AM IST
ನಟ ವಿಜಯರಾಘವೇಂದ್ರ ಮೊದಲ ಬಾರಿಗೆ ನಿರ್ಮಿಸಿ, ನಿರ್ದೇಶಿಸಿರುವ “ಕಿಸ್ಮತ್’ ಚಿತ್ರಕ್ಕೆ ದರ್ಶನ್ ಸಾಥ್ ನೀಡುತ್ತಿದ್ದಾರೆ. ಕಳೆದ ವಾರ ಬಿಡುಗಡೆಯಾದ “ಕಿಸ್ಮತ್’ ಚಿತ್ರವನ್ನು ವಿಜಯರಾಘವೇಂದ್ರ ಚಿತ್ರರಂಗದ ಒಂದಷ್ಟು ಮಂದಿಗೆ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು. ಚಿತ್ರ ಬಿಡುಗಡೆ ನಂತರ ಚಿತ್ರದ ಬಗ್ಗೆ ಒಳ್ಳೆಯ ಮೆಚ್ಚುಗೆ ಕೇಳಿ ಬಂದಿತ್ತು.
ಅಂಬರೀಶ್ ಅವರ ನಿಧನದ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಸ್ವ-ಇಚ್ಛೆಯಿಂದ ಬಂದ್ ಮಾಡುವ ಮೂಲಕ ಗೌರವ ಸಲ್ಲಿಸಿದ್ದವು. ಈಗ ಪುನಃ ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿವೆ. ವಿಜಯರಾಘವೇಂದ್ರ ಮೊದಲ ಬಾರಿಗೆ ನಿರ್ದೇಶಿಸಿರುವ “ಕಿಸ್ಮತ್’ ಚಿತ್ರದ ಬಗ್ಗೆ ಸ್ವತಃ ದರ್ಶನ್ ಅವರೇ, “ಚಿತ್ರವನ್ನು ಯಾವಾಗ ತೋರಿಸುತ್ತೀಯ’ ಎಂಬ ಮಾತಿಗೆ, ವಿಜಯರಾಘವೇಂದ್ರ ಅವರು ಶುಕ್ರವಾರ ಚಿತ್ರ ತೋರಿಸುವುದಾಗಿ ಹೇಳಿದ್ದಾರೆ.
ಹಾಗಾಗಿ ಓರಿಯನ್ ಮಾಲ್ನಲ್ಲಿ ಶುಕ್ರವಾರ ಸಂಜೆ 7.30 ರ ಪ್ರದರ್ಶನಕ್ಕೆ ದರ್ಶನ್ ಆಗಮಿಸಿ ವೀಕ್ಷಣೆ ಮಾಡಲಿದ್ದಾರೆ. ಇನ್ನು, ಶ್ರೀಮುರಳಿ ಅವರು ಚಿತ್ರೀಕರಣದಲ್ಲಿ ಬಿಝಿಯಾಗಿದ್ದರಿಂದ “ಕಿಸ್ಮತ್’ ವೀಕ್ಷಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಶುಕ್ರವಾರ ಅವರೂ ಸಹ ಸಿನಿಮಾ ನೋಡಲಿದ್ದಾರೆ. ಇನ್ನು ಪುನೀತ್ರಾಜ್ಕುಮಾರ್ ಸಹ ಚಿತ್ರ ನೋಡಿ ಆ ಬಗ್ಗೆ ಮಾತನಾಡುವುದಾಗಿಯೂ ಹೇಳಿದ್ದಾರೆ’ ಎಂದು ವಿಜಯರಾಘವೇಂದ್ರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್