ಅಭಿಷೇಕ್‌ ಧೈರ್ಯದ ಹಿಂದಿನ ಕಥೆ ಬಿಚ್ಚಿಟ್ಟ ಸಿಎಂ


Team Udayavani, Dec 1, 2018, 11:30 AM IST

abishek-dhairya.jpg

ಅಂಬರೀಶ್‌ ನಿಧನದ ವೇಳೆ ಸುಮಲತಾ ಅವರು ಅಳುತ್ತಿದ್ದರೆ, ಅಭಿಷೇಕ್‌ ಕಣ್ಣೀರು ಸುರಿಸದೇ ಧೈರ್ಯ ತೋರಿದ್ದರು. ಇದು ಸಿಎಂ ಕುಮಾರಸ್ವಾಮಿಗೂ ಅಚ್ಚರಿ ಕಂಡು ನೇರವಾಗಿ ಅಭಿಯನ್ನು ಪ್ರಶ್ನಿಸಿದ್ದಾರೆ. ಆಗ ಆಭಿ ಅದಕ್ಕೆ ಉತ್ತರ ಕೊಟ್ಟಿದ್ದಾರೆ. ಆ ಘಟನೆಯನ್ನು ಸಿಎಂ ಎಚ್‌ಡಿಕೆ, ವಿವರಿಸಿದ್ದು ಹೀಗೆ, “ಅಂಬರೀಶ್‌ ಪುತ್ರ ಅಭಿಷೇಕ್‌ ಅವರ ಧೈರ್ಯ ಮೆಚ್ಚಲೇಬೇಕು.

ಆಸ್ಪತ್ರೆಗೆ ಭೇಟಿ ಕೊಟ್ಟಾಗ, ಕಣ್ಣಲ್ಲಿ ಒಂದಿಷ್ಟೂ  ನೀರು ತುಂಬಿಕೊಳ್ಳದೆ ಮೌನವಾಗಿದ್ದ. ಆ ಬಗ್ಗೆ ವಿಚಾರಿಸಿದಾಗ, “ಅಂಕಲ್‌ ನಾನು ದುಃಖ ಪಟ್ಟರೆ, ತಾಯಿ ಮುಂದೆ ನೋವು ತೋಡಿಕೊಂಡರೆ, ಅವರಿಗೆ ಆಘಾತ ಆಗುತ್ತೆ. ಹಾಗಾಗಿ, ನಾನು ಎಷ್ಟೇ ನೋವಾದರೂ, ಅಳು ಬಂದರೂ ತೋರಿಸಿಕೊಳ್ಳಲಾಗುತ್ತಿಲ್ಲ’ ಎಂದು ಹೇಳಿದಾಗ, ಎಲ್ಲೋ ಒಂದು ಕಡೆ ನನಗನ್ನಿಸಿದ್ದು, ಅಭಿ ಎಲ್ಲೂ ನೋವನ್ನು ತೋರಿಸಿಕೊಳ್ಳಲಿಲ್ಲ.

ಆ ನೋವನ್ನು ಅದುಮಿಟ್ಟುಕೊಂಡೇ, ದುಃಖೀಸುತ್ತಿದ್ದಾನೆ. ಅದೆಲ್ಲವೂ ಅಂಬರೀಶ್‌ ಅವರಿಂದ ಬಂದ ಗುಣ. ತಂದೆಯ ಗುಣವನ್ನೇ ಅಭಿ ಅಳವಡಿಸಿಕೊಂಡಿದ್ದಾನೆ. ಯಾವುದೇ ಕಷ್ಟ ಬಂದರೂ ಧೈರ್ಯವಾಗಿ ಎದುರಿಸಬೇಕು ಎಂಬುದನ್ನು ಕಲಿತಿದ್ದಾನೆ. ಅಂಬರೀಶ್‌ ಅವರ ಹೆಸರನ್ನು ಅವರ ಪುತ್ರ ಅಭಿಷೇಕ್‌ ಉಳಿಸುತ್ತಾನೆ. ಮುಂದಿನ ದಿನಗಳಲ್ಲಿ ಅಭಿಷೇಕ್‌ ಮೂಲಕ ನಾವು ಅಂಬರೀಶ್‌ ಅವರನ್ನು ಕಾಣುತ್ತೇವೆ’ ಎಂದರು. 

ಅಂಬಿ ಜೊತೆ ಮಗನ ಸಿನಿಮಾ ಮಾಡುವ ಆಸೆ ಇತ್ತು: ಸಿಎಂ ಎಚ್‌ಡಿಕೆ ಅವರಿಗೆ ಅಂಬರೀಶ್‌ ಅವರನ್ನು ಹಾಕಿಕೊಂಡು ಪುತ್ರ ನಿಖೀಲ್‌ಗೊಂದು ಸಿನಿಮಾ ಮಾಡುವ ಆಸೆ ಇತ್ತಂತೆ. ಆ ಬಗ್ಗೆಯೂ ಹೇಳಿಕೊಂಡರು.  “ನನಗೊಂದು ಆಸೆ ಇತ್ತು. ನನ್ನ ಮಗನ ಜೊತೆ ಅಂಬರೀಶ್‌ ಅವರನ್ನು ಹಾಕಿಕೊಂಡು ಒಂದು ಸಿನಿಮಾ ಮಾಡಬೇಕು ಎಂಬುದೇ ಆ ಆಸೆ. ನನಗೆ ಡಾ.ರಾಜಕುಮಾರ್‌ ಮೇಲೆ ಅಪಾರ ಗೌರವ. ಹಾಗೆ ಅಂಬರೀಶ್‌ ಜೊತೆಗೆ ಅಪಾರ ಸ್ನೇಹವೂ ಇತ್ತು. ಅಂಬರೀಶ್‌ ಅವರ ಮೂರು ಚಿತ್ರಗಳನ್ನು ಸತತವಾಗಿ ಹಂಚಿಕೆ ಮಾಡಿದ್ದೇನೆ.

ಆ ಮೂಲಕ ಯಶಸ್ವಿಯಾಗಿದ್ದೂ ಹೌದು. ನಾನು ನನ್ನ ಪುತ್ರನ ಜೊತೆಗೆ ಅಂಬರೀಶ್‌ ಅವರಿಗೊಂದು ಸಿನಿಮಾ ಮಾಡಬೇಕು ಅಂತಾನೇ, ತೆಲುಗಿನ “ರೆಬೆಲ್‌’ ಚಿತ್ರದ ಹಕ್ಕು ಖರೀದಿಸಿದ್ದೆ. ಆ ಕನ್ನಡ ಚಿತ್ರದಲ್ಲಿ ಅಂಬರೀಶ್‌ ಅವರು ಪಾತ್ರ ಮಾಡಬೇಕು ಅಂತಾನೇ ರೈಟ್ಸ್‌ ತಂದಿದ್ದೆ. ಆದರೆ, ರಾಜಕೀಯ ಒತ್ತಡಗಳಿಂದಾಗಿ, ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ ಎಂಬ ಕೊರಗು ಇದೆ. ಕಲಾವಿದರ ಅಂತ್ಯಕ್ರಿಯೆ ನೋಡಿದಾಗ, ಬೇರೆ ರಾಜ್ಯಗಳಲ್ಲಿ ಕಲಾವಿದರುಗಳಿಗೆ ಇಷ್ಟೊಂದು ಗೌರವ ಸಿಕ್ಕಿರಲಿಕ್ಕಿಲ್ಲ.

ಬಹುಶಃ ಕನ್ನಡಿಗರು ಮತ್ತು ಇಲ್ಲಿನ ಸರ್ಕಾರಗಳು ಆ ರೀತಿಯ ಗೌರವ ಕೊಡುತ್ತಿರುವುದು ದೇಶಕ್ಕೆ ಮಾದರಿ. ಯಾರೋ ಒಬ್ಬರು, ಕಂಠೀರವ ಸ್ಟುಡಿಯೋದಲ್ಲಿ ಕಲಾವಿದರ ಅಂತ್ಯಕ್ರಿಯೆ ಮಾಡಿರುವುದಕ್ಕೆ ನ್ಯಾಯಾಲಯ ಮೆಟ್ಟಿಲು ಏರಿದ್ದಾರೆ. ಕಲಾವಿದರ ಸಿನಿಮಾಗಳ ಮೂಲಕ ಸರ್ಕಾರಕ್ಕೆ ಹಲವು ರೀತಿಯಲ್ಲಿ ತೆರಿಗೆ ರೂಪದಲ್ಲಿ ಹಣ ಬರುತ್ತಿದೆ. ಹೀಗಾಗಿ, ಕಲಾವಿದರಿಗೆ ಸರ್ಕಾರ ಕೊಡುವ ಗೌರವ ಇದು. ಇದರಲ್ಲಿ ಸಣ್ಣತನ ಇರಬಾರದು’ ಎಂದರು. 

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.