ಚಿತ್ರೋದ್ಯಮದಿಂದ ಅಂಬಿ ನಮನ


Team Udayavani, Dec 1, 2018, 11:30 AM IST

chitrodyama.jpg

ಕನ್ನಡ ಚಿತ್ರರಂಗದ ಆಪತ್ಬಾಂದವ, ಅಭಿಮಾನಿಗಳ ಆರಾಧ್ಯ ದೈವ, ಸ್ನೇಹಿತರ ಪಾಲಿನ ಪ್ರೀತಿಯ ರೆಬೆಲ್‌ಸ್ಟಾರ್‌ ಅಂಬರೀಶ್‌ ನಮ್ಮಿಂದ ದೂರವಾಗಿದ್ದಾರೆಂಬ ಕಹಿಸತ್ಯವನ್ನು ಅರಗಿಸಿಕೊಳ್ಳಲು ಇನ್ನೂ ಮನಸ್ಸು ಒಪ್ಪುತ್ತಿಲ್ಲ. ಅದಕ್ಕೆ ಕಾರಣ ಅಂಬರೀಶ್‌ ಎಲ್ಲರೊಂದಿಗೆ ಬೆರೆತ ರೀತಿ, ತೋರಿದ  ಆತ್ಮೀಯತೆ. ಕನ್ನಡ ಚಿತ್ರರಂಗದ ಏನೇ ಸಮಸ್ಯೆ ಇದ್ದರೂ ತಕ್ಷಣ ಸ್ಪಂಧಿಸುತ್ತಿದ್ದ ಅಂಬರೀಶ್‌ ಅವರಿಗೆ ಚಿತ್ರರಂಗ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚಿತ್ರೋದ್ಯಮದ ಪರವಾಗಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅಂಬರೀಶ್‌ ಅವರ ವ್ಯಕ್ತಿತ್ವವನ್ನು ಅನೇಕರು ಬಣ್ಣಿಸಿದರು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಚಿತ್ರರಂಗದ ಕಲಾವಿದರು ಸೇರಿದಂತೆ ಅನೇಕರು ಸೇರಿದ್ದ ಈ ಸಭೆಯಲ್ಲಿ ಸುಮಲತಾ ಅಂಬರೀಶ್‌ ಕೂಡ ತಮ್ಮ ಪತಿ ಬದುಕಿದ ರೀತಿ, ಜನ ತೋರಿದ ಪ್ರೀತಿಯನ್ನು ನೆನೆಯುತ್ತಲೇ ಭಾವುಕರಾದರು.

ರಾಜನಂತೆ ಬದುಕಿದ ಅಂಬಿಯನ್ನು ರಾಜನಂತೆ ಕಳುಹಿಸಿಕೊಟ್ಟ ಸರ್ಕಾರ, ಅಭಿಮಾನಿಗಳು ಸೇರಿದಂತೆ ಪ್ರತಿಯೊಬ್ಬರಿಗೆ ಕೈ ಮುಗಿದು ನಮಸ್ಕರಿಸಿದ ಸುಮಲತಾ ಅಂಬರೀಶ್‌, ಅಂಬರೀಶ್‌ಗೆ ತೋರಿದ ಪ್ರೀತಿಯನ್ನು ಮಗ ಅಭಿಷೇಕ್‌ಗೂ ತೋರಿ ಎನ್ನುತ್ತಾ ಭಾವುಕರಾದರು. “ಅಂಬಿ ನಮನ’ ಶ್ರದ್ಧಾಂಜಲಿ ಸಭೆಯಲ್ಲಿ ಹೊರಹೊಮ್ಮಿದ ಭಾವುಕ ಮಾತುಗಳು ಇಲ್ಲಿವೆ ….

ಅರಸನಾಗಿ ಬದುಕಿ ಅರಸನಾಗಿಯೇ ಹೋದ್ರು: ಅಂಬರೀಶ್‌ ಅವರ ನಿಧನದ ನಂತರ ಸುಮಲತಾ ಅಂಬರೀಶ್‌ ಅವರು ಮೊದಲ ಬಾರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.ಮಡುಗಟ್ಟಿದ ನೋವಿನಲ್ಲೇ ತಮ್ಮ ಪತಿಯನ್ನು ಬೆಳೆಸಿದ,ಪ್ರೀತಿ ತೋರಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದರು. ಭಗವದ್ಗೀತೆಯ ಅಂಶಗಳನ್ನು ಉಲ್ಲೇಖೀಸುತ್ತಲೇ ಸುಮಲತಾ ಅವರು ಮಾತಿಗಿಳಿದರು.

ಅದು ಅವರ ಮಾತುಗಳಲ್ಲೇ -“ಭಗವದ್ಗೀತೆಯಲ್ಲಿ ಬರೆದಿದೆಯಂತೆ, ಬರುವಾಗ ಏನ್‌ ತಗೊಂಡು ಬರಿಯಾ, ಇಲ್ಲಿಂದ ಹೋಗುವಾಗ ಏನ್‌ ತಗೊಂಡ್‌ ಹೋಗ್ತಿಯ, ಇಲ್ಲಿ ಯಾವುದು ಶಾಶ್ವತ ಅಲ್ಲ ಎಂದು ದೇವರು ಮನುಷ್ಯನೊಬ್ಬನಿಗೆ ಹೇಳುತ್ತಾರಂತೆ. ಆಗ ಆ ಮನುಷ್ಯ, “ನೀನು ನನ್ನನ್ನು ಇಲ್ಲಿ ಕಳುಹಿಸುವಾಗ ಒಂದೇ ಹೃದಯ ಕೊಟ್ಟು ಕಳುಹಿಸಿದ್ದೀಯ. ಆದರೆ ನಾನು ಇಲ್ಲಿಂದ ಹೋಗುವಾಗ ಲಕ್ಷಾಂತರ ಜನರ ಹೃದಯದಲ್ಲಿ ಮನೆ ಮಾಡಿಕೊಂಡು ನಾನು ಶಾಶ್ವತವಾಗಿ ಇಲ್ಲೇ ಇರುತ್ತೇನೆ.

ನೀನು ನನ್ನ ಕರೆದುಕೊಂಡು ಹೋಗಬಹುದು, ಆದರೆ ನನ್ನ ಹೃದಯ, ಮನೆ ಇಲ್ಲೇ ಇರುತ್ತೆ ಎಂದು ನಕ್ಕುಬಿಟ್ಟು ಆ ಮನುಷ್ಯ ಹೇಳುತ್ತಾನಂತೆ … ಅಂಬರೀಶ್‌ ಅಂತಹ ಒಂದು ಮನುಷ್ಯರಾಗಿದ್ದರು. ನಮ್ಮ-ನಿಮ್ಮ ಅಂಬರೀಶ್‌ ಅವರ ಪ್ರಯಾಣದ ಬಗ್ಗೆ ನನಗಿಂತ ನಿಮಗೆ ಹೆಚ್ಚು ಗೊತ್ತಿದೆ. ಅವರನ್ನು ನನಗಿಂತ ಹೆಚ್ಚು ಹತ್ತಿರದಿಂದ ನೋಡಿದವರು ಇದ್ದೀರಿ. ನಾನು 27 ವರ್ಷಗಳಲ್ಲಿ ನೋಡಿದ್ದನ್ನಷ್ಟೇ ಹೇಳಬಲ್ಲೆ. ನನಗೆ ಅಂಬರೀಶ್‌ ಸ್ನೇಹಿತ ಅಂತ ಹೇಳಲಾ, ಗಂಡ ಅಂತ ಹೇಳಲಾ, ಲೈಫ್ ಪಾರ್ಟರ್‌ ಅಂತ ಹೇಳಲಾ …  

ನನಗೆ ತಂದೆಯಾಗಿ, ಅಣ್ಣನಾಗಿಯೂ ಇದ್ದರು. ನನ್ನ ಪ್ರಾಣಕ್ಕಿಂತ ಹೆಚ್ಚಾಗಿದ್ದರು. ಅವರು ಎಲ್ಲೇ ಇದ್ದರೂ ನಗುನಗುತ್ತಾ ಆಶೀರ್ವಾದ ಮಾಡ್ತಾ ಇರ್ತಾರೆ. ಅವರ ಬಗ್ಗೆ ಹೇಳಲು ಯಾವ ಪದ ಹುಡುಕಲಿ, ನಾನು ನೋಡಿರುವ ಅಂಬರೀಶ್‌, ಒಳ್ಳೇ ಮಗನಾಗಿದ್ರು, ಒಳ್ಳೆ ಗಂಡನಾಗಿದ್ರು, ಒಳ್ಳೆ ತಂದೆಯಾಗಿದ್ರು, ಒಳ್ಳೆಯ ಸ್ನೇಹಿತನಾಗಿದ್ರು, ಒಳ್ಳೆ ನಟ, ರಾಜಕೀಯ ನಾಯಕ, ಒಳ್ಳೇ ಸಮಾಜ ಸೇವಕ, ಕ್ರೀಡೆಯಲ್ಲಿ ಆಸಕ್ತಿ ಇದ್ದ ವ್ಯಕ್ತಿ … ಹೀಗೆ ವಿಭಿನ್ನ ವ್ಯಕ್ತಿತ್ವ ಇದ್ದ ವ್ಯಕ್ತಿಯಾಗಿದ್ದರು.

ಎಲ್ಲಕ್ಕಿಂತ ಹೆಚ್ಚಾಗಿ ಒಳ್ಳೆಯ ಮನುಷ್ಯನಾಗಿದ್ರು, ಮನುಷ್ಯನಾಗಿಯೇ ಉಳಿದು ಮನುಷ್ಯನಾಗಿಯೇ ಹೋದರು, ರಾಜನಾಗಿ ಬಾಳಿ ರಾಜನಾಗಿಯೇ ಹೋದರು. ಅವರ ಅಂತಿಮ ಪಯಣದಲ್ಲಿ ಅರಸನಾಗಿಯೇ ಕಳುಹಿಸಿಕೊಟ್ಟಿದ್ದೀರ. ಮುಖ್ಯಮಂತ್ರಿ ಕುಮಾರಣ್ಣ ಸರಿಯಾದ ಸಮಯಕ್ಕೆ ನಿರ್ಧಾರ ತಗೊಂಡು ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದರು.ಅದಕ್ಕೆ ನಾನು ಸರ್ಕಾರ, ಅಭಿಮಾನಿಗಳು ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ.

ಮಾಧ್ಯಮದವರನ್ನು ಅವರು “ಸುಂದರ’ ಭಾಷೆಯಿಂದ ಸಂಭೋದಿಸುತ್ತಿದ್ದರೂ ಅದನ್ನು ಕ್ರೀಡಾಮನೋಭಾವದಿಂದ ತಗೊಂಡು, ಅವರನ್ನು ಪ್ರೀತಿಸುತ್ತಿದ್ದ ಮಾಧ್ಯಮದವರಿಗೂ ನಾನು ಧನ್ಯವಾದ ಹೇಳುತ್ತೇನೆ. ಜೊತೆಗೆ ಅವರಿಗೆ ಅನ್ನದಾತರಾದ ನಿರ್ಮಾಪಕರು, ವಿಭಿನ್ನ ಪಾತ್ರ ಕೊಟ್ಟು ಜನರ ಮನಸ್ಸಲ್ಲಿ ಉಳಿಯುವಂತೆ ಮಾಡಿದ ನಿರ್ದೇಶಕರಿಗೆ, ತಾಂತ್ರಿಕ ವರ್ಗಕ್ಕೂ ನನ್ನ ನಮನ.

ಅಂಬಿ ಕೊನೆಯ ಆಸೆ ಈಡೇರಲಿಲ್ಲ: ಅಂಬರೀಶ್‌ ಅವರ ಕೊನೆಯ ಆಸೆಯ ಬಗ್ಗೆಯೂ ಸುಮಲತಾ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. “ಅಂಬರೀಶ್‌ ಅವರಿಗೆ ಒಂದು ಆಸೆ ಇತ್ತು. ಅದು ಅಭಿಷೇಕ್‌ನ ಮೊದಲ ಸಿನಿಮಾವನ್ನು ನೋಡಬೇಕೆಂಬುದು. ಆದರೆ ಅದು ಈಡೇರಲೇ ಇಲ್ಲ. ಅಭಿಷೇಕ್‌ ಮೇಲೂ ನಿಮ್ಮ ಆಶೀರ್ವಾದ ಇರಲಿ’ ಎನ್ನುತ್ತಾ ಭಾವುಕರಾದರು. 

ಟಾಪ್ ನ್ಯೂಸ್

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.