ಶ್ರೀಗಳ ಕುರಿತು ರಚಿಸಿದ್ದ ಗೀತೆ ಬರಲೇ ಇಲ್ಲ


Team Udayavani, Jan 22, 2019, 6:00 AM IST

srigala-kuritu.jpg

ಶ್ರೀ ಸಿದ್ಧಗಂಗಾ ಶ್ರೀಗಳ ಕುರಿತ ಸಾಕ್ಷ್ಯಚಿತ್ರಗಳು, ಚಲನಚಿತ್ರಗಳು ಬಂದಿವೆ. ಅದ್ಭುತ ಹಾಡುಗಳೂ ಹೊರಬಂದಿವೆ. ಆದರೆ, ಇತ್ತೀಚೆಗೆ ಅವರ ಕುರಿತು ರಚನೆಯಾಗಿದ್ದ ಹಾಡೊಂದು ಮಾತ್ರ ಬಿಡುಗಡೆಯಾಗಲೇ ಇಲ್ಲ. ಅವರ ಆಶೀರ್ವಾದ ಪಡೆದು, ಅವರ ಕಾಯಕ ಮತ್ತು ತ್ರಿವಿಧ ದಾಸೋಹದ ಕುರಿತಂತೆ ರಚನೆಯಾಗಿದ್ದ ಹಾಡು ಅವರ ಕೈಯಿಂದಲೇ ಬಿಡುಗಡೆಯಾಗಬೇಕಿತ್ತು. ಆದರೆ, ಕೊನೆಗೂ ಆ ಹಾಡು ಹೊರಬರಲಿಲ್ಲ…

ಹೌದು, ಈಗಾಗಲೇ ಎಲ್ಲೆಡೆ ಜೋರು ಸುದ್ದಿಯಾಗಿರುವ “ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ…’ಗೀತೆ ಬರೆದಿದ್ದ ನಿರ್ದೇಶಕ, ಗೀತ ಸಾಹಿತಿ ನಮ್‌ಋಷಿ, ಶ್ರೀ ಸಿದ್ಧಗಂಗಾ ಶ್ರೀಗಳ ಕುರಿತು ಹಾಡೊಂದನ್ನು ರಚಿಸಿದ್ದರು. ಆ ಹಾಡಿಗೆ ಗಾಯಕ ರವೀಂದ್ರ ಸೊರಗಾವಿ ಅವರು ಧ್ವನಿ ನೀಡಿದ್ದರು. ಶ್ರೀಗುರು ಸಂಗೀತ ನಿರ್ದೇಶಿಸಿದ ಹಾಡಿಗೆ ಎಚ್‌.ಎಸ್‌.ಸೋಮಶೇಖರ್‌ ನಿರ್ಮಾಪಕರು.

7.40 ನಿಮಿಷ ಅವಧಿಯಲ್ಲಿರುವ ಶ್ರೀಗಳ ಕುರಿತಾದ ಆ ಹಾಡು ರೆಡಿಯಾಗಿದ್ದರೂ, ಶ್ರೀಗಳಿಂದ ಬಿಡುಗಡೆಯಾಗಲಿಲ್ಲ ಎಂಬ ನೋವು ಗೀತರಚನೆಕಾರ ನಮ್‌ಋಷಿ ಅವರಿಗಿದೆ. ಶ್ರೀಗಳ ಕುರಿತು ಹಾಡು ಬರೆದ ಬಗ್ಗೆ “ಉದಯವಾಣಿ’ ಜೊತೆ ಮಾತನಾಡಿದ ನಮ್‌ಋಷಿ, “ಒಳಿತು ಮಾಡು ಮನಸ..’ ಹಾಡಿನ ಕುರಿತು ಾಹಿನಿಯೊಂದರಲ್ಲಿ ಸಂದರ್ಶನ ಬಂದ ಸಮಯದಲ್ಲಿ, ಒಬ್ಬರು, ಶ್ರೀಗಳನ್ನು ಭೇಟಿ ಮಾಡಿಸಿದ್ದರು.

ಆ ಸಮಯದಲ್ಲಿ ಶ್ರೀಗಳ ಆಶೀರ್ವಾದ ಪಡೆದು, ಗೀತೆ ರಚನೆ ಮಾಡುವುದಾಗಿ ಹೇಳಿದ್ದೆ. ಶ್ರೀಗಳು ಕೂಡ “ಓಂ ನಮಃ ಶಿವಾಯ’ ಎನ್ನುವ ಮೂಲಕ ಆಶೀರ್ವದಿಸಿದ್ದರು. ಆಗ ಬರೆದಿದ್ದ ಹಾಡನ್ನು, ಶ್ರೀಗಳ ಕೈಯಿಂದಲೇ ಬಿಡುಗಡೆ ಮಾಡಿಸಬೇಕು ಎಂಬ ಆಸೆ ಇತ್ತು. ಆದರೆ ಆಗಲಿಲ್ಲ’ ಎನ್ನುವ ನಮ್‌ ಋಷಿ ಅವರು ಶ್ರೀಗಳ ಕುರಿತು ಬರೆದ ಗೀತೆಯ ಸಾಲುಗಳಿವು.

ನಡೆದಾಡುವ ದೈವ….
ಪಲ್ಲವಿ

ಕಾಯಕ ಕೈಲಾಸ ಅಂದರು ಬಸವ
ಅದರಂತೆ ನಡೆದರು ನಡೆದಾಡೋ ದೈವ
ಸಿದ್ಧಗಂಗಾ ಕ್ಷೇತ್ರವೇ ಪೂಜ್ಯರ ಉಸಿರು
ಪ್ರತಿ ಕಲ್ಲು ಹೇಳುತ್ತಿವೆ ಬುದ್ಧಿಯ ಹೆಸರು

ಚರಣ
ನೋಡು ನೋಡು ನೋಡಿಲ್ಲಿ ಬಂದು
ಆರಿಲ್ಲ, ಹಚ್ಚಿದ ಒಲೆಯು ಎಂದು
ಊರೂರು ತಿರುಗಿ ಭಿಕ್ಷೆಯ ಬೇಡಿ
ಅನ್ನವ ಹಾಕಿದ ಯೋಗಿಯ ನೋಡಿ
ಜಾತಿ ಮತಗಳಿಗೆ ಬೆಂಕಿಯ ಇಟ್ಟು
ಎಲ್ಲರೂ ಒಂದೇ ಎನುವುದಾ ನೆಟ್ಟು

ಜ್ಞಾನದ ಜ್ಯೋತಿಯ ಹಚ್ಚುತ್ತಾ ನಡೆದ
ಧರೆಯಲ್ಲಿ ಅಳಿಯದ ಇತಿಹಾಸ ಬರೆದ
ಕಾಯಕ ಕೈಲಾಸ ಅಂದರು ಬಸವ
ಅದರಂತೆ ನಡೆದರು ನಡೆದಾಡೋ ದೈವ

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.