ಹಗಲಲ್ಲೇ ನಾಡಿಗಿಳಿದ ಕಾಡಾನೆಗಳು
Team Udayavani, Feb 9, 2018, 1:14 PM IST
ಮುಳ್ಳೇರಿಯ: ಮುಳಿಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾನತ್ತೂರು ನೆಯ್ಯಂಗಯಕ್ಕೆ ಆನೆಗಳ ಹಿಂಡು ದಾಳಿಯಿಟ್ಟಿದ್ದು, ಪರಿಸರದಲ್ಲಿ ಬೀಡುಬಿಟ್ಟಿದೆ. ಈ ತನಕ ರಾತ್ರಿ ಹೊತ್ತಿನಲ್ಲಷ್ಟೇ ಇಲ್ಲಿನ ಜನರ ನಿದ್ದೆಗೆಡಿಸುತ್ತಿದ್ದ ಆನೆಗಳು ಸಂಜೆ ಹೊತ್ತಿನಲ್ಲೇ ನಾಡಿಗಿಳಿದು ಭಾರೀ ಆತಂಕ ಸೃಷ್ಟಿಸಿವೆ.
2 ಮರಿಯಾನೆಗಳು, 6 ದೊಡ್ಡ ಆನೆಗಳು ಹಿಂಡಿನಲ್ಲಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪಯಸ್ವಿನಿ ನದಿಯ ನೆಯ್ಯಂಗಯದಲ್ಲಿ ಆನೆಗಳ ಹಿಂಡು ನೀರು ಕುಡಿದು, ಸ್ನಾನ ಮಾಡುತ್ತಿರುವುದನ್ನು ಸ್ಥಳೀಯರು ವೀಕ್ಷಿಸಿದ್ದಾರೆ.
ಒಳಿಯತ್ತಡ್ಕ, ಕಾನತ್ತೂರು, ಕುಂಡುಚ್ಚಿ ಮೊದಲಾದ ಪ್ರದೇಶಗಳಲ್ಲಿ ಮತ್ತೆ ಆನೆಗಳ ಹಿಂಡು ವ್ಯಾಪಕ ಕೃಷಿ ನಾಶ ಮಾಡಿದೆ. ಬುಧವಾರ ರಾತ್ರಿ ಎರಿಂಜಿಪುಯ ಮುರಳೀಧರನ್ ಅವರ ತೋಟಕ್ಕಿಳಿದ ಆನೆಗಳು ಅಡಿಕೆ ಮರಗಳು, ಬಾಳೆ ಕೃಷಿ ನಾಶ ಮಾಡಿವೆ. ಬೆಂಕಿ ಹಾಕಿ ಆನೆಗಳನ್ನು ಓಡಿಸಲು ಯತ್ನಿಸಿದರೂ ಆನೆಗಳು ಹಿಂಜರಿಯುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ