ಸಾಧನೆ ಎದುರಿಗಿದೆ, ಅಳೆಯಬೇಕಾದ್ದು ಜನ


Team Udayavani, Feb 17, 2018, 8:15 AM IST

s-4.jpg

ಯಾವುದೇ ರಾಜ್ಯದ ಮುಖ್ಯಮಂತ್ರಿಗೆ ಅಧಿಕಾರ ಅವಧಿಯ ಕೊನೆಯ ವರ್ಷ ಕತ್ತಿಯ ಅಲುಗಿನ ನಡಿಗೆಯಾಗಿರುತ್ತದೆ. ಕೆಲವೇ ರಾಜಕಾರಣಿಗಳು ಅದನ್ನು ನಿರಾಯಾಸವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗುತ್ತಾರೆ. ಅಂಥವರ ಸಾಲಿಗೆ  ಸಿಎಂ ಸಿದ್ದರಾಮಯ್ಯ ಸೇರುತ್ತಾರೆ.  ಅವರ ವರ್ಚಸ್ಸು ವರ್ಷದಿಂದ ವರ್ಷಕ್ಕೆ ಬದಲಾಗುತ್ತಾ ಬಂತು. ಸರಕಾರ ಮೂರು ವರ್ಷಗಳು ಪೂರ್ಣಗೊಂಡು ನಾಲ್ಕನೇ ವರ್ಷಕ್ಕೆ ಕಾಲಿಟ್ಟಾಗ ವರ್ಚಸ್ಸು ಕ್ಷೀಣಿಸಿದಂತೆ ಕಂಡು ಬಂತು. ಅನಂತರ  ವೈಯಕ್ತಿಕವಾಗಿಯೂ ನೋವಿನಿಂದ ಕುಗ್ಗಿದ್ದರು. ಐದನೇ ವರ್ಷದಲ್ಲಿ  ಎಲ್ಲರ ನಿರೀಕ್ಷೆಗೆ ಮೀರಿ  ಎದ್ದು ನಿಂತರು. ವಿಪಕ್ಷ ಬಿಜೆಪಿ  ಸರಕಾರದ ವಿರುದ್ಧ ಹೋರಾಟವನ್ನು ರಾಜ್ಯದೆಲ್ಲೆಡೆ ಮಾಡುತ್ತಿದೆಯೋ, ಅದೇ ರೀತಿ ತಮ್ಮ ಸಾಧನೆ  ಜನರಿಗೆ ವಿವರಿಸಲು ಸಿದ್ದರಾಮಯ್ಯನವರೂ ರಾಜ್ಯವ್ಯಾಪಿ ಸಂಚರಿಸಿದರು. ಅವರಿಗೆ ಈಗ ಒದಗಿಬಂದ ಸುವರ್ಣಾವಕಾಶ ರಾಜ್ಯ ಬಜೆಟ್‌ 2018-19. ಐದು ವರ್ಷಗಳ ಸಾಧನೆಗಳನ್ನು ನಾಲ್ಕು ಗಂಟೆಗಳ 173 ಪುಟಗಳ ಮೂಲಕ ವಿವರಿಸುವಲ್ಲಿ ಯಶಸ್ವಿಯಾದರು. ಈ ಬಾರಿ ಭಾರೀ ಪ್ರಮಾಣದಲ್ಲಿ ಘೋಷಣೆಗಳು ಇರಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಹಾಗಾಗಲಿಲ್ಲ. ಸಮತೋಲನದಿಂದ  ಸಾಧನೆ  ವಿವರಿಸುತ್ತಾ , ಆಯ್ದ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದರು. ಸರಕಾರಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು , ಅಹಿಂದ ವರ್ಗಕ್ಕೆ  40 ಸಾವಿರ ಕೋಟಿ ರೂಪಾಯಿಗಳ ನೆರವಿನ ಪ್ರಸ್ತಾವವೂ ಬಜೆಟ್‌ನಲ್ಲಿದೆ. ಭಾಗ್ಯಗಳ ಸುರಿಮಳೆಗಳಿಲ್ಲದೆ ಜಾಗರೂಕತೆಯಿಂದ ಸಿದ್ಧಪಡಿಸಿದ ಬಜೆಟ್‌ನಲ್ಲಿ  ಸಿಎಂ ಅನುಭವ ಸ್ಪಷ್ಟವಾಗಿ ಗೋಚರಿಸುತ್ತದೆ. ಜನರನ್ನು ಮರುಳಾ ಗಿಸದೆ ಭರವಸೆ ನೀಡದೆ ನಯವಾಗಿ,  ಚಾಕಚಕ್ಯತೆಯಿಂದ ಹೇಗೆ ಬಜೆಟ್‌ ಮಂಡಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಬಜೆಟ್‌ ಅನುಷ್ಠಾನ ಆರಂಭವಾಗುವ ಹೊತ್ತಿಗೆ ಚುನಾವಣಾ ಸಮರ ಆರಂಭವಾಗಿರುತ್ತದೆ. ಹಾಗಾಗಿ ಅದೃಷ್ಟ ಚೆನ್ನಾಗಿದ್ದರೆ ಮತ್ತೂಂದು ಬಜೆಟ್‌ ಮಂಡಿಸುವ ಅವಕಾಶ ಸಿಕ್ಕಿ ದಾಖಲೆ ಮುರಿಯಬಹುದು. ಬಜೆಟ್‌ ನಾಡಿಗೆ ಉಪಯುಕ್ತವಲ್ಲ ಎಂಬುದನ್ನು ವಿಪಕ್ಷಗಳು ಜನರಿಗೆ ಹೇಗೆ ಮನದಟ್ಟು ಮಾಡಬಹುದು ಎಂಬುದೇ  ಪ್ರಶ್ನೆ.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.