ಉಕ್ರೇನ್ ಮೇಲೆ ಸುಳ್ಳು ಸುದ್ದಿಗಳ ದಾಳಿ!
Team Udayavani, Mar 10, 2022, 7:15 AM IST
ಉಕ್ರೇನ್ನಲ್ಲಿ ನಡೆಯುತ್ತಿರುವ ರಷ್ಯಾ ದಾಳಿಯಿಂದ ಕಂಗಾಲಾಗಿರುವ ಜನರಲ್ಲಿ ಧೈರ್ಯ ತುಂಬುವಂತೆ ಮಾಡಲು ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಹಲವಾರು ಜನರು ವಿವಿಧ ಬಗೆಯ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ. ಆದರೆ, ಅವರು ಹಾಕುವ ಪೋಸ್ಟ್ಗಳಲ್ಲಿ ಕೆಲವು ಸುಳ್ಳಾಗಿರುತ್ತವೆ ಅಥವಾ ಸತ್ಯಕ್ಕೆ ದೂರವಾಗಿರುವಂಥವಾಗಿರುತ್ತವೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ, ಅಧ್ಯಕ್ಷ ಝೆಲೆನ್ಸ್ಕಿ ಅವರು, ಉಕ್ರೇನ್ ಸೇನಾ ಸಮವಸ್ತ್ರ ಧರಿಸಿಕೊಂಡು, ಯುದ್ಧ ಸಾಮಗ್ರಿಗಳಿರುವ ಬ್ಯಾಗನ್ನು ಕಟ್ಟಿಕೊಂಡು ಯುದ್ಧ ವಿಮಾನವೊಂದರ ಬಳಿ ತೆರಳುತ್ತಿರುವ ಫೋಟೋವೊಂದು ಉಕ್ರೇನ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಬಟ್ಟೆ ವೈರಲ್ ಆಗಿತ್ತು. ಅಧ್ಯಕ್ಷರೇ ಯುದ್ಧಭೂಮಿಗೆ ಇಳಿದಿದ್ದಾರೆ ಎಂಬಂಥ ಸಂದೇಶಗಳು ಹರಡಿ ಅವು ಹಲವಾರು ಜನರನ್ನು ಯುದ್ಧಕ್ಕೆ ತಾವು ಇಳಿಯುವಂತೆ ಪ್ರೇರೇಪಿಸಿತ್ತು.
ಆದರೆ, ಆ ಫೋಟೋ ತುಂಬಾ ಹಳೆಯದ್ದು ಎಂದು ಹೇಳಲಾಗಿದೆ. ಕಳೆದ ವರ್ಷ ಏ.9ರಂದು ಅವರು ಉಕ್ರೇನ್ನ ಪ್ರಾಂತ್ಯದಲ್ಲಿರುವ ಉಕ್ರೇನ್ನ ಸೇನಾ ಶಿಬಿರಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ತಗೆದ ಪೋಟೋವದು ಎಂದು ಹೇಳಲಾಗಿದೆ.
ಉಪಾಧ್ಯಕ್ಷರ ಪತ್ನಿಯ ಫೋಟೋ ಕೂಡ ವೈರಲ್
ಯುದ್ಧ ನಡೆಯುತ್ತಿದ್ದಾಗಲೇ ಮಹಿಳೆಯೊಬ್ಬರು ಯುದ್ಧಕ್ಕೆ ಸಿದ್ಧವಾಗುತ್ತಿರುವ ಫೋಟೋವೊಂದು ವೈರಲ್ ಆಗಿ, ಆ ಮೂಲಕ ಉಕ್ರೇನ್ನ ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬುವಂಥ ಕೆಲಸ ಮಾಡಲಾಗಿತ್ತು. ಫೋಟೋದಲ್ಲಿ ಯುದ್ಧಕ್ಕೆ ಸನ್ನದ್ಧವಾಗುತ್ತಿದ್ದ ಮಹಿಳೆಯನ್ನು ಉಕ್ರೇನ್ನ ಉಪಾಧ್ಯರ ಪತ್ನಿ ಎಂದು ಬಿಂಬಿಸಲಾಗಿತ್ತು. ಆದರೆ, ಅಸಲಿಗೆ ಉಕ್ರೇನ್ನಲ್ಲಿ ಉಪಾಧ್ಯಕ್ಷರೇ ಇಲ್ಲ! ಹಾಗಾಗಿ, ಆ ಸುದ್ದಿಯೂ ಈಗ ಫೇಕ್ ಎಂದು ಸಾಬೀತಾಗಿದೆ.
ಸುಂದರಿಯನ್ನೂ ಬಿಡದ ಫೇಕ್ನ್ಯೂಸ್
ಮಾಜಿ ಮಿಸ್ ಉಕ್ರೇನ್ ಆದ ಅನಾಸ್ತೇಸಿಯಾ ಲೆನ್ನಾ ಅವರು ಬಂದೂಕನ್ನು ಹಿಡಿದಿರುವ ಫೋಟೋವೊಂದು ವೈರಲ್ ಆಗಿತ್ತು. ಸುಂದರಿಯು ಉಕ್ರೇನ್ ಸೇನೆಯನ್ನು ಸೇರಿದ್ದಾರೆಂದು ಹೇಳಲಾಗಿತ್ತು. ಇದನ್ನು ಖುದ್ದಾಗಿ ಅನಾಸ್ತೇನಿಯಾ ಅವರೇ ನಿರಾಕರಿಸಿದ್ದಾರೆ.
“ನಾನೊಬ್ಬ ಸಾಮಾನ್ಯ ಮಹಿಳೆ. ದೇಶದ ಇತರರಂತೆ ನಾನು ಜೀವಿಸುತ್ತಿದ್ದೇನೆ. ನಾನು ಸೇನೆಗೆ ಸೇರಿಲ್ಲ. ಯುದ್ಧದಲ್ಲಿ ಭಾಗಿಯಾಗಿಲ್ಲ. ಫೋಟೋದಲ್ಲಿ ನೀವು ನೋಡಿರುವುದು ನಾನು ಏರ್ಸಾಫ್ಟ್ ತಂಡದಲ್ಲಿದ್ದಾಗ ಹಿಡಿದಿದ್ದ ಬಂದೂಕು” ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್
India ಲೋಕಸಭೆ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪ: ರಷ್ಯಾ ಆರೋಪ
Insects: ಮಹಿಳೆಯ ಮೂಗಿನಲ್ಲಿ ನೂರಾರು ಹುಳಗಳು ಪತ್ತೆ!
Saudi Arabia; ಭೂಮಿ ನೀಡಲು ಒಪ್ಪದಿದ್ದರೆ ಹತ್ಯೆ: ಬಿಬಿಸಿ ವರದಿ
Student Missing: ಅಮೆರಿಕದಲ್ಲಿ ಮತ್ತೋರ್ವ ವಿದ್ಯಾರ್ಥಿ ನಾಪತ್ತೆ… ಕಂಗಾಲಾದ ಕುಟುಂಬ
MUST WATCH
ಹೊಸ ಸೇರ್ಪಡೆ
Sirsi: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಾದ ಜೀವಜಲ ಕಾರ್ಯಪಡೆ
Road Mishap: ಆಗುಂಬೆ ಬಳಿ ಭೀಕರ ಅಪಘಾತ.. ಸ್ಥಳದಲ್ಲೇ ಓರ್ವ ದುರ್ಮರಣ, ಚಾಲಕನ ಸ್ಥಿತಿ ಗಂಭೀರ
Udupi ಶ್ರೀ ಭಗವಾನ್ ನಿತ್ಯಾನಂದ ಮಂದಿರ ಮಠ: ಬಾಲಭೋಜನಾಲಯ, ಧ್ಯಾನ ಮಂದಿರ ಲೋಕಾರ್ಪಣೆ
Dhruva Sarja ಮಾರ್ಟಿನ್ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್ ಮೆಹ್ತಾ
Nomination: ಕೊನೆಯ ಕ್ಷಣದಲ್ಲಿ ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ…