ಕಾಲ-ವ್ಯಾಪ್ತಿ ಮೀರಿದ್ದೇ ಹಿಂದೂ ಧರ್ಮ: ನಿರ್ಭಯಾನಂದ ಶ್ರೀ


Team Udayavani, Jun 3, 2018, 10:59 AM IST

gul-1.jpg

ವಿಜಯಪುರ: ಹಿಂದೂ ಧರ್ಮದ ಮೂಲ ಕಾಲಗಣನೆಯ ವ್ಯಾಪ್ತತೆ ಮೀರಿದ್ದಾಗಿದೆ. ಹಿಂದೂ ಧರ್ಮದ ಪ್ರಾರಂಭಿಕ ತತ್ವಗಳಲ್ಲೇ ಅದೊಂದು ಪ್ರಬುದ್ಧ, ಪರಿಪೂರ್ಣ ಹಾಗೂ ಆಧುನಿಕ ವಿಜ್ಞಾನದ ಪ್ರತಿ ಧ್ವನಿಯಂತೆ ಕಂಡು ಬಂದಿದೆ.
ಇದೇ ಕಾರಣಕ್ಕೆ ವಿಶ್ವದ ಚಿಂತನ ಚೌಕಟ್ಟಿನಲ್ಲಿ ಪರಮ ಅದ್ಭುತವಾಗಿ ಕಂಗೊಳಿಸುತ್ತಿದೆ ಎಂದು ಗದಗ ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತೀಜಿ ಬಣ್ಣಿಸಿದರು.

ಅವರು ರೋಮ್‌ ದೇಶದ ವ್ಯಾಟಿಕನ್‌ ನಗರದಲ್ಲಿ ವ್ಯಾಟಿಕನ್‌ ಚರ್ಚ್‌ನ ಕಾಂಡಿಫೀಕಲ್‌ ಕೌನ್ಸಿಲ್‌ ಫಾರ್‌ ಇಂಟರ್‌ ರಿಲಿಜಿಯಸ್‌ ಡಯಲಾಗ್‌ ಎಂಬ ಅಂಗ ಸಂಸ್ಥೆಯಿಂದ ಆಯೋಜಿಸಿದ್ದ ಅಂತರ್ಧರ್ಮೀಯ ಸಂವಾದ ಮತ್ತು ಚರ್ಚೆಯಲ್ಲಿ ಹಿಂದೂ ಧರ್ಮದ ಬಗ್ಗೆ ಶ್ರೀಗಳು ಮಾತನಾಡಿದರು.

“ಶೃತಿ ಮತ್ತು ಸ್ಮೃತಿಗಳು ಸನಾತನ ಹಾಗೂ ಯುಗ ಧರ್ಮಗಳೆಂದು ಪರಿಗಣಿತವಾಗಿವೆ. ವೇದಗಳ ಕರ್ಮಕಾಂಡದ ತಾರ್ಕಿಕ ಪರಿಪೂರ್ಣತೆಯೇ ಜ್ಞಾನಕಾಂಡ. ಪ್ರಸ್ಥಾನತ್ರಯಗಳಾದ ವೇದೋಪನಿಷತ್‌, ಬ್ರಹ್ಮಸೂತ್ರ ಮತ್ತು ಭಗವದ್ಗೀತೆ ಹಿಂದೂ ಧರ್ಮದ ಆಧಾರಸ್ತಂಭಗಳಾದರೆ ನಾಲ್ಕು
ಯೋಗಗಳೇ ಅದರ ಸಾರ ಎಂದು ವಿವರಿಸಿದರು. 

ಏಕಂ ಸತ್‌ ವಿಪ್ರಾಃ ಬಹುಧಾ ವದಂತಿ ಎನ್ನುವುದು ಜಗತ್ತಿನ ಮಹಾನಿಯಮ. ಅಂದರೆ ಒಂದೇ ಸತ್ಯವನ್ನು ಹಲವು ಹೆಸರುಗಳಿಂದ ಕರೆಯುತ್ತಾರೆ. ಆದರೆ ಸರ್ವ ಖಲ್ವಿದಂ ಬ್ರಹ್ಮ ಅಂದರೆ ಎಲ್ಲವೂ ಬ್ರಹ್ಮವೇ ಆಗಿದೆ ಎನ್ನುವುದು ಅದರ ತಾರ್ಕಿಕ ಮುಂದುವರಿಕೆಯಾಗಿದೆ. ಇದೇ ಆಧುನಿಕ ವಿಜ್ಞಾನದ ಹಲವು ನಿಯಮಗಳಿಗೆ ಆಧಾರವಾಗಿದೆ ಎಂದು ವಿಶ್ಲೇಷಿಸಿದರು. ಮೃತ್ಯುವಿನ ವಿಶ್ಲೇಷಣೆಯಲ್ಲಿ ತೊಡಗಿದ ಭಾರತೀಯರಿಗೆ ದಕ್ಕಿದ ಮಹಾನ್‌ ಸಂಶೋಧನೆಯೇ ಮಾನವ ಒಂದು ಸಂಕೀರ್ಣ ವ್ಯವಸ್ಥೆ ಎಂಬುದು.

ದಿವ್ಯತೆ ಅದರ ಸಾರ. ಆ ನೆಲೆಯಲ್ಲಿ ಮನುಷ್ಯ ಅನಂತ. ಆದ್ದರಿಂದ ತನ್ನ ನಿಜದ ನೆಲೆಯಲ್ಲಿ ಅವನು ಏಕ. ಅನೇಕ ಎಂಬುದು ಕೇವಲ ಬಾಹ್ಯ ಆವಿರ್ಭಾವ. ಅದೊಂದು ವ್ಯಾವಹಾರಿಕ ಅವಶ್ಯಕತೆ. ವ್ಯವಹಾರದ ಗುರಿಯೇ ಏಕತ್ವವನ್ನು ಅರಿಯುವುದು. ಒಂದು ಸಂಕೀರ್ಣವಾಗಿ ಮನುಷ್ಯನಲ್ಲಿ ವ್ಯತ್ಯಾಸಗಳಿರುವುದು ಅವನ ಸಂಸ್ಕಾರಗಳ ವ್ಯತ್ಯಾಸದಿಂದ. ಆದ್ದರಿಂದ ಅವನ ದೇವರ ಕಲ್ಪನೆಯಲ್ಲೂ ವ್ಯತ್ಯಾಸವಿದೆ. 

ವ್ಯತ್ಯಾಸಗಳಿರುವುದು ವ್ಯಕ್ತತೆಯಲ್ಲೇ ಹೊರತು ವಸ್ತುವಿನಲ್ಲಲ್ಲ ಎಂದರು. ಆದ್ದರಿಂದಲೇ ಹಿಂದುವಿಗೆ ದೇವರಲ್ಲಿ, ಧಮ-ಮತಗಳಲ್ಲಿ ಬರುವ ಭಿನ್ನತೆ ಆದರಣೀಯ, ಘರ್ಷಣೆಯಲ್ಲ. ಏಕತ್ವದ ಕಡೆಗೆ ಸಾಗಿದಂತೆ ಅವನ ದೃಷ್ಟಿ ವಿಶಾಲವಾಗುತ್ತಾ ಅದೇ ನೈತಿಕತೆ, ನಿಸ್ವಾರ್ಥತೆ, ಸೇವಾಭಾವಕ್ಕೆ ಎಡೆ ಮಾಡಿಕೊಟ್ಟಿದೆ. ಆದ್ದರಿಂದಲೇ ಹಿಂದೂ ದೇಶದಲ್ಲಿ ಮತೀಯ ಘರ್ಷಣೆ, ಜನಾಂಗೀಯ ಘರ್ಷಣೆ ನಡೆದೇ ಇಲ್ಲೆ ಎಂದು ವಿಶ್ಲೇಷಿಸಿದರು. 

ಸಮ್ಮೇಳನದಲ್ಲಿ ಬೌದ್ಧ ಧರ್ಮದ ಮೇರಿಯಾ ಏಂಜಲಾ ಫಾಳಾ, ಕ್ರಿಶ್ಚಿಯನ್‌ ಧರ್ಮದ ಮೇರಿಯಾ ಡೆ ಜಿಯೋರ್ಗಿ, ಜೈನ ಧರ್ಮದ ಲಂಡನ್ನಿನ ಯಶವಂತಿ ಶಾ ಮತ್ತು ಶೃತಿ ಜೈನ್‌ ಅವರು ತಮ್ಮ ತಮ್ಮ ಧರ್ಮಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. 

ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತೀಜಿ, ಸ್ವಾಮಿ ಪರಮಾನಂದಜೀ, ಮ್ಯಾರಿಸ್‌ನ ಡಾ| ಸ್ಟಿಫಾನೋ ದಿಯಾನೋ, ಇಟಲಿಯ ಸ್ವಾಮಿಯೋಗಾನಂದಗಿರಿ ಶ್ರೀಗಳು ಸೇರಿದಂತೆ ಇತರರು ಇದ್ದರು. ವ್ಯಾಟಿಕನ್‌ ಚರ್ಚ್‌ನ ನಿಯೋಜಿತ ಪ್ರತಿನಿಧಿ ರೆವರೆಂಡ್‌ ಬ್ರ್ಯಾನ್‌ ಲೋಬೊ ನಿರೂಪಿಸಿದರು. 

ಟಾಪ್ ನ್ಯೂಸ್

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.