ತೊಗರಿ ಖರೀದಿಗೆ 120 ಕೇಂದ್ರ


Team Udayavani, Dec 23, 2018, 12:31 PM IST

gul-2.jpg

ಕಲಬುರಗಿ: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಜಿಲ್ಲೆಯಾದ್ಯಂತ 120 ಕೇಂದ್ರಗಳನ್ನು ನಿಗದಿಗೊಳಿಸಲಾಗಿದೆ. ಸೋಮವಾರದಿಂದ ರೈತರ ನೋಂದಣಿ ಪ್ರಕ್ರಿಯೆಯಾಗಲಿದೆ. ಕ್ವಿಂಟಾಲ್‌ಗೆ 6100 ರೂ. ದರದಲ್ಲಿ ತೊಗರಿ ಖರೀದಿಸಲು ಒಟ್ಟು
120 ತೊಗರಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕರ್ಫೋಸ್‌ ಸಮಿತಿ
ಅಧ್ಯಕ್ಷ ಆರ್‌. ವೆಂಕಟೇಶಕುಮಾರ ತಿಳಿಸಿದ್ದಾರೆ.

ತೊಗರಿ ಬೆಳೆದ ರೈತರು ಹತ್ತಿರವಿರುವ ಯಾವುದೇ ತೊಗರಿ ಖರೀದಿ ಕೇಂದ್ರಕ್ಕೆ ಅವಶ್ಯಕ ದಾಖಲಾತಿಗಳೊಂದಿಗೆ ಆನಲೈನ್‌ನಲ್ಲಿ ಡಿ. 24 ರಿಂದ 2019ರ ಜ. 7ರ ವರೆಗೆ ನೋಂದಾಯಿಸಬಹುದು. ರೈತರಿಂದ ಪ್ರತಿ ಎಕರೆಗೆ 5 ಕ್ವಿಂಟಾಲ್‌ದಂತೆ ಪ್ರತಿ ರೈತರಿಂದ ಗರಿಷ್ಟ 10 ಕ್ವಿಂಟಾಲ್‌ ತೊಗರಿ ಖರೀದಿಸಲಾಗುವುದು. ಖರೀದಿ ಕೇಂದ್ರಗಳಲ್ಲಿ ತೊಗರಿ ಉತ್ಪನ್ನವನ್ನು ಖರೀದಿಸುವ ಪೂರ್ವದಲ್ಲಿ
ರೈತರು ನೀಡಿರುವ ವಿವರವನ್ನು ನಾಫೇಡ್‌ ಸಂಸ್ಥೆಯ ತಂತ್ರಾಂಶದೊಂದಿಗೆ ಭೂಮಿ ಮತ್ತು ಬೆಳೆ ತಂತ್ರಾಂಶ, ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ತಾಳೆ ಮಾಡಿ ಪರಿಶೀಲಿಸಿ ನಂತರ ನೋಂದಾಯಿಸಿಕೊಳ್ಳಲಾಗುವುದು.

ಕಂದಾಯ ಇಲಾಖೆ ಸಿಬ್ಬಂದಿಗಳು ಬೆಳೆ ಬಿತ್ತನೆ ಪ್ರಮಾಣ ಪತ್ರ ನೀಡುತ್ತಿದ್ದು, ಸುಳ್ಳು ದಾಖಲಾತಿ ಹಾಗೂ ಅವ್ಯವಹಾರ ಕಂಡು ಬಂದರೆ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳವು ಒಟ್ಟು 98 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಖರೀದಿ ಮಾಡಲಾಗುತ್ತಿದೆ. ಖರೀದಿ ಕೇಂದ್ರಗಳ ವಿವರ ಹೀಗಿದೆ.

ಕಲಬುರಗಿ: ಭೀಮಳ್ಳಿ, ಬೇಲೂರ (ಕೆ), ಅವರಾದ (ಬಿ), ಹಾಗರಗಾ, ಫೀರೋಜಾಬಾದ, ಹರಸೂರ, ಕುಮಸಿ, ಡೊಂಗೂರಗಾಂವ್‌, ಸಾವಳಗಿ (ಬಿ), ನಂದೂರ (ಬಿ), ಕವಲಗಾ (ಬಿ), ಶರಣಸಿರಸಗಿ (ಹಡಗಿಲ್‌ ಹಾರುತಿ), ಹೊನ್ನಕಿರಣಗಿ, ಜಂಬಗಾ,
ಪಟ್ಟಣ. 

 ಸೇಡಂ: ಕಾನಾಗಡ್ಡಾ, ಕೂಕುಂದಾ, ಕೋಳಕುಂದಾ, ಮಳಖೇಡ್‌, ಸಿಂಧನಮಡು, ಮೋತಕಪಲ್ಲಿ, ಕುರಕುಂಟಾ, ನಾಡೆಪಲ್ಲಿ, ಮೇದಕ್‌, ಹಾಬಾಳ (ಟಿ).

 ಅಫಜಲಪುರ: ಮಣ್ಣೂರ, ಮಾಶಾಳ್‌, ಅತನೂರ್‌, ದೇಸಾಯಿ ಕಲ್ಲೂರ್‌, ದೇವಲಗಾಣಗಾಪುರ, ಭೈರಾಮಡಗಿ, ಬಂದರವಾಡ್‌, ಗೊಬ್ಬೂರ್‌ (ಬಿ), ಮಲ್ಲಾಬಾದ, ಬೋಸಗಾ, ಗೌರ (ಬಿ).

 ಆಳಂದ: ಕಡಗಂಚಿ, ನಿಂಬಾಳ, ಮುನ್ನಳಿ, ಕಮಲಾನಗರ, ಕಜೂರಿ, ಯಳಸಂಗಿ, ಅಂಬಲಗಾ, ರುದ್ರವಾಡಿ, ಸನಗುಂದ
(ಬೆಳಮಗಿ), ಜಂಬಗಾ (ಜೆ), ಮಾದನಹಿಪ್ಪರಗಾ, ಪಡಸಾವಳಗಿ, ಆಳಂದ ಪ್ಯಾಕ್ಸ್‌ ಸಂಗೋಳಗಿ (ಬಿ), ಹಿರೊಳ್ಳಿ, ಕೆರೊಳ್ಳಿ, ವಿ.ಕೆ. ಸಲಗಾರ.

 ಚಿಂಚೋಳಿ: ನಿಡಗುಂದಾ, ಸುಲೇಪೇಟ್‌, ಗಡಿಕೇಶ್ವರ, ಕನಕಪುರ, ಶಾದಿಪುರ, ಸಾಲೆಬೀರನಳ್ಳಿ, ಚಂದನಕೇರಾ, ಪೋಲಕಪಳ್ಳಿ, ಕೋಡ್ಲಿ, ಚೇಂಗಟಾ, ಚಿಂತಪಲ್ಲಿ, ಗರಗಪಳ್ಳಿ, ಮಿರಿಯಾಣ, ರಟಕಲ್‌, ಕೊಳ್ಳುರ. 

 ಚಿತ್ತಾಪುರ: ಕೊಳ್ಳುರ, ಭೀಮನಳ್ಳಿ, ರಾವೂರ್‌, ಗುಂಡಗುರ್ತಿ, ದಂಡೋತಿ, ಮರತೂರ್‌, ತೇಂಗಳಿ, ಬಂಕೂರ, ಅಳ್ಳೋಳ್ಳಿ, ಪೇಟಶಿರೂರ್‌, ಕಮರವಾಡಿ, ಕುಂದನೂರ್‌, ಬಾಗೋಡಿ, ದಿಗ್ಗಾಂವ, ಹಲಚೇರಾ, ಕೊಡದೂರ.

ಜೇವರ್ಗಿ ತಾಲೂಕು-ನೆಲೋಗಿ, ಮಳ್ಳಿ, ಬಳಬಟ್ಟಿ, ಕಲ್ಲೂರ್‌ (ಕೆ), ಮುತ್ತಕೋಡ, ಮಂದೇವಾಲ್‌, ಗುಡೂರ್‌ ಎಸ್‌.ಎ, ಸುಂಬಡ್‌,
ಕೋಳಕೋರ್‌ (ಜೇವರ್ಗಿ), ಅಂಕಲಗಾ, ಹರನೂರ್‌, ಇಜೇರಿ (ಯಳವಾರ), ಆಲೂರು, ಗಂವ್ಹಾರ, ಹರವಾಳ. ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ನಿಗಮದ

22 ಖರೀದಿ ಕೇಂದ್ರಗಳು: ಕಲಬುರಗಿ ತಾಲೂಕು- ಮಹಾಗಾಂವ್‌, ಓಕಳಿ, ಹಾಗರಗುಂಡಗಿ. ಜೇವರ್ಗಿ ತಾಲೂಕು: ಆಂದೋಲಾ, ಅರಳಗುಂಡಗಿ, ಹಿಪ್ಪರಗಾ ಎಸ್‌. ಎನ್‌, ಜೇರಟಗಿ. ಅಫಜಲಪುರ ತಾಲೂಕು: ಚಿಣಮಗೇರಾ, ಕರಜಗಿ. ಆಳಂದ ತಾಲೂಕು-ನಿಂಬರಗಾ, ಸರಸಂಬಾ, ತಡಕಲ್‌. ಸೇಡಂ ತಾಲೂಕು- ಕೊಡ್ಲಾ, ಮುಧೋಳ. ಚಿಂಚೋಳಿ ತಾಲೂಕು: ಐನಾಪುರ, ಐನೋಳ್ಳಿ, ಚಿಮ್ಮನ್‌ ಚೋಡ್‌, ಹಸೂರಗುಂಡಗಿ.

 ಚಿತ್ತಾಪುರ ತಾಲೂಕು: ಅರಣಕಲ್‌, ಹಳಕಟ್ಟಾ, ಕಾಳಗಿ, ನಾಲವಾರ್‌. 

ಟಾಪ್ ನ್ಯೂಸ್

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.