ನೀರಿಲ್ಲದೆ ಬತ್ತಿಹೋದ ಕಂದಾವರದ ಹೇರಿಕೆರೆ
Team Udayavani, Apr 28, 2018, 6:20 AM IST
ಬಸ್ರೂರು: ಉಳ್ಳೂರು, ಕಾಡಿನಕೊಂಡ, ಮೂಡ್ಲಕಟ್ಟೆ, ಐದು ಮುಡಿ, ಸಾಂತಾವರ, ಸಟ್ವಾಡಿ ಮುಂತಾದ ಪ್ರದೇಶಗಳ ಕೃಷಿ ಚಟುವಟಿಕೆಗಳಿಗೆ ನೀರೊದಗಿಸುವ ಕಂದಾವರದ ಹೇರಿಕೆರೆ ಈಗ ನೀರಿಲ್ಲದೆ ಬತ್ತಿ ಹೋಗಿದೆ.
ಒತ್ತುವರಿ ಸಮಸ್ಯೆ
ಬಸ್ರೂರಿನ ಬಿ.ಎಚ್.ರಸ್ತೆಯಿಂದ ಮುಂದೆ ಹೋದರೆ ಕಂದಾವರದ ಹೇರಿಕೆರೆ ಸಿಗುತ್ತದೆ.15 ವರ್ಷಗಳ ಹಿಂದೆ ಈ ಕೆರೆ 38ರಿಂದ 40 ಎಕರೆ ವಿಸ್ತೀರ್ಣ ಹೊಂದಿದ್ದು, ಸುತ್ತಮುತ್ತಲಿನ ಅನೇಕ ಭಾಗಗಳಿಗೆ ನೀರುಣಿಸುತ್ತಿತ್ತು. ಈಗ ಅದರ ಗಾತ್ರ 8ರಿಂದ 10 ಎಕರೆಗೆ ಕುಗ್ಗಿದೆ. ಕೆರೆ ಜಾಗಗಳಲ್ಲಿ ಮನೆ/ಕಟ್ಟಡ ತಲೆ ಎತ್ತಿವೆ. ಉಳಿದ 8 ಎಕರೆ ಕೆರೆಯಲ್ಲಿ ಹನಿ ನೀರಿಲ್ಲದೆ ಬತ್ತಿ ಹೋಗಿದೆ.
2 ವರ್ಷಗಳಿಂದ ಹೂಳೆತ್ತಿಲ್ಲ
ಎರಡು ವರ್ಷಗಳ ಹಿಂದೆ ಒಂದು ಬಾರಿ ಹೂಳೆತ್ತಲಾಗಿತ್ತು. ಅದರ ಅನಂತರ ಕೆರೆಯಲ್ಲಿ ನೀರಿನ ಸೆಲೆ ಹೆಚ್ಚಳಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕೆರೆಗೆ ಒಂದು ಗೇಟ್ ಇದ್ದು, ನೀರಿದ್ದ ಸಮಯ ಗೇಟ್ ತೆರೆದರೆ ಬೇಕಾದಷ್ಟು ನೀರು ಹರಿದುಹೋಗುತ್ತಿತ್ತು. ಆದರೆ ಇದು ಗತಕಾಲ ಎಂಬಂತಾಗಿದೆ. ಕೆರೆಗಳ ಪುನಶ್ಚೇತನ ಯೋಜನೆಯಡಿ ಈ ಕೆರೆಯನ್ನೂ ಅಭಿವೃದ್ಧಿಪಡಿಸಲು ಸಂಬಂಧಪಟ್ಟವರು ಮುಂದಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ