ಚರಂಡಿ ಹೂಳು ತೆಗೆಯದೇ ಆರು ತಿಂಗಳಾಯ್ತು!


Team Udayavani, Jun 14, 2018, 6:35 AM IST

1306kdlm1ph1.jpg

ಕುಂದಾಪುರ: ಪ್ರಮುಖ ಪ್ರದೇಶಗಳನ್ನೊಳಗೊಂಡ ಕುಂದಾಪುರ ಮೊದಲ ವಾರ್ಡ್‌ನ ಬಹುತೇಕ ಕಡೆ ಕಾಂಕ್ರೀಟ್‌ ರಸ್ತೆಗಳಿವೆ, ಚರಂಡಿಗಳೂ ಇವೆ. ಆದರೆ ಹಲವು ಕಡೆ ಹೂಳೆತ್ತದೆ ಇರುವುದರಿಂದ ಮಳೆಗಾಲ ಕಳೆಯುವುದು ದುಸ್ತರ ಎನಿಸಿದೆ. 

ಹೂಳೆತ್ತಿಲ್ಲ
ಜುಮ್ಮಾ ಮಸೀದಿ ರಸ್ತೆ ಬಳಿ ಚರಂಡಿ ಇದ್ದರೂ ಕಾಂಕ್ರೀಟ್‌ ಚರಂಡಿ ಆಗಿಲ್ಲ. ಹಳೆ ಚರಂಡಿಯ ಹೂಳೆತ್ತಿಲ್ಲ. ಜನವರಿಯಲ್ಲಿ ಹೂಳೆತ್ತಲಾಗಿತ್ತು. ನಂತರ ಚುನಾವಣೆ, ಅಧಿಕಾರಿಗಳ ವರ್ಗಾವಣೆ ಎಂದು ಕೆಲಸ ನಡೆಯಲೇ ಇಲ್ಲ. ಆದ್ದರಿಂದ ಮಳೆ ಬಂದಾಗ ನೀರು ನಿಲ್ಲುತ್ತದೆ. ಈ ಭಾಗದ ಒಂದಷ್ಟು ಮಂದಿಗೆ ಒಳಚರಂಡಿ ಕಾಮಗಾರಿ ಅಸಮರ್ಪಕ ಎಂಬ ಬಗ್ಗೆ ಅಸಮಾಧಾನವಿದೆ. ಬ್ಲಾಕ್‌ ಆಗುವ ಸಮಸ್ಯೆ ಆಗಾಗ ಇದೆ ಎನ್ನುತ್ತಾರೆ. ಜತೆಗೆ ರಸ್ತೆಯಂಚಿಗೆ ಇಂಟರ್‌ಲಾಕ್‌ ಹಾಕಿದ್ದು ಅದರ ಕಾಮಗಾರಿಯೂ ಅಪೂರ್ಣವಾಗಿದೆ ಎಂಬ ದೂರಿದೆ.  ಇನ್ನು ಈ ಭಾಗಕ್ಕೆ ಈಚೆಗಷ್ಟೇ 11 ಲಕ್ಷ ರೂ. ಮಂಜೂರಾಗಿದ್ದು ಅದನ್ನು ಎಸ್‌ಸಿಎಸ್‌ಟಿ ಕಾಲನಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ. 

ಪಾರ್ಕ್‌ ಪಕ್ಕ ಬಸ್‌ ನಿಲ್ಲಿಸ್ತಾರೆ!
ಇಲ್ಲೊಂದು ಸುಂದರ ಪಾರ್ಕ್‌ ನಿರ್ಮಾಣವಾಗಿದೆ. ಆದರೆ ಅದರ ಹೊರಗೆ ಸಾಕಷ್ಟು ಜಾಗ ಇದೆ ಎಂದು ಖಾಸಗಿ ಬಸ್ಸುಗಳು ಬಂದು ನಿಲ್ಲುತ್ತವೆ. ಈ ಬಗ್ಗೆ ಜನ ಹೋರಾಟಕ್ಕೂ ಮುಂದಾಗಿದ್ದರು. ಈಗ ಇಲ್ಲಿ ಬಂದು ತಂಗುವ ಬಸ್ಸುಗಳ ಸಂಖ್ಯೆ ಕಡಿಮೆಯಾಗಿದೆ. ಮತ್ತೂಂದಷ್ಟು ಮಂದಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಬೀದಿ ದೀಪಗಳಿವೆ. 

ಪ್ರಮುಖ ಪ್ರದೇಶಗಳು
ಕೋರ್ಟ್‌ ಆವರಣ, ಕೋರ್ಟ್‌ ಕ್ಯಾಂಟೀನ್‌, ಸರಕಾರಿ ಕಚೇರಿ, ಮಿನಿ ವಿಧಾನಸೌಧ, ಶಿಕ್ಷಣಾಧಿಕಾರಿ ಕಚೇರಿ, ಅರಣ್ಯ, ತೋಟಗಾರಿಕಾ ಇಲಾಖೆ, ಐಬಿ, ಮುಖ್ಯರಸ್ತೆಯ ಬಲಬದಿ, ವೆಂಕಟ್ರಮಣ ದೇವಸ್ಥಾನ, ಬೆನಗಲ್‌ ರಸ್ತೆ ಎಡಬದಿ, ವೆಸ್ಟ್‌ ಬ್ಲಾಕ್‌ ರಸ್ತೆ ಇತ್ಯಾದಿಗಳು ಮೊದಲ ವಾರ್ಡ್‌ ವ್ಯಾಪ್ತಿಯಲ್ಲಿವೆ. ಹೆಚ್ಚಿನ ಸರಕಾರಿ ಕಚೇರಿಗಳು ಇದೇ ವ್ಯಾಪ್ತಿಯಲ್ಲಿವೆ. ಇಲ್ಲಿ ಸುಮಾರು 220 ಮನೆಗಳಿದ್ದು, 800ರಷ್ಟು ಮತದಾರರಿದ್ದಾರೆ. 

ಇಂಟರ್‌ಲಾಕ್‌ ಸರಿಯಾಗಿಲ್ಲ 
ಒಳಚರಂಡಿ ಬ್ಲಾಕ್‌ ಆಗುವ ಸಮಸ್ಯೆ ಇದೆ. ಅದಕ್ಕಾಗಿ ತೆಗೆದ ಇಂಟರ್‌ಲಾಕ್‌ ಮರಳಿ ಅಳವಡಿಸಿದ್ದು ಸರಿಯಾಗಿಲ್ಲ.  
– ಮಹಮ್ಮದ್‌ ಫಾರೂಕ್‌, 
ಜೆ.ಎಂ. ರೋಡ್‌ ನಿವಾಸಿ

ಸುಳ್ಳು ಭರವಸೆ
24 ತಾಸು ಕುಡಿಯುವ ನೀರು ಕೊಡುತ್ತೇವೆ ಎಂದಿದ್ದರು. ಕೊಟ್ಟಿಲ್ಲ. ಚರಂಡಿ ಹೂಳೆತ್ತಿಲ್ಲ. ಈ ಕಡೆಗೆ ಹೊಸ ಚರಂಡಿ ನಿರ್ಮಾಣಕ್ಕೆ ಅನುದಾನವೂ ಬಂದಿಲ್ಲ.
– ಮಹಮ್ಮದ್‌ ಗೌಸ್‌, ಸ್ಥಳೀಯರು  

ಹೊಂಡ ಮುಚ್ಚಿದರೂ ಸಾಕು
ಕಸ ತಂದು ರಾಶಿ ಹಾಕುವ ಸಮಸ್ಯೆ ಇತ್ತು. ಈಗ ಅದೊಂದು ತೆರವಾಗಿ ಸಮಸ್ಯೆ ನಿವಾರಣೆಯಾಗಿದೆ. ಮತ್ತೆ ಕೆಲವೆಡೆ ರಸ್ತೆ ಹೊಂಡ ಮುಚ್ಚಿದರೂ ಸಾಕು. 
ಮಾಲತಿ ಡಿ.ಕೆ. , ಮುಖ್ಯೋಪಾಧ್ಯಾಯಿನಿ.
ಅಂಜುಮಾನ್‌ ಮುಸ್ಲಿಂ ಘೋಷ ಶಾಲೆ

ಅನುದಾನ ಕಡಿಮೆ
ನಮಗೆ ಬರುವ ಅನುದಾನದಲ್ಲಿ ಸಾಕಷ್ಟು ಕಾಮಗಾರಿಗಳನ್ನು ಮಾಡಲಾಗುತ್ತದೆ. ಬೇಡಿಕೆ ಹೆಚ್ಚಿದೆ ಅನುದಾನ ಕಡಿಮೆ ಇದೆ. ಆದರೂ ಬಹುತೇಕ ಬೇಡಿಕೆಗಳಿಗೆ ಸ್ಪಂದಿಸಿ ಸಮಸ್ಯೆ ನಿವಾರಿಸಲಾಗಿದೆ. 
– ಪುಷ್ಪಾ ಶೇಟ್‌
ಸದಸ್ಯರು, ಪುರಸಭೆ 

ಟಾಪ್ ನ್ಯೂಸ್

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.