ಕಾನನದಲ್ಲೊಂದು ಜಲಧಾರೆ: ಭೋರ್ಗರೆಯುತಿದೆ ಕೂಸಳ್ಳಿ ಜಲಪಾತ
Team Udayavani, Jun 25, 2018, 6:00 AM IST
ಬೈಂದೂರು: ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಮೈದುಂಬಿಕೊಳ್ಳುವ ಕೂಸಳ್ಳಿ ಜಲಪಾತ ಇದೀಗ ಚಾರಣ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.
ಉಡುಪಿ ಜಿಲ್ಲೆಯ ಪ್ರಸಿದ್ಧ ಚಾರಣ ಸ್ಥಳಗಳಲ್ಲಿ ಕುಂದಾಪುರದ ಶಿರೂರು ಸಮೀಪದ ಕೂಸಳ್ಳಿ ಜಲಪಾತವೂ ಒಂದಾಗಿದ್ದು, ಆಕರ್ಷಕವಾಗಿದೆ. ದಟ್ಟ ಕಾನನದ ನಡುವೆ ಧುಮ್ಮಿಕ್ಕುವ ಈ ಜಲಪಾತ ಎದುರು ಪ್ರವೇಶಿಸುತ್ತಿದ್ದಂತೆಯೇ ನೀರಿನ ಹನಿಗಳು ಮುತ್ತಿಕ್ಕುತ್ತವೆ.
ಎಲ್ಲಿದೆ ಕೂಸಳ್ಳಿ ಜಲಪಾತ?
ಉಡುಪಿಯಿಂದ 80 ಕಿ.ಮೀ. ದೂರ ದಲ್ಲಿ ಶಿರೂರು ಗ್ರಾಮ ಸಿಗುತ್ತದೆ. ಇಲ್ಲಿಂದ ತೂದಳ್ಳಿ ರಸ್ತೆಯಲ್ಲಿ 8 ಕಿ.ಮೀ ಸಾಗಬೇಕು. ಬಳಿಕ 4 ಕಿ.ಮೀ ಕಾಡು ದಾರಿಯಲ್ಲಿ ಸಾಗಿದಾಗ ಕೊಸಳ್ಳಿ ಜಲಪಾತ ಕಾಣಸಿಗುತ್ತದೆ. ನೀರವ ಕಾಡಿನ ನಡುವೆ ಜಲಪಾತದ ಭೋರ್ಗರೆತ, ಪ್ರಾಣಿ ಪಕ್ಷಿಗಳ ಕೂಗು ಚೇತೋಹಾರಿಯಾಗಿದೆ. ಇದು ಜಿಲ್ಲೆಯ ಪ್ರಸಿದ್ಧ ಜಲಪಾತವಾಗಿದ್ದು, ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ಗರು ಆಗಮಿಸುತ್ತಿದ್ದಾರೆ.
ನೂರಕ್ಕೂ ಹೆಚ್ಚು ಅಡಿಯಿಂದ ಧುಮುಕುವ ಕೂಸಳ್ಳಿ ಜಲಪಾತದ ನೀರು ಕೃಷಿ ಭೂಮಿಗೆ ಆಸರೆ ನೀಡುವುದರೊಂದಿಗೆ ಬಳಿಕ ಸಂಕದಗುಂಡಿ ಮೂಲಕ ಅರಬಿ ಸಮುದ್ರ ಸೇರುತ್ತದೆ. ಮಳೆ ಕಾರಣ ಕಳೆದೊಂದು ವಾರದಿಂದ ಇಲ್ಲಿ ನೀರಿನ ಅಬ್ಬರ ಹೆಚ್ಚಾಗಿದ್ದು, ಜಲಪಾತದ ಸೌಂದರ್ಯ ವೃದ್ಧಿಸಿದೆ.
ಮಳೆಗಾಲದಲ್ಲಿ ಜಲಪಾತದ ಸಮೀಪ ಹೋಗಲು ಸಾಧ್ಯವಿಲ್ಲ. ಜನವರಿ- ಫೆಬ್ರವರಿ ವರೆಗೆ ನೀರ ಹರಿವು ಇದ್ದು ಮಳೆಗಾಲದಲ್ಲಿ ಹೆಚ್ಚು ಆಕರ್ಷಣೀಯ. ಜಲಪಾತಕ್ಕೆ ಸಾಗುವ ದಾರಿಯಲ್ಲಿ ಕಲ್ಲುಗಳು ವಿಪರೀತ ಜಾರುವುದರಿಂದ ಅತೀವ ಎಚ್ಚರಿಕೆ ವಹಿಸ ಬೇಕು. ಇಲ್ಲಿ ಸಾವುಗಳೂ ಸಂಭವಿಸಿದ್ದು, ಈ ಹಿನ್ನೆಲೆಯಲ್ಲಿ ಇಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ