ಪ್ಲೀಸ್ ನಂಬಿ … ಇದು ರಾಷ್ಟ್ರೀಯ ಹೆದ್ದಾರಿ!
Team Udayavani, Jun 26, 2018, 6:20 AM IST
ಕುಂದಾಪುರ: ರವಿವಾರ ಹಾಗೂ ಸೋಮವಾರ ಸುರಿದ ಮಳೆಗೆ ಕುಂದಾಪುರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಬದಿ ತೋಡಿನಂತಾಗಿದೆ. ಬೇರೆ ಪ್ರದೇಶದಿಂದ ಬಂದವರು ಇದು ಹೆದ್ದಾರಿಯೋ ಗ್ರಾಮಾಂತರ ರಸ್ತೆಯೋ ಎಂದು ಶಂಕಿಸುವಂತಾಗಿದೆ.
ಬಸೂÅರು ಮೂರುಕೈಯಿಂದ ಸಂಗಮ್ವರೆಗೆ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದೆ. ಮಳೆ ಬಂದಾಗ ರಸ್ತೆಯ ಹೊಂಡಗಳಲ್ಲಿ ನೀರು ತುಂಬಿ ಕೇವಲ 3 ಕಿ.ಮೀ. ಪ್ರಯಾಣಕ್ಕೆ 9 ನಿಮಿಷ ತಗುಲುತ್ತದೆ. ಹೊಂಡ ಯಾವುದು, ದಾರಿ ಯಾವುದು, ರಸ್ತೆ ಎಲ್ಲಿದೆ, ರಸ್ತೆಯ ಅಂಚು ಎಲ್ಲಿದೆ ಎಂದು ತಿಳಿಯುವುದಿಲ್ಲ ಎನ್ನುತ್ತಾರೆ ವಾಹನ ಚಾಲಕರು. ಪರದಾಡಿಕೊಂಡು ವಾಹನ ಸವಾರಿ ನಡೆಸಬೇಕು. ಈ ಮಧ್ಯೆಯೇ ಕಷ್ಟಪಡುವ ದ್ವಿಚಕ್ರ ವಾಹನ ಸವಾರರು. ತ್ರಿ ಚಕ್ರ ವಾಹನ ಸವಾರರಿಗೂ ಸಂಕಟ ತಂದಿದ್ದು ಸಣ್ಣ ಚಕ್ರದ ವಾಹನಗಳು ರಸ್ತೆ ಹೊಂಡಕ್ಕೆ ಬಿದ್ದಾಗ ಪ್ರಯಾಣಿಕರು ಶಪಿಸುವಂತಾಗಿದೆ.
ಕೂಡು ರಸ್ತೆ
ಸರ್ವಿಸ್ ರಸ್ತೆಯಿಂದ ಮುಖ್ಯ ರಸ್ತೆಗೆ ಸೇರುವ ಎಲ್ಲ ಕಡೆಗಳಲ್ಲಿ ನೀರು ನಿಂತು ವಾಹನ ದಾಟುವುದು ಕಷ್ಟವಾಗಿದೆ. ರಸ್ತೆಯ ಅಂಚಿನುದ್ದಕ್ಕೂ ನೀರು ನಿಂತು ವಾಹನ ಹೋಗುವಾಗ ನೀರ ಚಿಮ್ಮುವಿಕೆ ಕಾರಂಜಿಯಂತೆ ಕಾಣುತ್ತದೆ. ನಡೆದಾಡಲೂ ಕಷ್ಟಪಡುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
MUST WATCH
ಹೊಸ ಸೇರ್ಪಡೆ
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…