ಆರಕ್ಷಕ ವಸತಿ ಗೃಹಕ್ಕೆ ತಪ್ಪದ ನೀರಿನ ಗೋಳು
Team Udayavani, Mar 22, 2019, 1:00 AM IST
ಬೈಂದೂರು: ಬೇಸಗೆಯಲ್ಲಿ ನೀರಿನ ಸಮಸ್ಯೆ ಕೆಲವೆಡೆ ಜನಸಾಮಾನ್ಯರನ್ನು ತೀವ್ರವಾಗಿ ಕಾಡಿದರೆ, ಬೈಂದೂರಿನ ಪೊಲೀಸರಿಗೂ ಇದರ ಬಿಸಿ ತಟ್ಟಿದೆ.
ಆರಕ್ಷಕರಿಗೆ ಸರಕಾರ ಗಾಂಧಿ ಮೈದಾನದ ಬಳಿ 1 ಕೋಟಿ ರೂ. ವೆಚ್ಚದಲ್ಲಿ ನೂತನ ಸುಸಜ್ಜಿತ ವಸತಿ ಗೃಹ ನಿರ್ಮಿಸಿತ್ತು. ಆದರೆ ಇದನ್ನು ನಿರ್ಮಿಸಿದ ಇಲಾಖೆ ನೀರಿನ ಮೂಲದ ಬಗ್ಗೆ ಗಮನಹರಿಸದಿದ್ದರಿಂದ ಆರಕ್ಷಕ
ಕುಟುಂಬಗಳು ನಿತ್ಯ ಪರಿತಪಿಸ ಬೇಕಾಗಿದೆ. ಇಲ್ಲಿ ಎರಡು ವಸತಿ ಗೃಹಗಳಿದ್ದು, ಬಾವಿ ರಚನೆಗೂ ಮುನ್ನ ಗೃಹ ನಿರ್ಮಾಣ ಮಂಡಳಿ ವಸತಿಗೃಹ ಹಸ್ತಾಂತರಿಸಿದೆ. ಆದ್ದರಿಂದ ಇರುವ ಹಳೆಯ ಬಾವಿಯನ್ನೇ ನೀರಿಗೆ ಬಳಸಿಕೊಳ್ಳಬೇಕಾಗಿದೆ. ಈಗ ಅದರಲ್ಲೂ ನೀರಿಲ್ಲ.
24 ಕುಟುಂಬಗಳಿಗೆ ಸಮಸ್ಯೆ
ಠಾಣೆಯಲ್ಲಿ ಒಟ್ಟು 35ಕ್ಕೂ ಅಧಿಕ ಸಿಬಂದಿಗಳಿದ್ದು ಅವರಲ್ಲಿ 24 ಕುಟುಂಬಗಳು ವಸತಿಗೃಹದಲ್ಲಿ ವಾಸಿಸುತ್ತಿದೆ. ಕಳೆದೊಂದು ತಿಂಗಳಿಂದ ಇರುವ ಹಳೆಯ ಬಾವಿಯಲ್ಲಿ ನೀರಿಲ್ಲದ ಪರಿಣಾಮ ಯಾತನೆ ಪಡಬೇಕಾಗಿದೆ. ಸ್ಥಳೀಯ ಪಂಚಾಯತ್ ಅಧಿಕಾರಿಗಳು ಹೇಳುವಂತೆ ಸಾರ್ವಜನಿಕರಿಗೇ ಸಮರ್ಪಕ ನೀರು ಪೂರೈಕೆಗೆ ಹರಸಾಹಸ ಪಡಬೇಕಾಗಿದೆ. ಹೀಗಾಗಿ ಆರಕ್ಷಕ ವಸತಿ ಗೃಹದವರು ನೀರಿನ ಸೌಲಭ್ಯದ ಬಗ್ಗೆ ಅವರ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದಿದ್ದಾರೆ.
ಹಿರಿಯ ಅಧಿಕಾರಿಗಳು ವರ್ಷ ಕ್ಕೊಮ್ಮೆ ದಾನಿಗಳಿಂದ ಬಾವಿ ರಿಪೇರಿ ಕುರಿತು ನೆರವು ಪಡೆದರೂ ಈವರೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಹಗಲಿರುಳು ಹತ್ತಾರು ಸಮಸ್ಯಗಳಿಗೆ ಸ್ಪಂದಿಸಿ ವಿರಾಮದ ವೇಳೆ ವಿಶ್ರಾಂತಿ ಪಡೆಯಲು ವಸತಿಗೃಹಕ್ಕೆ ತೆರಳಿದರೆ ಮನೆಯಲ್ಲಿ ನೀರಿಗಾಗಿ ಕುಟುಂಬದ ಕಿರಿಕಿರಿ ಪೊಲೀಸರ ನೆಮ್ಮದಿಯನ್ನು ಕೆಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ