ರಕ್ತದಾನಕ್ಕೆ ಲಿಂಗ-ಮತಭೇದವಿಲ್ಲ : ಕುಡ್ವ
Team Udayavani, Apr 28, 2017, 3:06 PM IST
ಮೂಲ್ಕಿ: ಮಾನವನಿಗೆ ರಕ್ತದ ಅಗತ್ಯ ಬಿದ್ದಾಗ ಲಿಂಗ, ಮತಭೇದವಿರುವುದಿಲ್ಲ. ಆದ್ದರಿಂದ ರಕ್ತದಾನಕ್ಕಿಂತ ಮಿಗಿಲಾದ ದಾನ ಮತ್ತೂಂದಿಲ್ಲ ಎಂದು ಉದ್ಯಮಿ ಹಾಗೂ ಶ್ರೀ ವೆಂಕಟರಮಣ ದೇಗುಲದ ಮೊಕ್ತೇಸರ ಎಂ. ಅತುಲ್ ಕುಡ್ವ ಹೇಳಿದರು.
ಅವರು ಜಿ.ಎಸ್.ಬಿ. ಸಭಾ ಮೂಲ್ಕಿ, ಶ್ರೀ ದುರ್ಗಾಫ್ರೆಂಡ್ಸ್ ಕ್ಲಬ್ ಬಪ್ಪನಾಡು ಮತ್ತು ಬಡಗಿತ್ಲು ಯುವಕ ಮತ್ತು ಯುವತಿ ಮಂಡಲ ಇವುಗಳ ಸಂಯುಕ್ತ ಆಶ್ರಯದಲ್ಲಿ ವೆನ್ಸಾಕ್ ಆಸ್ಪತ್ರೆಯ ಬ್ಲಿಡ್ ಬ್ಯಾಂಕ್ ಮೂಲಕ ಜರಗಿದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ವೆನಾಕ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ| ಶರತ್ ಮಾತನಾಡಿ, ಆರೋಗ್ಯವಂತರು ಕಾಲಕಾಲಕ್ಕೆ ರಕ್ತವನ್ನು ದಾನ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ಕಾಯಿಲೆಗಳಿಂದ ದೂರವಿರಬಹುದು. ಜತೆಗೆ ಇತರರಿಗೆ ಸಹಾಯ ಮಾಡಿದ ತೃಪ್ತಿಯನ್ನೂ ಪಡೆಯಬಹುದು ಎಂದರು.
ಜಿ.ಎಸ್.ಬಿ. ಸಭಾದ ಅಧ್ಯಕ್ಷ ಸತ್ಯೇಂದ್ರ ಶೆಣೈ ಪ್ರಾಸ್ತಾವಿಸಿದರು. ಉಪಾಧ್ಯಕ್ಷ ಜಿ. ಗಿರಿಧರ ಕಾಮತ್, ಕೋಶಾಧಿಕಾರಿ ವಿಶ್ವನಾಥ ಶೆಣೈ, ಸಮಿತಿ ಪದಾಧಿಕಾರಿಗಳಾದ ಡಾ| ಎಂ. ಚಂದ್ರಕಾಂತ ಭಟ್, ಅಶೋಕ್ ಕಾಮತ್, ಯು. ಸುರೇಂದ್ರ ಶೆಣೈ, ಅಜಿತ್ ಶೆಣೈ, ಪ್ರಸಾದ್ ಕಾಮತ್, ಬಡಗಿತ್ಲು ಯುವಕ ಮಂಡಲದ ಅಧ್ಯಕ್ಷ ಕಮಲಾಕ್ಷ, ದುರ್ಗಾಫ್ರೆಂಡ್ಸ್ ಅಧ್ಯಕ್ಷ ಜಯರಾಮ ಸದಸ್ಯ ದಾಮೋದರ್ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ