ವೈದ್ಯರಿಗೆ ಹಣ ಮಾಡುವುದೇ ಮುಖ್ಯವಲ್ಲ: ರಾಜ್ಯಪಾಲ


Team Udayavani, Nov 23, 2017, 5:30 PM IST

mys.jpg

ಮೈಸೂರು: ವೈದ್ಯರು ಕೇವಲ ಹಣ ಮಾಡುವುದನ್ನೇ ಮುಖ್ಯವಾಗಿಸಿಕೊಳ್ಳದೆ, ಬಡವರ ಆರೋಗ್ಯ ಕಾಪಾಡುವ ಮೂಲಕ ದೇಶಕ್ಕಾಗಿ ಸೇವೆ ಸಲ್ಲಿಸಬೇಕಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅಭಿಪ್ರಾಯಪಟ್ಟರು.

ನಗರದ ಬನ್ನಿಮಂಟಪದ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನಲ್ಲಿ ಬುಧವಾರ ಆಯೋಜಿ ಸಿದ್ದ ಜೆಎಸ್‌ಎಸ್‌ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನಮಾಡಿ, ಘಟಿಕೋತ್ಸವ ಭಾಷಣದಲ್ಲಿ
ಮಾತನಾಡಿ, ಯಾವುದೇ ದೇಶದಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆ ಇಲ್ಲದಿದ್ದರೆ ಬಲಿಷ್ಠ ರಾಷ್ಟ್ರ ವಾಗಲು ಸಾಧ್ಯವಿಲ್ಲ. ಹೀಗಾಗಿ ದೇಶದ ಗಡಿಯಲ್ಲಿ ಕೆಲಸ ಮಾಡುವ ಸೈನಿಕರಂತೆ ವೈದ್ಯರು ಸಮಾಜದಲ್ಲಿನ ಬಡಜನರ ಸೇವೆಗಾಗಿ ನಿಲ್ಲಬೇಕಿದೆ ಎಂದರು.

ವೈದ್ಯಕೀಯ ಕ್ಷೇತ್ರಕ್ಕೆ ಹೊಸದಾಗಿ ಬರುವವರು ಹಣದಾಸೆ ಮತ್ತು ವಿದೇಶಿ ವ್ಯಾಮೋಹ ಬದಿಗೊತ್ತಿ, ಸ್ವದೇಶದಲ್ಲೇ ಸೇವೆ ಸಲ್ಲಿಸಲು ಮುಂದಾಗಬೇಕು. ಸೇವೆ ಎನ್ನುವುದು ಎಲ್ಲಾ ಕ್ಷೇತ್ರಗಳಲ್ಲಿಲ್ಲ, ಆದರೆ ಆರೋಗ್ಯ ಕ್ಷೇತ್ರ ಸದಾಕಾಲ ಜನರ ಸೇವೆಗಾಗಿ ಸೀಮಿತವಾಗಿದೆ ಎಂದು ತಿಳಿಸಿದರು.

1,274 ಮಂದಿಗೆ ಪದವಿ: 8ನೇ ಘಟಿಕೋತ್ಸವ ದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಔಷಧ ವಿಜ್ಞಾನ, ಆಡಳಿತ ನಿರ್ವಹಣಾ ಅಧ್ಯಯನ, ಜೀವವಿಜಾnನ, ಜೈವಿಕ ವೈದ್ಯಕೀಯ ನಿಕಾಯಗಳಲ್ಲಿನ ಸ್ನಾತಕ, ಸ್ನಾತಕೋತ್ತರ, ಡಾಕ್ಟರೇಟ್‌ ಹಂತಗಳಲ್ಲಿ 1274 ವಿದ್ಯಾರ್ಥಿಗಳಿಗೆ ಪದವಿ ನೀಡಲಾಯಿತು. ಇದೇ ವೇಳೆ 56 ಪದಕ ಮತ್ತು ಪ್ರಶಸ್ತಿಗಳನ್ನು 40 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಜತೆಗೆ 22 ವಿದ್ಯಾರ್ಥಿಗಳು ಪಿಎಚ್‌.ಡಿ ಸಂಶೋಧನಾ ಪದವಿ, 5 ಮಂದಿ ಡಿಎಂ ಮತ್ತು ಎಂಸಿಎಚ್‌ ವೈದ್ಯಕೀಯ ಸೂಪರ್‌ ಸ್ಪೆಷಾಲಿಟಿ ಪದವಿ ತಮ್ಮದಾಗಿಸಿಕೊಂಡರು. 

ಸುತ್ತೂರುಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜೆಎಸ್‌ಎಸ್‌ ವಿವಿ ಕುಲಪತಿ ಡಾ. ಬಿ. ಸುರೇಶ್‌, ಜೆಎಸ್‌ಎಸ್‌ ಮಹಾವಿದ್ಯಾಪೀಠದ ಮುಖ್ಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಸಿ.ಜಿ. ಬೆಟಸೂರಮಠ, ಕುಲಸಚಿವ ಡಾ.ಬಿ.ಮಂಜುನಾಥ್‌, ಪರೀಕ್ಷಾ ನಿಯಂತ್ರಕ ಡಾ.ಆರ್‌.ವಿಜಯಸಿಂಹ, ಪ್ರಾಂಶುಪಾಲ ಡಾ.ಬಸವನಗೌಡ ಇದ್ದರು.

ಚಿನ್ನದ ಪದಕ ಪಡೆದವರು: ಘಟಿಕೋತ್ಸವದಲ್ಲಿ ಆರ್‌. ಪೂರ್ಣಿಮಾ, ಪವನ್‌ ಕುಲಕರ್ಣಿ, ಬಿ.ಬಿ. ಸವಿತಾರಾಣಿ, ಪೃಥ್ವಿಶ್ರೀ ರವೀಂದ್ರ, ಗೌತಮ್‌ ಕುಮಾರ್‌, ಜಿ.ಸಿ.ನಮ್ರತಾ, ಶ್ರುತಿ ಬಲ್ಲಾ, ಎಂ.ನವ್ಯ, ರಾಜೇಂದ್ರಪ್ರಸಾದ್‌ ಜಂಗ, ಅನುಭವ ವರ್ಮಾ, ಹಿಶಾನಿ ಪಟೇಲ್‌, ಸ್ಪೂರ್ತಿ ಜಿ.ಇಟಗಿ, ಅಖೀಲ ಪೊಚ್ಚಿನಪೆದ್ದಿ, ಕೆ.ಶ್ವೇತಾ, ಎಂ.ನಿಶ್ಚಿತಾ, ಇಸ್ತಾಮಲ್ಲಿಕ್‌, ಅಜಯ್‌ಕೌಶಿಕ್‌, ಕೆ.ಆರ್‌. ಪೂರ್ಣಿಮಾ ಚಂದ್ರನ್‌, ಗದುಪುದಿ ಶಾಲಿನಿ ಸಂಯುಕ್ತ, ದೀಬಾ ಜಾಹೀರ್‌, ಹೆಂಗ್‌ ಜೆನ್‌ ಯಂಗ್‌, ಶ್ರೀಜತಾಸುರ್‌, ರಾಯೇನಿ ಮೋಹನ್‌ ಕೃಷ್ಣ, ಎಸ್‌.ಎಸ್‌.ಮನುಸ್ಮಿತಾ, ಸಮೀರ್‌ ಕುಮಾರ್‌ ಪಾಂಡ, ಅಕೃತಿ ಗರ್ಗ್‌, ಶುಭರಾಜ್‌ ಶಹಾ, ಆರ್‌.ಸೂರ್ಯ, ಟಿ.ವಿನೀತಾ ಫ್ರಾನ್ಸಿಸ್‌, ನೀತು ಬೆನ್ನಿ, ನಿಖೀತಾ ಕೆ.ಹೆಬ್ಲೀ, ಜುನೀತಾ ಅನ್ನ ಬೆನ್ನಿ, ರೈರೋಸ್‌ ರಾಯ್‌, ಅಶ್ವಿ‌ನಿ ಪ್ರೇಮ ಕುಮಾರ್‌, ನಿಮ್ನಾ ಜಾರ್ಜ್‌, ಎಸ್ತರ್‌ ಪಿ.ಎಂಡ್ಜಲ, ಎಂ.ಮಮತಾ, ಜೀಬಾ ಪರ್ವೀನ್‌, ಜಿಯೋರ್ಗ ತಬಿತಾ ಅಲೆಕ್ಸ್‌ ಪದಕ ಪಡೆದುಕೊಂಡರು. 

ಗುಂಡು ಹೊಡೆಯಿರಿ ರಾಜ್ಯದ 8 ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಸರಿಯಾದ ಕ್ರಮದಲ್ಲಿ ದಾಖಲೆ ಸಲ್ಲಿಸಿದರೆ 3 ದಿನಗಳಲ್ಲಿ ಒಪ್ಪಿಗೆ ಸೂಚಿಸಲಾಗುವುದು ಎಂದು ರಾಜ್ಯಪಾಲ ವಿ.ಆರ್‌.ವಾಲಾ ತಿಳಿಸಿದರು. ಘಟಿಕೋತ್ಸವದ ವೇಳೆ ಮಾತನಾಡಿ, ವಿವಿಗಳಿಗೆ ಕುಲಪತಿಗಳನ್ನು ನೇಮಿಸುವಲ್ಲಿ ನಮ್ಮ ಕಚೇರಿಯಿಂದ ಯಾವುದೇ ವಿಳಂಬವಾಗುತ್ತಿಲ್ಲ.
 
ಬದಲಿಗೆ ಸರ್ಕಾರ ಕ್ರಮಬದ್ಧವಾಗಿ ದಾಖಲೆ ಸಲ್ಲಿಸದ ಹಿನ್ನೆಲೆಯಲ್ಲಿ ಹಿಂದಕ್ಕೆ ಕಳುಹಿಸಲಾಗಿದೆ. ವಿವಿಗಳಲ್ಲಿನ ಖಾಲಿ
ಹುದ್ದೆ ಭರ್ತಿ ಮಾಡುವ ತೀರ್ಮಾನ ವಿವಿ ಮಟ್ಟದಲ್ಲೇ ಮಾಡಿಕೊಳ್ಳಬಹುದಾಗಿದೆ ಎಂದ ಅವರು, ವಿವಿಯಲ್ಲಿನ ಖಾಲಿ
ಹುದ್ದೆಯನ್ನು ಅಲ್ಲಿನ ಕುಲಪತಿಗಳೇ ಭರ್ತಿ ಮಾಡುವಂತೆ ದಾವಣಿಗೆರೆ ವಿವಿಗೆ ಪತ್ರ ಬರೆದ ಮೇಲೆ ಭರ್ತಿಗೆ ಮುಂದಾದ
ಕುಲಪತಿ ನಡೆಗೆ ಸರ್ಕಾರ ಹಸ್ತಕ್ಷೇಪಿಸಿದೆ. ಒಂದೊಮ್ಮೆ ವಿದ್ಯಾರ್ಥಿಗಳ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದ್ದರೆ ಸರ್ಕಾರಕ್ಕೆ ಹಾಗೂ ತಮಗೆ ಗುಂಡು ಹೊಡೆಯಿರಿ ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.