ಆಟಿಕೆ ಸ್ಕೂಟರಿನಲ್ಲಿ ಆಸ್ಪತ್ರೆಗೆ ಬಂದ!
Team Udayavani, Mar 18, 2017, 3:50 AM IST
ಹೈದರಾಬಾದ್: ಕೆಲವು ತಿಂಗಳ ಹಿಂದೆ ಒರಿಸ್ಸಾದಲ್ಲಿ ಪತ್ನಿಯ ಶವ ಹೊತ್ತು 10 ಕಿ.ಮೀ. ನಡೆದ ಪತಿಯ ಕಣ್ಣೀರ ಯಾತ್ರೆಯನ್ನು ದೇಶ ಇನ್ನೂ ಮರೆತಿಲ್ಲ. ಅಷ್ಟರಲ್ಲಾಗಲೇ ತೆಲಂಗಾಣದ ಪ್ರತಿಷ್ಠಿತ ಗಾಂಧಿ ಆಸ್ಪತ್ರೆಯಲ್ಲಿನ ಘಟನೆಯೊಂದು ಆಸ್ಪತ್ರೆಗಳ ಅಮಾನವೀಯ ಮುಖದ ದರ್ಶನ ಮಾಡಿಸಿದೆ. ವೀಲ್ಚೇರ್ಗೆ ಲಂಚ ನೀಡಲು ಹಣವಿಲ್ಲದೆ, ಮಗನ ಆಟದ ಸ್ಕೂಟರ್ನಲ್ಲಿ ಅಪ್ಪ ವೈದ್ಯರ ಕೊಠಡಿ ತಲುಪಿದ್ದಾನೆ!
33 ವರ್ಷದ ರಾಜು ಕಳೆದವರ್ಷದ ಆಗಸ್ಟ್ನಲ್ಲಿ ಅಪಘಾತಕ್ಕೀಡಾಗಿ ತಲೆಗೆ, ಕಾಲಿಗೆ ಪೆಟ್ಟುಮಾಡಿಕೊಂಡಿದ್ದರು. ಎರಡು ತಿಂಗಳು ಆಸ್ಪತ್ರೆಯಲ್ಲಿ ದಾಖಲಾಗಿ, ಬಿಡುಗಡೆಯಾಗಿದ್ದ ಅವರು ತಲೆಯ ಸರ್ಜರಿಗಾಗಿ ಇನ್ನೂ ಕಾಯುತ್ತಲೇ ಇದ್ದಾರೆ. “4-5 ಪ್ಯಾಕೆಟ್ ರಕ್ತ ಹೊಂದಿಸುವ ತನಕ ಸರ್ಜರಿ ಮಾಡುವುದಿಲ್ಲ’ ಎಂದು ವೈದ್ಯರು ಹೇಳುತ್ತಿದ್ದಾರೆ. ಪ್ರತಿಸಲ ಆಸ್ಪತ್ರೆಗೆ ಬಂದಾಗಲೂ ವೀಲ್ಚೇರ್ಗೆ 150 ರೂ. ಲಂಚ ನೀಡಬೇಕಾಗಿತ್ತು.
ಆದರೆ, ಕಳೆದ 2-3 ಸಲದಿಂದ ಆಸ್ಪತ್ರೆಗೆ ಬರುತ್ತಿರುವ ರಾಜು ಬಳಿ ಲಂಚ ನೀಡಲು ಹಣವೇ ಇರುತ್ತಿರಲಿಲ್ಲ. ಮಗನ ಆಟಿಕೆಯ ಸ್ಕೂಟರ್ ಬಳಸಿ, ಆಸ್ಪತ್ರೆ ತಲುಪುತ್ತಿದ್ದಾರೆ. “ಬಡ ಕುಟುಂಬ ನಮ್ಮದು. ಪ್ರತಿಸಲ ಆಸ್ಪತ್ರೆಗೆ ಬಂದಾಗಲೂ ಹೇಳಿದಷ್ಟು ರಕ್ತ ಪೂರೈಸಿ, ಆಸ್ಪತ್ರೆಯಲ್ಲಿ ಬೆಡ್ ಇಲ್ಲ ಎನ್ನುತ್ತಿದ್ದಾರೆ. ಹಳ್ಳಿ ಜನ ನಾವು. ಹೈದರಾಬಾದಿನಲ್ಲಿ ಯಾರೂ ಪರಿಚಯವಿಲ್ಲ’ ಎನ್ನುವುದು ರಾಜು ಪತ್ನಿಯ ಪ್ರಶ್ನೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಲೇ ಸಿಎಂ ಕೆ. ಚಂದ್ರಶೇಖರ ರಾವ್ ಈ ಕುರಿತು ತನಿಖೆ ನಡೆಸುವ ವಾಗ್ಧಾನ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು