ಮ.ಪ್ರದೇಶ ಮದ್ರಸಗಳಲ್ಲೂ ಆ.15 ಆಚರಣೆ ಕಡ್ಡಾಯ
Team Udayavani, Aug 13, 2017, 7:40 AM IST
ಭೋಪಾಲ್: ರಾಜ್ಯದ ಎಲ್ಲ ಮದ್ರಸಗಳೂ ಸ್ವಾತಂತ್ರ್ಯದಿನವನ್ನು ಆಚರಿಸುವ ಜತೆಗೆ ಕಡ್ಡಾಯವಾಗಿ ವಿಡೀಯೋ ಚಿತ್ರೀಕರಣ ಮಾಡುವಂತೆ ಉತ್ತರ ಪ್ರದೇಶ ಸರಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಮಧ್ಯಪ್ರದೇಶ ಸರಕಾರ ಕೂಡ ಅಂಥದ್ದೇ ಆದೇಶವೊಂದನ್ನು ಹೊರಡಿಸಿದೆ.
“ಮಧ್ಯಪ್ರದೇಶ ಮದ್ರಸ ಮಂಡಳಿ ಅಡಿಯಲ್ಲಿ ಬರುವ 4,750 ಮದ್ರಸಗಳು ಆ.15ರಂದು ತ್ರಿವರ್ಣ ಧ್ವಜಾರೋಹಣ ಮಾಡುವ ಜತೆಗೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಹಾಗೇ ಅಂದು ರಾಜ್ಯಾದ್ಯಂತ ನಡೆಯುವ “ತಿರಂಗಾ ರ್ಯಾಲಿ’ಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಅಥವಾ ಪ್ರತ್ಯೇಕವಾಗಿ ರ್ಯಾಲಿ ಆಯೋಜಿಸಬೇಕು’ ಎಂದು ಸೂಚಿಸಿದೆ. ಈ ಕುರಿತು ಆ.10ರಂದು ಎಲ್ಲ ಮದ್ರಸಗಳಿಗೆ ಸುತ್ತೋಲೆ ಹೊರಡಿಸಿರುವ ಮಂಡಳಿ, ಸ್ವಾತಂತ್ರ್ಯ ದಿನದ ಕಾರ್ಯಕ್ರಮಗಳ ಫೋಟೋ ತೆಗೆದು ಅವುಗಳನ್ನು ತನಗೆ ಇ-ಮೇಲ್ ಮಾಡುವಂತೆಯೂ ಮದ್ರಸಗಳ ಮುಖ್ಯಸ್ಥರಿಗೆ ತಾಕೀತು ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮದರಸಾ ಮಂಡಳಿ ಮುಖ್ಯಸ್ಥ ಪ್ರೊ| ಸಯೀದ್ ಇಮಾದ್ ಉದ್ದೀನ್, “ತಿರಂಗಾ ರ್ಯಾಲಿಗಳನ್ನು ಆಯೋಜಿಸುವ ಮೂಲಕ ನಮಗೆ ದೇಶದ ಬಗ್ಗೆ ಇರುವ ಪ್ರೀತಿ, ಅಭಿಮಾನವನ್ನು ತೋರ್ಪಡಿಸುವುದು ನಮ್ಮ ಉದ್ದೇಶವಾಗಿದೆ. ಒಂದೊಮ್ಮೆ ನಗರದಲ್ಲಿ ಸಂಘಟನೆಗಳು ರ್ಯಾಲಿ ಆಯೋಜಿಸದಿದ್ದಲ್ಲಿ, ಸ್ವತಃ “ತಿರಂಗಾ ರ್ಯಾಲಿ’ ನಡೆಸುವಂತೆ ಮದ್ರಸಗಳಿಗೆ ಸೂಚಿಸಲಾಗಿದೆ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?