ಪದ್ಮಾವತಿಯನ್ನು ಆಹ್ವಾನಿಸಿದರೆ ಮಮತಾಗೆ ಶೂರ್ಪನಖೀ ಗತಿ: ಬಿಜೆಪಿ
Team Udayavani, Nov 25, 2017, 4:21 PM IST
ಹೊಸದಿಲ್ಲಿ : ಪದ್ಮಾವತಿಯನ್ನು ರಾಜ್ಯಕ್ಕೆ ಆಹ್ವಾನಿಸುವ ಮೂಲಕ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಮಾಯಣದ ಶೂರ್ಪನಖೀಗೆ ಆದ ಗತಿಯನ್ನೇ ಕಾಣಲಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ನಾಯಕ ಸೂರಜ್ ಪಾಲ್ ಅಮು ಎಚ್ಚರಿಕೆ ನೀಡಿದ್ದಾರೆ.
“ರಾಮಾಯಣದ ಶೂರ್ಪನಖೀಯ ಹಾಗೆ ರಾಕ್ಷಸೀ ಪ್ರವೃತ್ತಿ ಇರುವ ಕೆಲವು ಮಹಿಳೆಯರಿದ್ದಾರೆ. ಶೂರ್ಪನಖೀಯ ಮೂಗನ್ನು ಕತ್ತರಿಸುವ ಮೂಲಕ ಲಕ್ಷ್ಮಣನು ಆಕೆಗೆ ಸರಿಯಾದ ಚಿಕಿತ್ಸೆಯನ್ನು ನೀಡಿದ. ಇದನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮರೆಯಬಾರದು’ ಎಂದು ಸೂರಜ್ ಹೇಳಿದರು.
ಮಮತಾ ಬ್ಯಾನರ್ಜಿ ಅವರು ನಿನ್ನೆ ಶುಕ್ರವಾರವಷ್ಟೇ ವಿವಾದಿತ ‘ಪದ್ಮಾವತಿ ಚಿತ್ರವನ್ನು ಅದರ ಚಿತ್ರ ತಂಡವನ್ನು ತಮ್ಮ ಸರಕಾರ ರಾಜ್ಯಕ್ಕೆ ಆಹ್ವಾನಿಸಲು ಸಿದ್ಧವಿದೆ; ಅವರಿಗಾಗಿ ನಾವು ಇಲ್ಲಿ ವಿಶೇಷ ವ್ಯವಸ್ಥೆಯನ್ನು ರೂಪಿಸಿಕೊಡುತ್ತೇವೆ’ ಎಂದು ಹೇಳಿದ್ದರು.
ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ವಿವಾದಿತ ಪದ್ಮಾವತಿ ಚಿತ್ರವನ್ನು ಶ್ರೀ ರಾಜಪೂತ ಕರಣಿ ಸೇನೆ ಮಾತ್ರವಲ್ಲದೆ ಅನೇಕ ರಾಜಕೀಯ ನಾಯಕರು ಮತ್ತು ಹಿಂದಿನ ರಾಜ ಕುಟುಂಬದ ಸದಸ್ಯರು ಖಂಡಿಸಿ ಅದರ ಬಿಡುಗಡೆಗೆ ನಿಷೇಧ ಹೇರುವಂತೆ ಆಗ್ರಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ