British Airwaysನಿಂದ SBI ಮಾಜಿ ಮುಖ್ಯಸ್ಥೆಗೆ ನೆಲಹಾಸಿನ ಭಾಗ್ಯ
Team Udayavani, Dec 13, 2017, 3:30 PM IST
ಮುಂಬಯಿ : ಮುಂಬಯಿ – ಲಂಡನ್ ಹಾರಾಟದ ಬ್ರಿಟಿಷ್ ಏರ್ ವೇಸ್ ವಿಮಾನ ಅಜರ್ಬೈಜಾನ್ನ ರಾಜಧಾನಿ ಬಾಕು ವಿನಲ್ಲಿ ತುರ್ತಾಗಿ ಇಳಿದಾಗ ಸುಮಾರು 19 ತಾಸುಗಳ ಕಾಲ ವಿಮಾನ ನಿಲ್ದಾಣದಲ್ಲೇ ಉಳಿದು ರಾತ್ರಿ ಪೂರ್ತಿ ವೇಟಿಂಗ್ ರೂಮ್ ನ ನೆಲ ಹಾಸಿನಲ್ಲೇ ಮಲಗಬೇಕಾದ ದುಸ್ಥಿತಿಗೆ ಒಳಗಾದ ಎಲ್ಲ ಪ್ರಯಾಣಿಕರ ಪೈಕಿ ಭಾರತೀಯ ಸ್ಟೇಟ್ ಬ್ಯಾಂಕ್ ಮಾಜಿ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಕೂಡ ಒಬ್ಬರಾಗಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಮುಂಬಯಿ – ಲಂಡನ್ ಹಾರಾಟಾದ ಬ್ರಿಟಿಷ್ ಏರ್ ವೇಸ್ ವಿಮಾನದ ಮೊದಲ ದರ್ಜೆ ಕ್ಯಾಬಿನ್ನಲ್ಲಿ ಹೊಗೆ ಕಾಣಿಸಿಕೊಂಡದ್ದೇ ವಿಮಾನದ ಎಮರ್ಜೆನ್ಸಿ ಲ್ಯಾಂಡಿಂಗ್ ಗೆ ಕಾರಣವಾಯಿತು.
ಹೊಗೆ ಕಾಣಿಸಿಕೊಂಡ ಒಡನೆಯೇ ಬಿಎ 198 ಸಂಖ್ಯೆಯ ಈ ವಿಮಾನವನ್ನು “ಸ್ಕ್ವಾಕಿಂಗ್ 7700′ ಎಂಬ ಸಂಕೇತನಾಮದೊಂದಿಗೆ (ಎಮರ್ಜೆನ್ಸಿ ಲ್ಯಾಂಡಿಂಗ್ ಸಂದರ್ಭದಲ್ಲಿ ನೀಡಲಾಗುವ ವಾಯುಯಾನದ ಕೋಡ್) ಬಾಕು ವಿನಲ್ಲಿ ಇಳಿಸಲಾಯಿತು. ಹೀಗೆ ತುರ್ತು ಅವತರಣ ಕೈಗೊಳ್ಳುವ ಸಂಕೇತ ನಾಮದ ವಿಮಾನಕ್ಕೆ ಎಲ್ಲ ರೀತಿಯ ತುರ್ತು ನೆರವನ್ನು ನೀಡುವುದು ಆ ಪ್ರದೇಶದ ವಾಯು ಸಾರಿಗೆ ನಿಯಂತ್ರಣದ ಕೇಂದ್ರದ ಜವಾಬ್ದಾರಿಯಾಗಿರುತ್ತದೆ.
ಮುಂಬಯಿಯಿಂದ ಆಗಸಕ್ಕೆ ನೆಗೆದಿದ್ದ ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡಾಗ ಅದು ಪಾಕ್ ವಾಯು ಪ್ರದೇಶ ವ್ಯಾಪ್ತಿಯ ಬಲೂಚಿಸ್ಥಾನದ ಮೇಲ್ಗಡೆಯಿಂದ ಹಾರುತ್ತಿತ್ತು. ಬಳಿಕ ಅದು ಇರಾನ್ ವಾಯು ಪ್ರದೇಶವನ್ನು ಪ್ರವೇಶಿಸಿತು. ತುರ್ತು ಅವತರಣದ ಕರೆಯನ್ನು ಹೊರಡಿಸಲಾದಾಗ ಅದು ಇರಾನ್ ವಾಯು ಪ್ರದೇಶದಿಂದ ನಿರ್ಗಮಿಸುತ್ತಿತ್ತು. ಅಂತಿಮವಾಗಿ ಅದನ್ನು ಅಜರ್ಬೈಜಾನ್ನ ರಾಜಧಾನಿ ಬಾಕು ವಿನಲ್ಲಿ ಇಳಿಸಲಾಯಿತು.
ವಿಮಾನದಿಂದ ಇಳಿಸಲ್ಪಟ್ಟು ನಿಲ್ದಾಣದಲ್ಲಿ ಕೂಡಿ ಹಾಕಲ್ಪಟ್ಟ ಪ್ರಯಾಣಿಕರಿಗೆ ಎಲ್ಲ ಆವಶ್ಯಕ ಸೇವೆ, ಸೌಕರ್ಯಗಳನ್ನು ತಾನು ಒದಗಿಸಿದ್ದೇನೆ ಎಂದು ಬ್ರಿಟಿಷ್ ಏರ್ ವೇಸ್ ಹೇಳಿಕೊಂಡಿತ್ತು.
ಆದರೆ ವಾಸ್ತವದಲ್ಲಿ ಬ್ರಿಟಿಷ್ ಏರ್ ವೇಸ್ ಯಾವುದೇ ಸಂತ್ರಸ್ತ ಪ್ರಯಾಣಿಕರಿಗೆ ಆಹಾರವನ್ನಾಗಲೀ ಅಗತ್ಯ ಔಷಧಗಳನ್ನಾಗಲೀ ಪೂರೈಸಲಿಲ್ಲ ಎಂದು ಪ್ರಯಾಣಿಕರು ತಾವು ಪಟ್ಟ ಬವಣೆಯನ್ನು ಮಾಧ್ಯಮಕ್ಕೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್