ಮಹಾತ್ಮ ಗಾಂಧಿ ಒಬ್ಬ ಜಾತಿವಾದಿ: ಲೇಖಕಿ ಸುಜಾತ
Team Udayavani, Jan 30, 2018, 1:37 PM IST
ಜೈಪುರ: ಮಹಾತ್ಮ ಗಾಂಧಿ ಒಬ್ಬ ಜಾತಿವಾದಿ. ಜನಾಂಗೀಯ ವಾದಿ. ದಲಿತರ ಅಭಿವೃದ್ಧಿ ಬಗ್ಗೆ ಅವರು ನಾಟಕೀಯವಾಗಿ ಮಾತನಾಡುತ್ತಿದ್ದರಷ್ಟೇ. ತಮ್ಮ ರಾಜಕೀಯ ಲಾಭಕ್ಕಾಗಿ ಅವರು ಹಾಗೆ ಮಾಡುತ್ತಿದ್ದರು’ ಎಂದು ಭಾರತೀಯ ಮೂಲದ ಅಮೆರಿಕದ ಸಾಹಿತಿ
ಸುಜಾತ ಗಿಡ್ಲಾ ಹೇಳಿದ್ದಾರೆ.
ಜೈಪುರ ಸಾಹಿತ್ಯೋತ್ಸವದಲ್ಲಿ ತಾವು ಮಾಡಿದ ಭಾಷಣದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಅವರು, “ಗಾಂಧೀಜಿ, ಭಾರತದಲ್ಲಿದ್ದ ಜಾತಿ ಪದ್ಧತಿಯನ್ನು ಕಾಪಾಡುವ ಇರಾದೆ ಹೊಂದಿದ್ದರು. ಆದರೆ, ಬ್ರಿಟಿಷ್ ಸರ್ಕಾರದಲ್ಲಿ ಮುಸ್ಲಿಮರಿಗಿಂತ ಹೆಚ್ಚು ಪ್ರಾತಿನಿಧ್ಯ ಹೊಂದಲು ಹಿಂದೂಗಳಿಗೆ ಬಹುಮತದ ಅಗತ್ಯವಿತ್ತು.
ಹಾಗಾಗಿಯೇ, ಅವರು ಹಿಂದೂಗಳನ್ನು ಒಗ್ಗೂಡಿಸಲು ದಲಿತರ ಅಭಿವೃದ್ಧಿಯ ಢೋಂಗಿತನ ಪ್ರದರ್ಶಿಸಿದರು. ರಾಜಕಾರಣಿಗಳು ಸಾಮಾನ್ಯವಾಗಿ ದಲಿತರ ಪರ ದನಿಯೆತ್ತುವಾಗ ಇಂಥ ರಾಜಕೀಯ ಲಾಭಗಳೇ ಇರುತ್ತವಷ್ಟೆ’ ಎಂದು ದಲಿತರೇ ಆಗಿರುವ ಸುಜಾತ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ