ಚಂದ್ರಗ್ರಹಣದಂದು ಶಿಶು ಬಲಿ ? ಮನೆ ಟೆರೇಸ್‌ನಲ್ಲಿ ಶಿರೋಭಾಗ ಪತ್ತೆ


Team Udayavani, Feb 3, 2018, 3:47 PM IST

Child-sacrifice-700.jpg

ಹೈದರಾಬಾದ್‌ : 150 ವರ್ಷಗಳಿಗೆ ಒಮ್ಮೆ ಸಂಭವಿಸುವ ಖಗ್ರಾಸ ಚಂದ್ರಗ್ರಹಣಕ್ಕೆ ಸಂಬಂಧಿಸಿದ ಮೂಢನಂಬಿಕೆಯ ಭಾಗವಾಗಿ ಹಸುಳೆಯೊಂದನ್ನು ಬಲಿ ನೀಡಲಾಗಿದೆಯೇ ಎಂಬ ಬಗ್ಗೆ ಹೈದರಾಬಾದ್‌ ಪೊಲೀಸರು ಈಗ ತೀವ್ರ ತನಿಖೆ ನಡೆಸುತ್ತಿದ್ದಾರೆ.

ಹೈದರಾಬಾದಿನ ಚಿಲುಕಾ ನಗರದಲ್ಲಿನ ಮನೆಯೊಂದರ ಟೆರೇಸ್‌ ಮೇಲೆ ಒಂದೆಡೆ ಮೂಲೆಯಲ್ಲಿ  ಕಸದ ತೊಟ್ಟಿಯಲ್ಲಿ ಅಡಗಿಸಿಡಲಾಗಿದ್ದ ಶಿಶುವಿನ ಛೇದಿತ ಶಿರೋಭಾಗ ಪೆ.1ರ ಗುರುವಾರದಂದು ಪತ್ತೆಯಾಗಿದೆ. 

ಈ ಕಟ್ಟಡದಲ್ಲಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಮಹಿಳೆಯೋರ್ವರು ಬಟ್ಟೆ ಒಣಗಿಸಲೆಂದು ಟೆರೇಸ್‌ಗೆ ಹೋಗಿದ್ದಾಗ ಅಲ್ಲಿ ಆಕೆಗೆ ಮಗುವಿನ ಛೇದಿತ ಶಿರೋಭಾಗ ಪತ್ತೆಯಾಯಿತು. ಅದನ್ನು ಕಂಡು ಗಾಬರಿಯಾಗಿ ಮಹಿಳೆಯು ಬೊಬ್ಬಿಟ್ಟಾಗ ನೆರೆಕರೆಯವರೆಲ್ಲ ಧಾವಿಸಿ ಬಂದು ಈ ದೃಶ್ಯವನ್ನು ಕಂಡು ದಿಗಿಲುಗೊಂಡರು. 

ಒಡನೆಯೇ ಪೊಲೀಸರನ್ನು ಎಚ್ಚರಿಸಲಾಗಿ ಅವರು ಸ್ಥಳಕ್ಕೆ ಭೇಟಿಕೊಟ್ಟರು. ಶಿರಚ್ಛೇದನಕ್ಕೆ ಗುರಿಯಾಗಿದ್ದ ಮಗುವ ಎರಡು ಅಥವಾ ಮೂರು ತಿಂಗಳಿನದ್ದಾಗಿರಬಹುದೆಂದು ಅಂದಾಜಿಸಲಾಗಿದೆ. 

ಕ್ಯಾಬ್‌ ಡ್ರೈವರ್‌ ಆಗಿರುವ ಮಹಿಳೆಯ ಅಳಿಯ ರಾಜ್‌ಶೇಖರ್‌ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಆತನನ್ನು ತೀವ್ರವಾಗಿ ಪ್ರಶ್ನಿಸುತ್ತಿದ್ದಾರೆ. ಇದೇ ರೀತಿ ಇನ್ನಿಬ್ಬರು ನರೆಕರೆಯ ನರಹರಿ ಮತ್ತು ಆತನ ಪುತ್ರ ರಂಜಿತ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 

ಪೊಲೀಸ್‌ ಶ್ವಾನವನ್ನು ಕರೆಸಿಕೊಂಡಾಗ ಅದು ನರಹರಿ ಅವರ ಮನೆಯೊಳಗಿನ ಡಸ್ಟ್‌ಬಿನ್‌ ಮೂಸಿ ನೋಡಿದೆ. ನರಹರಿ ಮತ್ತು ರಂಜಿತ್‌ ಆಗೀಗ ಎಂಬಂತೆ ಮೂಢನಂಬಿಕೆಯ ಪೂಜೆಗಳನ್ನು ಮನೆಯಲ್ಲಿ ನಡೆಸಿದವರಾಗಿದ್ದಾರೆ. 

ಟೆರೇಸ್‌ನಲ್ಲಿ ಶಿರಚ್ಛೇದಿತ ಮಗುವಿನ ರಕ್ತದ ಕಲೆಗಳು ಕಂಡುಬಂದಿಲ್ಲ; ಮಗುವನ್ನು ಬೇರೆಲ್ಲೋ ಬಲಿಕೊಟ್ಟ ಬಳಿಕ ಅದರ ತಲೆಯನ್ನು ಇಲ್ಲಿ ತಂದಿಡಲಾಗಿದೆ ಎಂದು ಶಂಕಿಸಲಾಗಿದೆ. ಮೃತ ಮಗುವಿನ ದೇಹದ ಭಾಗಕ್ಕಾಗಿ ಪೊಲೀಸರೀಗ ಹುಡುಕಾಡ ನಡೆಸಿದ್ದಾರೆ. 

ಈ ಕೃತ್ಯಕ್ಕೆ ಮಾಟ-ಮಂತ್ರಗಾರರು ನನ್ನ ಮನೆಯ ಟೆರೇಸನ್ನೇ ಯಾಕೆ ಆಯ್ಕೆ ಮಾಡಿದರು ಎಂದು ಘಟನೆಯಿಂದ ತೀವ್ರ ಆಘಾತಗೊಂಡ ಮನೆಯೊಡತಿ ಬಾಲಲಕ್ಷ್ಮೀ ಕಣ್ಣೀರು ಸುರಿಸುತ್ತಾ ಪೊಲೀಸರಿಗೆ ಪ್ರಶ್ನಿಸುತ್ತಿದ್ದಳು.

ಟಾಪ್ ನ್ಯೂಸ್

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.