ಆರೆಸ್ಸೆಸ್ ಮಾನಹಾನಿ ಪ್ರಕರಣ: ರಾಹುಲ್ ವಿರುದ್ಧ ದೋಷ ನಿಗದಿ
Team Udayavani, Jun 13, 2018, 11:29 AM IST
ಥಾಣೆ: “ಮಹಾತ್ಮಾ ಗಾಂಧಿಯನ್ನು ಆರೆಸ್ಸೆಸ್ನವರೇ ಕೊಂದಿದ್ದು’ ಎಂಬ ವಿವಾದಾತ್ಮಕ ಹೇಳಿಕೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ದುಬಾರಿಯಾಗಿ ಪರಿಣಮಿಸಿದೆ. ಈ ಹೇಳಿಕೆ ಕುರಿತು ರಾಹುಲ್ ವಿರುದ್ಧ ದಾಖಲಾಗಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಮಹಾರಾಷ್ಟ್ರದ ಭಿವಂಡಿಯ ನ್ಯಾಯಾಲಯವು ರಾಹುಲ್ ವಿರುದ್ಧ ದೋಷ ನಿಗದಿ ಮಾಡಿದೆ. ಹೀಗಾಗಿ, ಸದ್ಯದಲ್ಲೇ ರಾಹುಲ್ ವಿಚಾರಣೆ ಎದುರಿಸಬೇಕಾಗುತ್ತದೆ.
ಕೋರ್ಟ್ ಆದೇಶದಂತೆ ಮಂಗಳವಾರ ಸಿವಿಲ್ ಜಡ್ಜ್ ಎ.ಐ. ಶೇಖ್ ಮುಂದೆ ರಾಹುಲ್ ಗಾಂಧಿ ಹಾಜರಾದರು. ಈ ವೇಳೆ, ರಾಹುಲ್ ವಿರುದ್ಧದ ಆರೋಪಗಳನ್ನು ಓದಿ ಹೇಳಿದ ಜಡ್ಜ್, “ಈ ಆರೋಪಗಳನ್ನು ನೀವು ಒಪ್ಪುತ್ತೀರಾ’ ಎಂದು ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ರಾಹುಲ್, “ನಾನು ತಪ್ಪು ಮಾಡಿಲ್ಲ’ ಎಂದರು. ಬಳಿಕ ನ್ಯಾ. ಶೇಖ್ ಅವರು, ರಾಹುಲ್ ವಿರುದ್ಧದ ಆರೋಪಗಳನ್ನು ನಿಗದಿಮಾಡಿ, ವಿಚಾರಣೆಯನ್ನು ಆ.10ಕ್ಕೆ ಮುಂದೂಡಿದರು. ಆ.10ರಿಂದ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧದ ವಿಚಾರಣೆ ಆರಂಭವಾಗಲಿದೆ.
ಚುನಾವಣಾ ರ್ಯಾಲಿಯೊಂದರಲ್ಲಿ ರಾಹುಲ್ ಮಾಡಿದ್ದ ಭಾಷಣದ ಹಿನ್ನೆಲೆಯಲ್ಲಿ ಆರೆಸ್ಸೆಸ್ ಸದಸ್ಯ ರಾಜೇಶ್ ಕುಂಟೆ ಎಂಬವರು 2014ರಲ್ಲಿ ರಾಹುಲ್ ವಿರುದ್ಧ ಮಾನಹಾನಿ ಕೇಸು ದಾಖಲಿಸಿದ್ದರು. ಇದನ್ನು ವಜಾ ಮಾಡುವಂತೆ ಕೋರಿ ರಾಹುಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಅವರ ಮನವಿ ಯನ್ನು 2016ರ ಜುಲೈನಲ್ಲಿ ಕೋರ್ಟ್ ತಳ್ಳಿಹಾಕಿತ್ತು.
2 ವರ್ಷ ಜೈಲು?: ರಾಹುಲ್ ವಿರುದ್ಧದ ಆರೋಪ ಸಾಬೀತಾದರೆ, ಗರಿಷ್ಠ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ, ಅಥವಾ ಎರಡನ್ನೂ ವಿಧಿಸಲಾಗುತ್ತದೆ. ಮಂಗಳವಾರ ಕೋರ್ಟ್ನಿಂದ ಹೊರಬಂದ ಬಳಿಕ ಮಾತನಾಡಿದ ರಾಹುಲ್, “ಬಿಜೆಪಿ ಮತ್ತು ಆರೆಸ್ಸೆಸ್ ನನ್ನ ವಿರುದ್ಧ ಎಷ್ಟೇ ಕೇಸುಗಳನ್ನು ಬೇಕಿದ್ದರೂ ದಾಖಲಿಸಲಿ. ನಮ್ಮದು ಸೈದ್ಧಾಂತಿಕ ಹೋರಾಟ. ನಾವು ಅವರ ವಿರುದ್ಧ ಹೋರಾಡಿ, ಗೆಲ್ಲುತ್ತೇವೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?