ಕದ್ದ ಹಣ ಆರೆಸ್ಸೆಸ್ಗೆ: ರಾಗಾ
Team Udayavani, Jul 24, 2018, 6:00 AM IST
ಹೊಸದಿಲ್ಲಿ: ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಆರೆಸ್ಸೆಸ್ಗೆ ಸಂಬಂಧಿಸಿದ ಎಲ್ಲ ಸಂಸ್ಥೆಗಳೂ ಅಗಾಧವಾಗಿ ಬೆಳೆಯುತ್ತವೆ. ಖಜಾನೆಯಿಂದ ಹಣವನ್ನು ಬಿಜೆಪಿ ಸರಕಾರ ಕದ್ದು, ಸಾವಿರಾರು ಆರೆಸ್ಸೆಸ್ ಅಂಗಸಂಸ್ಥೆಗಳಿಗೆ ನೀಡುತ್ತದೆ. ಇದನ್ನು ನೀವೂ ಕಲಿತುಕೊಳ್ಳಿ… ಹೀಗೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ನಡೆದ ಪಕ್ಷದ ಕಾರ್ಯಕಾರಿಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ಈ ಹೇಳಿಕೆಯನ್ನು ಆಧರಿಸಿ ಪಕ್ಷದ ಮೇಲೆ ಆರೆಸ್ಸೆಸ್ ಮಾನನಷ್ಟ ಮೊಕದ್ದಮೆ ದಾಖಲಿಸಬಹುದು ಎಂಬ ಭೀತಿಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ರಾಹುಲ್ ಭಾಷಣದ ವೀಡಿಯೋವನ್ನು ಅಳಿಸಿಹಾಕಲಾಗಿದೆ ಎನ್ನಲಾಗಿದೆ. ಇದು ಭಾರಿ ವಿವಾದಾತ್ಮಕವಾಗಬಹುದಾದ ಸಾಧ್ಯತೆಯಿದ್ದು, ಮುಜುಗರದಿಂದ ತಪ್ಪಿಸಿಕೊಳ್ಳಲು ಪಕ್ಷ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ನಾವೂ ಈ ವಿಧಾನವನ್ನು ಅನುಸರಿಸಬೇಕು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಮಗೆ ಸಹಾಯ ಮಾಡುತ್ತೀರೋ ಇಲ್ಲವೋ ಎಂದು ಕಾರ್ಯಕರ್ತರು ನನ್ನನ್ನು ಕೇಳುತ್ತಾರೆ. ಹಿಂದೆ ಬುಡಕಟ್ಟು ಜನರಲ್ಲಿ ಯಾರಿಗೆ ಮತ ಹಾಕುತ್ತೀರಿ ಎಂದು ಕೇಳಿದರೆ ಕಾಂಗ್ರೆಸ್ ಎಂದು ಹೇಳುತ್ತಿದ್ದರು. ಆದರೆ ಈಗ ಸನ್ನಿವೇಶ ಬದಲಾಗಿದೆ. ಅವರು ಬಿಜೆಪಿಗೆ ಮತ ಹಾಕುತ್ತಿದ್ದಾರೆ. ಬಿಜೆಪಿ ಮತ್ತು ಆರೆಸ್ಸೆಸ್ ಅವರ ಬಳಿ ತೆರಳಿ ಬ್ರೇನ್ವಾಶ್ ಮಾಡಿದ್ದಾರೆ.
ನಾವೂ ಕೂಡ ಬುಡಕಟ್ಟು ಜನರ ಬಳಿ ತೆರಳಿ, ಪುನಃ ಅವರ ಮತ ಗಳಿಸಬೇಕಿದೆ ಎಂದು ರಾಹುಲ್ ಈ ವಿಡಿಯೋದಲ್ಲಿ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ