ದಿಲ್ಲಿ: ಮುಸುಕುಧಾರಿಗಳಿಂದ ಸರಣಿ ಇರಿತ: ಇಬ್ಬರ ಸಾವು; 6 ಮಂದಿಗೆ ಗಾಯ
Team Udayavani, Aug 31, 2018, 11:11 AM IST
ಹೊಸದಿಲ್ಲಿ : ದಿಲ್ಲಿಯ ಹೊರವಲಯದ ಮಂಗೋಲ್ಪುರಿ ಪ್ರದೇಶದಲ್ಲಿ ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಜನರನ್ನು ಕಂಡ ಕಂಡಲ್ಲಿ ಇರಿದ ಪರಿಣಾಮವಾಗಿ ಇಬ್ಬರು ಮೃತಪಟ್ಟು ಕನಿಷ್ಠ ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಮುಸುಕುಧಾರಿ ವ್ಯಕ್ತಿಗಳಿಬ್ಬರಿಂದ ನಿನ್ನೆ ಬುಧವಾರ ಹುಚ್ಚಾಪಟ್ಟೆ ಇರಿತದ ದುಷ್ಕೃತ್ಯ ನಡೆದಿದ್ದು, ಪೊಲೀಸರು ನಡೆಸಿರುವ ಆರಂಭಿಕ ತನಿಖೆಯ ಪ್ರಕಾರ ಈ ಪ್ರದೇಶದಲ್ಲಿನ ಎರಡು ವಿರೋಧಿ ಗುಂಪುಗಳ ನಡುವಿನ ವೈಷಮ್ಯದ ಫಲವಾಗಿ ಈ ಘಟನೆ ನಡೆದಿದೆ.
ತಮ್ಮ ಮನೆಯ ಹೊರಗೆ ನಡೆದುಕೊಂಡು ಹೋಗುತ್ತಿದ್ದ ಕರಣ್ ವೀರ್ (47) ಮತ್ತು ದಿನೇಶ್ (32) ಎಂಬವರು ಇಬ್ಬರು ಮುಸುಕುಧಾರಿಗಳ ಇರಿತದಿಂದ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಅದಾಗಿ ಈ ಮುಸುಕುಧಾರಿಗಳು ಈ ಪ್ರದೇಶದಿಂದ ಓಡಿ ಹೋಗುವ ಮುನ್ನ ವಿನಯ್, ಇರ್ಷಾದ್ ಮತ್ತು ಇನ್ನಿಬ್ಬರು ವ್ಯಕ್ತಿಗಳನ್ನು ಕೂಡ ಇರಿದರು.
ದಿಲ್ಲಿ ಜಲ ಮಂಡಳಿಯ ಉದ್ಯೋಗಿಯಾಗಿರುವ ಸುರೇಶ್ ಊಟ ಮುಗಿಸಿ ತಮ್ಮ ಮನೆಯ ಹೊರಗೆ ಕುಳಿತಿದ್ದಾಗ ಅವರನ್ನು ಮುಸುಕುಧಾರಿಗಳು ಇರಿತದರು.
ಇರಿತಕ್ಕೆ ಒಳಗಾದ ಯಾರೂ ಕೂಡ ಈ ವರೆಗೆ ಯಾವುದೇ ಕ್ರಿಮಿನಲ್ ದಾಖಲೆ ಹೊಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ತು ದಿನಗಳ ಹಿಂದೆ ಈ ಪ್ರದೇಶದ ಮೇಲಿನ ಪಾರಮ್ಯಕ್ಕಾಗಿ ಎರಡು ವಿರೋಧಿ ಗುಂಪುಗಳ ನಡುವೆ ಮಾರಾಮಾರಿ ನಡೆದು ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದ . ಆತ ಅನಂತರ ಕೊನೆಯುಸಿರೆಳೆದಿದ್ದ.
ಈತನ ಸಹಚರರೇ ಈ ದಾಳಿಗೆ ಕಾರಣರಾದವರನ್ನು ಗುರುತಿಸಿ ಈಗ ಎದುರಾಳಿಗಳ ಮೇಲೆ ಸರಣಿ ಇರಿತ ನಡೆಸಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿ ಪೊಲೀಸರು ಕೆಲವರನು ವಶಕ್ಕೆ ತೆಗೆದುಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ