ಉತ್ತರ ಪ್ರದೇಶ ಮಳೆಯಬ್ಬರ: ಒಂದೇ ದಿನ 16 ಬಲಿ
Team Udayavani, Sep 3, 2018, 1:00 PM IST
ಲಕ್ನೋ/ಶಿಮ್ಲಾ: ಉತ್ತರ ಪ್ರದೇಶ ದಾದ್ಯಂತ ಮತ್ತೆ ಮಳೆಯ ಅಬ್ಬರ ತೀವ್ರಗೊಂಡಿದ್ದು, ಒಂದೇ ದಿನದಲ್ಲಿ 16 ಮಂದಿ ಮೃತ ಪಟ್ಟು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿ ದ್ದಾರೆ. ಇನ್ನೂ 2 ದಿನಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಶಹಜಹಾನ್ಪುರವೊಂದರಲ್ಲೇ ಶನಿವಾರ ರಾತ್ರಿ ಸಿಡಿಲಿಗೆ ಕನಿಷ್ಠ 6 ಮಂದಿ ಬಲಿಯಾಗಿದ್ದು, 7 ಮಂದಿ ಗಾಯಗೊಂಡಿ ದ್ದಾರೆ. ಸೀತಾಪುರ ಜಿಲ್ಲೆಯಲ್ಲಿ ಮೂವರು, ಔರಯ್ನಾ ಮತ್ತು ಅಮೇಠಿಯಲ್ಲಿ ತಲಾ ಇಬ್ಬರು, ಲಖೀಂಪುರ ಖೇರಿ, ರಾಯ ಬರೇಲಿ, ಉನ್ನಾವ್ನಲ್ಲಿ ತಲಾ ಒಬ್ಬರು ಮಳೆ ಸಂಬಂಧಿ ದುರಂತಗಳಿಗೆ ಬಲಿಯಾಗಿದ್ದಾರೆ. 18 ಜಾನುವಾರುಗಳೂ ಅಸುನೀಗಿದ್ದು, 461 ಮನೆಗಳು ಹಾನಿಗೀಡಾಗಿವೆ.
ಡೋಪ್ಲಾರ್ ರೇಡಾರ್
ಇದೇ ವೇಳೆ, ಹಿಮಾಚಲ ಪ್ರದೇಶ ದಲ್ಲಿ ಮೂರು ಡೋಪ್ಲರ್ ರೇಡಾರ್ಗಳು, ಸ್ನೋ ಗೇಜರ್ಗಳು ಹಾಗೂ ಅಟೋಮ್ಯಾಟಿಕ್ ಹವಾಮಾನ ಕೇಂದ್ರಗಳನ್ನು ನಿರ್ಮಿಸುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಇವುಗಳ ಮೂಲಕ ಹವಾಮಾನ, ಹಿಮಪಾತ ಹಾಗೂ ಭೂಕುಸಿತಗಳ ಕುರಿತು ನಿಖರ ಮಾಹಿತಿ ಪಡೆಯಬಹುದಾಗಿದೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ